Kerala Story: ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೇ ಸದ್ದು ಮಾಡುತ್ತಿರುವ ಸಿನಿಮಾ ದಿ ಕೇರಳ ಸ್ಟೋರಿ. ಕೇರಳದಲ್ಲಿ ಇದ್ದಕ್ಕಿದ್ದ ಹಾಗೆ ಹೆಣ್ಣುಮಕ್ಕಳ ಮತಾಂತರವಾಗಿ ನಂತರ ಐಸಿಸ್ ಗೆ ಸೇರ್ಪಡೆಯಾಗಿ, ಭಯೋತ್ಪಾದಕರಾದ ನೈಜ ಘಟನೆಯನ್ನು ಆಧರಿಸಿ ಬಾಲಿವುಡ್ ನಿರ್ದೇಶಕ ಸುದೀಪ್ತೋ ಸೇನ್ ಅವರು ನಿರ್ದೇಶನ ಮಾಡಿದ್ದಾರೆ.. ಮೇ 5ರಂದು ಸಿನಿಮಾ ತೆರೆಕಾಣುತ್ತಿದೆ..
ಈ ಸಿನಿಮಾ ಬಿಡುಗಡೆ ಆಗುವ ಮೊದಲೇ ವಿವಾದಗಳನ್ನು ಎದುರಿಸುತ್ತಿದೆ, ಈ ಬಗ್ಗೆ ಕೇರಳ ರಾಜ್ಯದ ಸಿಎಂ ಪಿಣಿರಾಯ ವಿಜಯನ್ (Pinraya Vijayan) ಅವರು ಪ್ರತಿಕ್ರಿಯಿಸಿ, ಕೇರಳ (Kerala) ರಾಜ್ಯದ ಮರಿಯಾದೆ ತೆಗೆಯುವ ಕೆಲಸ ಇದು ಎಂದು ಹೇಳಿದ್ದರು. ಹಲವು ರಾಜಕೀಯ ನಾಯಕರು ಕೂಡ ಈ ಸಿನಿಮಾ ವಿರುದ್ಧ ನಿಂತಿದ್ದಾರೆ, ಕೇರಳ ಸ್ಟೋರಿ ಸಿನಿಮಾ ಬಿಡುಗಡೆಯಾಗಬಾರದು, ತಡೆಹಿಡಿಯಬೇಕು ಎಂದು ಕೋರ್ಟ್ ಗೆ ಕೂಡ ಹೋಗಲಾಗಿತ್ತು.
ಆದರೆ ಹೈಕೋರ್ಟ್ ನಲ್ಲಿ ಸಿನಿಮಾ ವಿರುದ್ಧ ಹೋದವರಿಗೆ ಹಿನ್ನಡೆ ಅಗುವಂಥ ತೀರ್ಪು ನೀಡಲಾಗಿದೆ. ಸಿನಿಮಾ ಏನೋ ನಾಳೆ ಬಿಡುಗಡೆ ಆಗುತ್ತಿದೆ, ನಟಿ ಅದಾ ಶರ್ಮ (Adah Sharma) ನಾಯಕಿಯಾಗಿರುವ ಈ ಸಿನಿಮಾ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾ ವಿಷಯದಲ್ಲಿ ಬಹಳಷ್ಟು ವಿವಾದಗಳು ನಡೆಯುತ್ತಿರುವಾಗ ನಿರ್ದೇಶಕ ಸುದೀಪ್ತೋ ಸೇನ್ (Sudeepto Sen) ಅವರು ಈಗ ಉಲ್ಟಾ ಹೊಡೆದಿದ್ದಾರೆ.
ಅದೇನೆಂದರೆ, ದಿ ಕೇರಳ ಸ್ಟೋರಿ ಸಿನಿಮಾದ ಒನ್ ಲೈನ್ ಸ್ಟೋರಿ ಹೇಳುವಾಗ, ಬುಕ್ ಮೈ ಶೋ (Book My Show) ವಿವರಣೆಯಲ್ಲಿ ಕೂಡ 32,000 ಹೆಣ್ಣುಮಕ್ಕಳ ಕಥೆ ಎಂದು ಹೇಳಲಾಗಿತ್ತು, ಆದರೆ ಈಗ 3 ಹೆಣ್ಣುಮಕ್ಕಳ ಕಥೆ ಎಂದು ಬದಲಾಯಿಸಲಾಗಿದೆ. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದು, ನಿಜವನ್ನೇ ಹೇಳುತ್ತಿರುವುದಾಗ ಈ ರೀತಿ ಮಾಡುವುದು ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇಂಥ ನಿರ್ದೇಶಕರು ಇರ್ತಾರ ಎಂದು ಶಾಕ್ ಆಗಿದ್ದಾರೆ.