Kuri Prathap: ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇಂದು ಕಾಮಿಡಿಯನ್ ಆಗಿ ಮಿಂಚುತ್ತಿರುವ ಕುರಿ ಪ್ರತಾಪ್ ಬಗ್ಗೆ ವಿಶೇಷವಾದ ಪರಿಚಯವೇನು ಬೇಕಾಗಿಲ್ಲ. ಪ್ರತಾಪ್, ಕುರಿಗಳು ಸಾರ್ ಕುರಿಗಳು ಶೋ ಮೂಲಕ ಕುರಿ ಪ್ರತಾಪ್ ಆಗಿ ಫೇಮಸ್ ಆದರು. ಅಲ್ಲಿಂದ ಅವರಿಗೆ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶಗಳು ಕೂಡ ಬಂತು. ಈ ನಡುವೆ ಬಿಗ್ ಬಾಸ್ ಶೋ ಗೂ ಕೂಡ ಕುರಿ ಪ್ರತಾಪ್ ಹೋಗುತ್ತಾರೆ.
ಅಲ್ಲಿಂದ ಅವರ ಹೊಸ ಜರ್ನಿ ಆರಂಭವಾಗುತ್ತೆ. ರನ್ನರ್ ಅಪ್ ಆಗಿದ್ದ ಕುರಿ ಪ್ರತಾಪ್ ಬಿಗ್ ಬಾಸ್ ನಂತಹ ದೊಡ್ಡ ರಿಯಾಲಿಟಿ ಶೋ ಬಳಿಕ ಮತ್ತಷ್ಟು ಹೆಸರುಗಳಿಸಿಕೊಳ್ಳುತ್ತಾರೆ. ಅವರಿಗೆ ಸಿನಿಮಾಗಳಲ್ಲಿಯೂ ಕೂಡ ಹೆಚ್ಚಾಗಿ ಅವಕಾಶಗಳು ಸಿಗಲು ಶುರುವಾಗುತ್ತೆ. ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಕಾಮಿಡಿ ಶೋನಲ್ಲಿ ಕುರಿ ಪ್ರತಾಪ್ ಗೆ ಅತ್ಯುತ್ತಮ ರೋಲ್ ಕೂಡ ಸಿಕ್ಕಿತ್ತು.
ಸಿನಿಮಾ ರಂಗವನ್ನು ಹಾಸ್ಯ ನಟರಾಗಿ ಸಾಧು ಕೋಕಿಲ ಹಾಗೂ ಚಿಕ್ಕಣ್ಣ ಆವರಿಸಿಕೊಂಡಿದ್ದ ಸಮಯದಲ್ಲಿ ನಿರ್ಮಾಪಕರು ಹಾಗೂ ನಿರ್ದೇಶಕರು ಇವರ ಕಾಲ್ ಶೀಟ್ ಗಳಿಗಾಗಿ ಕಾಯುವ ಪರಿಸ್ಥಿತಿ ಇತ್ತು. ಇವರಿಬ್ಬರೂ ತಾವು ಒಪ್ಪಿಕೊಂಡ ಸಿನಿಮಾಗಳನ್ನು ಕೂಡ ಸರಿಯಾಗಿ ಶೂಟಿಂಗ್ ಬಾರದೆ ಹಳ್ಳ ಹಿಡಿಸುತ್ತಿದ್ದರು ಎನ್ನುವ ಆರೋಪವು ಇದೆ. ಇದೇ ಸಮಯದಲ್ಲಿ ಕುರಿ ಪ್ರತಾಪ್ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುತ್ತಾರೆ. ಅವರ ಬಗ್ಗೆ ನಿರೀಕ್ಷೆಗಳು ಹೆಚ್ಚಾಗುತ್ತವೆ. ಆದರೆ ಯಶಸ್ಸು ತಲೆಗೇರಿದ ಪ್ರತಿಯೊಬ್ಬ ವ್ಯಕ್ತಿಯು ಕೂಡ ಹೀಗೆ ವರ್ತಿಸುತ್ತಾನಾ ಎಂಬಂತಹ ಪ್ರಶ್ನೆ ನಿಮ್ಮಲ್ಲೂ ಮೂಡಬಹುದು. ಯಾಕೆ ಅಂತೀರಾ?
ಕುರಿ ಪ್ರತಾಪ್ ಅವರನ್ನ ಯಾರೆಲ್ಲಾ ಇಂಡಸ್ಟ್ರಿಗೆ ಕರೆದುಕೊಂಡು ಬಂದರೋ ಅವರನ್ನೆಲ್ಲ ಹಿಂದೆ ತಳ್ಳಿ ತಾನೇ ದೊಡ್ಡವನು ಎನ್ನುವಂತೆ ದೌಲತ್ತು ತೋರಿಸಲು ಶುರು ಮಾಡಿದ್ದರಂತೆ. ಒಪ್ಪಿಕೊಂಡ ಸಿನಿಮಾಕ್ಕೆ ಸರಿಯಾಗಿ ಬಾರದೆ ಇರುವುದು, ತನ್ನ ಅಭಿನಯಕ್ಕಿಂತಲೂ ಮೂರು ಪಟ್ಟು ಹೆಚ್ಚಿನ ಸಂಭಾವನೆ ಕೇಳುವುದು, ಕಡೆಗೆ ಅಭಿನಯಿಸಿದ ಸಿನಿಮಾದ ಪ್ರಚಾರಕ್ಕೂ, ಪತ್ರಿಕಾಗೋಷ್ಠಿಗೂ ಬಾರದೆ ಏನೇನೋ ಕಾರಣ ಹೇಳಿ ತಪ್ಪಿಸಿಕೊಳ್ಳುವುದು ಹೀಗೆಲ್ಲಾ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡಿರುವ ಕುರಿ ಪ್ರತಾಪ್ ಸಿನಿಮಾದಲ್ಲಿ ಇನ್ನೂ ಹೆಚ್ಚು ಕಾಲ ಇದೇ ಗೌರವ ಉಳಿಸಿಕೊಂಡು ಹೋಗುವುದು ಈಗಿನ ಪರಿಸ್ಥಿತಿಯಲ್ಲಿ ಕಷ್ಟ ಎನ್ನಬಹುದು.
ಯಾಕೆಂದ್ರೆ ತನಗೆ ಕೆಲಸ ಕೊಟ್ಟವರನ್ನೇ ನಿರ್ಲಕ್ಷ್ಯ ಮಾಡಿ ಹಣದ ಹಿಂದೆ ಬಿದ್ದ ಕುರಿ ಪ್ರತಾಪ ಅವರು ಲೇವಾದೇವಿ ಆಫೀಸ್ ಇಟ್ಟುಕೊಂಡು ಬಡ್ಡಿ ದುಡ್ಡು ಎಣಿಸುತ್ತಿದ್ದಾರೆ ಎನ್ನುವ ಸುದ್ದಿಯು ಇದೆ. ಇತ್ತೀಚಿಗೆ ತೆರೆಕಂಡ ಆರ್ ಸಿ ಬ್ರದರ್ಸ್ ಸಿನಿಮಾದ ಪ್ರಚಾರಕ್ಕೂ ಬಾರದೆ ಆ ಸಿನಿಮಾದ ಸೋಲಿಗೂ ಕುರಿ ಪ್ರತಾಪ್ ಬಹು ಮುಖ್ಯ ಕಾರಣ ಆಗಿದ್ದಾರೆ ಅನ್ನೋದು ಅವರ ಮೇಲೆ ಇರುವ ಆರೋಪ. ಅತ್ಯುತ್ತಮ ಹಾಸ್ಯನಟ ಎನಿಸಿಕೊಂಡ ಕುರಿ ಪ್ರತಾಪ್ ತನ್ನ ಆ ಕೆಲಸವನ್ನು ಬಿಟ್ಟು ಬೇರೆಲ್ಲ ಮಾಡಿಕೊಂಡು ಸಿನಿಮಾ ರಂಗದಲ್ಲಿ ಸದ್ಯದ ಮಟ್ಟಿಗೆ ಹೆಸರು ಕೆಡಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.