Kannadathi Serial: ಹರ್ಷನ ಮೇಲೆ ಭುವಿ ಅಸಮಾಧಾನ; ಸಾನಿಯಾಳನ್ನು ನಂಬುತ್ತೀರಾ, ಗಂಡನನ್ನು ನಂಬಲ್ವಾ ಅಂತ ತರಾಟೆಗೆ ತೆಗೆದುಕೊಂಡ ಅಭಿಮಾನಿಗಳು; ಇಷ್ಟಕ್ಕೂ ಆಗಿದ್ದೇನು ಗೊತ್ತೇ?

Kannadathi Serial: ಕನ್ನಡತಿ ಧಾರಾವಾಹಿಯ ಅಂತಿಮ ಅಧ್ಯಾಯ ಇಂದಿನಿಂದ ಪ್ರಸಾರವಾಗುತ್ತಿದೆ. ಇದೇ ದುಃಖದಲ್ಲಿಯೇ ಅಭಿಮಾನಿಗಳು ಕನ್ನಡತಿ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದಾರೆ. ಅಮ್ಮಮನ ಸಾವಾದ ನಂತರ ಅಭಿಮಾನಿಗಳು ಬಹಳ ಬೇಸರಗೊಂಡಿದ್ದರು. ಇಷ್ಟು ಬೇಗ ಈ ಪಾತ್ರವನ್ನು ಯಾಕೆ ಮುಗಿಸಿದ್ದೀರಿ ಅಂತ ನಿರ್ದೇಶಕರನ್ನ ಪ್ರಶ್ನೆ ಮಾಡಿದ್ದರು. ಇದೀಗ ಧಾರವಾಹಿ ಮುಗಿದು ಹೋಗುತ್ತಿದೆ ಹಾಗಾಗಿ ಕನ್ನಡತಿ ಅಭಿಮಾನಿಗಳಲ್ಲಿ ಬೇಸರ ಮನೆಮಾಡಿದೆ.

ಭಾರತೀಯರಿಗೆ ಹ್ಯಾಪಿ ಎಂಡಿಂಗ್ ಅಂದ್ರೆ ತುಂಬಾನೇ ಇಷ್ಟ ಹಾಗಾಗಿ ಕನ್ನಡತಿಯಲ್ಲಿಯೂ ಜನ ಇದನ್ನೇ ನಿರೀಕ್ಷೆ ಮಾಡುತ್ತಿದ್ದಾರೆ. ಆದರೆ ಅಂತಿಮ ಅಧ್ಯಾಯದ ಆರಂಭದಲ್ಲಿಯೇ ನಿರ್ದೇಶಕರು ಮತ್ತೆ ಟ್ವಿಸ್ಟ್ ಕೊಟ್ಟಿದ್ದಾರೆ. ಹರ್ಷ ಬಹಳ ಶ್ರಮ ಪಟ್ಟು ನಿರ್ಮಿಸಿದ ಕಾಫಿ ಶಾಪ್ ಓಪನಿಂಗ್ ಆಗೋದಕ್ಕೆ ಲ್ಯಾಂಡ್ ಲಾರ್ಡ್ ತಕರಾರು ಎತ್ತಿದ್ದ. ಅವನ ಮಾತಿನಂತೆ ಆತನಿಗೆ ಒಂದಿಷ್ಟು ಹಣವನ್ನು ಕ್ಯಾಶ್ ಆಗಿ ಕೊಡಬೇಕಿತ್ತು. ಈ ಡೀಲ್ ಮಾಡಿಕೊಂಡು ಬರಲು ಭುವಿ ಸಾನಿಯಾಗಿ ಕೆಲಸ ಒಪ್ಪಿಸುತ್ತಾಳೆ. ಸಾನಿಯಾ ಈ ಕೆಲಸ ಮಾಡಿ ಮುಗಿಸಿದ್ದಾಳೆ. ಆದರೆ ಆಕೆ ಅಷ್ಟು ದೊಡ್ಡ ಮೊತ್ತದ ಹಣವನ್ನು ತೆಗೆದುಕೊಂಡು ಎಲ್ಲಿ ಹೋಗಿದ್ದಾಳೆ ಎಂಬುದೇ ಪತ್ತೆ ಇಲ್ಲ. ಹರ್ಷನ ಕನಸಿನ ಹೊಸ ಕೆಫೆ ಓಪನ್ ಆದರೂ ಸಾನಿಯಾ ಮಾತ್ರ ಕಾಣೋದಕ್ಕೆ ಇಲ್ಲ. ಹಾಗಾಗಿ ಭುವಿ ಇಟ್ಟಿದ್ದ ನಂಬಿಕೆಯನ್ನು ಸಾನಿಯಾ ಮತ್ತೆ ಮುರಿಯುತ್ತಾಳ ಅಥವಾ ಉಳಿಸಿಕೊಳ್ಳುತ್ತಾಳ ಕಾದು ನೋಡಬೇಕು. ಇದನ್ನೂ ಓದಿ: Kannada Astrology: ಅದೃಷ್ಟ ಕೊಡಲು ಆರಂಭಿಸಿದ ರಾಹು ದೇವ: ಅಶ್ವಿನಿ ನಕ್ಷತ್ರಕ್ಕೆ ಪ್ರವೇಶ. ಮೂರು ರಾಶಿಗಳಿಗೆ ಹಿಂದೆಂದೂ ಕಾಣದ ಧನಲಾಭ. ಯಾವ ರಾಶಿಗಳಿಗೆ ಗೊತ್ತೇ??

ಹಿತ ಹರ್ಷ ಪಶ್ಚಿಮಾತ್ಯ ರೀತಿಯಲ್ಲಿಯೇ ತಮ್ಮ ಕೆಫೆ ಓಪನ್ ಮಾಡಿರಬಹುದು ಎಂದು ಭುವಿಗೆ ಆತಂಕ. ತಾನು ಅಮ್ಮನಿಗೆ ಕೊಟ್ಟ ಮಾತನ್ನ ಮುರಿಯುತ್ತಿದ್ದೇನೆ ಎನ್ನುವ ನೋವು. ಈ ನಡುವೆಯೇ ಕಾಫಿ, ಕೆಫೆ ಓಪನ್ ಮಾಡಲಾಗಿದೆ ಆದರೆ ತನ್ನ ಚಿಕ್ಕಮ್ಮನ ಕೈಯಲ್ಲಿ ಹರ್ಷಕುಮಾರ್ ಕಾಫಿ ಕೆಫೆ ಹೆಸರನ್ನ ರಿವೀಲ್ ಮಾಡಿಸುತ್ತಿದ್ದಂತೆ ಎಲ್ಲರೂ ಆನಂದ ಭಾಷ್ಪ ಸುರಿಸಿದ್ದಾರೆ. ಕಾರಣ ಹರ್ಷ ಇಂಗ್ಲಿಷ್ ಹೆಸರನ್ನೇ ಆಯ್ದುಕೊಳ್ಳುತ್ತಾನೆ ಎಂದುಕೊಂಡಿದ್ದ ಭುವಿಗೆ ಇದು ಆಶ್ಚರ್ಯ ತಂದಿದೆ. ಇದನ್ನೂ ಓದಿ: Care For Health: ಬೆಳಿಗ್ಗೆ ಎದ್ದ ತಕ್ಷಣ ಹೀಗೆಲ್ಲಾ ಆಗತ್ತಾ? ಹಾಗಾದ್ರೆ ಡೌಟೇ ಬೇಡ; ಕೂಡಲೇ ವೈದ್ಯರನ್ನ ಸಂಪರ್ಕಿಸಿ; ಯಾವ ಖಾಯಿಲೆಯ ಮುನ್ಸೂಚನೆ ಗೊತ್ತೇ?

‘ಅಮ್ಮಮ್ಮನ ಕಾಫಿ ಅಂಗಡಿ’ಎಂದು ಹರ್ಷ ತನ್ನ ಕಾಫಿ ಕೆಫೆಗೆ ಹೆಸರನ್ನು ಇಟ್ಟಿದ್ದಾನೆ ಅಷ್ಟೇ ಅಲ್ಲ ಒಳಗಡೆ ಕೆಲಸ ಮಾಡುವ ಎಲ್ಲರಿಗೂ ಯುನಿಫಾರ್ಮ್ ಕೊಟ್ಟು ಅದರ ಮೇಲೆ ’ಅ’ ಎಂದು ಹೆಸರು ಬರೆಸಿದ್ದೇನೆ. ಹೋಟೆಲ್ ಅಲ್ಲಿ ಭುವಿಯ ಕಲ್ಪನೆಗಿಂತಲೂ ಅದ್ಭುತವಾಗಿ ಹರ್ಷ ಕಾಫಿ ಕೆಫೆಯನ್ನ ತೆರೆದಿದ್ದಾನೆ ಅದೂ ಕನ್ನಡದಲ್ಲೇ! ಆದರೂ ಕಾಫಿ ಕೆಫೆ ಒಳಗಡೆ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ ಹಾಗಾಗಿ ಭುವಿಗೆ ಇನ್ನೂ ತಾನು ಹರ್ಷನಿಗೆ ಖಾಲಿ ಪೇಪರ್ ಮೇಲೆ ಸಹಿ ಹಾಕಿಕೊಟ್ಟು ತಪ್ಪು ಮಾಡಿದ್ದೇನೆ ಎನ್ನುವ ಅನುಮಾನ ಕಾಡುತ್ತಿದೆ. ಎಪಿಸೋಡ್ ನೋಡಿದ ಜನ ಭುವಿಯನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಹರ್ಷ ಅವರನ್ನು ಸ್ವಲ್ಪವಾದರೂ ನಂಬಿ ಎಂದು ರಿಕ್ವೆಸ್ಟ್ ಮಾಡುತ್ತಿದ್ದಾರೆ.

ಅಂದಹಾಗೆ ಹರ್ಷ ಭುವಿಯ ನಂಬಿಕೆಯನ್ನು ಉಳಿಸಿಕೊಳ್ಳುತ್ತಾನ? ಅದೇ ರೀತಿ ಸಾನಿಯಾ ಹಣ ತೆಗೆದುಕೊಂಡು ಆ ಸ್ಥಳಕ್ಕೆ ಬಂದಿದ್ದಾಳ ಇದೆಲ್ಲದಕ್ಕೂ ಉತ್ತರ ಸಿಗಬೇಕು ಅಂದ್ರೆ ನೀವು ಇವತ್ತು 7:30ಕ್ಕೆ ಪ್ರಸಾರವಾಗುವ ಎಪಿಸೋಡ್ ನೋಡಲೇಬೇಕು.

bhuviColours kannadafinal chapterharshaKannada serialKannadati serialಅಮ್ಮಮ್ಮಕನ್ನಡತಿಭುವಿಹರ್ಷ