Next Bumrah: ಪದೇ ಪದೇ ಕೈ ಕೊಡುವ ಬುಮ್ರಾ ರವರ ಸ್ಥಾನವನ್ನು ತುಂಬಾ ಆಟಗಾರ ಸಿಕ್ಕೇ ಬಿಟ್ಟ. ಇವನೇ ನೋಡಿ ಮುಂದಿನ ಬುಮ್ರಾ. ಆ ಕಿಲಾಡಿ ಯಾರು ಗೊತ್ತೇ?

Next Bumrah: ಐಪಿಎಲ್ (IPL) ನಲ್ಲಿ ನಾವು ಅಸಾಧ್ಯ ಎನ್ನಿಸುವಂಥ ಸಾಕಷ್ಟು ಪ್ರತಿಭೆಗಳನ್ನು ನೋಡುತ್ತೇವೆ. ಇಂಡಿಯನ್ ಕ್ರಿಕೆಟ್ ನಲ್ಲಿ ಡೆತ್ ಓವರ್ ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದ ಸ್ಫೋಟಕ ಬೌಲರ್ ಎಂದು ಹೆಸರು ಮಾಡಿದ್ದವರು ಜಸ್ಪ್ರೀತ್ ಬುಮ್ರ (Jasprit Bumrah). ಇವರು ಟೀಮ್ ಇಂಡಿಯಾ (Team India) ಪರವಾಗಿ ಹಾಗೂ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಪ್ರಮುಖ ಅಸ್ತ್ರ ಆಗಿದ್ದರು. ಆದರೆ ಬುಮ್ರ ಅವರು ಅನಾರೋಗ್ಯದಿಂದ ಕ್ರಿಕೆಟ್ ಇಂದ ದೂರವೇ ಉಳಿದಿದ್ದಾರೆ..

Next Bumrah: ಪದೇ ಪದೇ ಕೈ ಕೊಡುವ ಬುಮ್ರಾ ರವರ ಸ್ಥಾನವನ್ನು ತುಂಬಾ ಆಟಗಾರ ಸಿಕ್ಕೇ ಬಿಟ್ಟ. ಇವನೇ ನೋಡಿ ಮುಂದಿನ ಬುಮ್ರಾ. ಆ ಕಿಲಾಡಿ ಯಾರು ಗೊತ್ತೇ? https://sihikahinews.com/amp/next-bumrah-this-player-might-replace-bumrah-in-indian-team/

ಎಲ್ಲರಿಗು ಕೂಡ ಬುಮ್ರ ಅವರಂತ ಮತ್ತೊಬ್ಬ ಆಟಗಾರ ಬೇಕು ಎಂದು ಅನ್ನಿಸದೆ ಇರದು. ಇದೀಗ ಇವರ ಹಾಗೆಯೇ ಬೌಲಿಂಗ್ ಮಾಡುವ ಚಾಣಾಕ್ಷ ಆಟಗಾರ ಸಿಕ್ಕ ಹಾಗೆ ಕಾಣುತ್ತಿದೆ. ಆ ಆಟಗಾರ ಮತ್ಯಾರು ಅಲ್ಲ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಂತ್ರಿಕ ಬೌಲರ್ ಆಗಿರುವ ಮುಖೇಶ್ ಕುಮಾರ್ (Mukesh Kumar). ಇತ್ತೀಚೆಗೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವರ್ಸಸ್ ಸನ್ ರೈಸರ್ಸ್ ಹೈದರಾಬಾದ್ (Delhi Capitals vs Sun Risers Hyderabad) ಪಂದ್ಯದಲ್ಲಿ, ಕೊನೆಯ ಓವರ್ ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿ, ಕೇವಲ 5 ರನ್ಸ್ ಕೊಟ್ಟು, ಡೆಲ್ಲಿ ತಂಡ ಗೆಲ್ಲುವ ಹಾಗೆ ಮಾಡಿದರು..

ಇದನ್ನು ಓದಿ: Rahane: ಅಜಿಂಕ್ಯ ರಹಾನೆ ಈ ಬಾರಿ ಇಷ್ಟು ವೇಗವಾಗಿ, ಬಿರುಸಾಗಿ ಬ್ಯಾಟ್ ಬೀಸಲು ಕಾರಣ ಏನು ಗೊತ್ತೇ? ಅದೊಂದು ಕೆಲಸ ಇಷ್ಟಕ್ಕೆ ಕಾರಣವಾಯ್ತಾ?

ಇವರ ಬೌಲಿಂಗ್ ನೋಡಿದ ಎಲ್ಲರಿಗೂ ಜಸ್ಪ್ರೀತ್ ಬುಮ್ರ ಅವರೇ ನೆನಪಿಗೆ ಬಂದಿದ್ದರು. ಭವಿಷ್ಯದ ಟೀಮ್ ಇಂಡಿಯಾಗು ಇವರು ಪ್ರಮುಖ ಅಸ್ತ್ರ ಆಗುವುದರಲ್ಲಿ ಸಂಶಯವಿಲ್ಲ. ಇನ್ನು ಮುಖೇಶ್ ಕುಮಾರ್ ಅವರ ಬಗ್ಗೆ ಹೇಳುವುದಾದರೆ, ಬಹಳ ಕಷ್ಟಪಟ್ಟು ಬೆಳೆದವರು, ಬಡತನದಲ್ಲಿ ಹುಟ್ಟಿ ಬೆಳೆದ ಇವರು, ಮೊದಲು ಗೋಪಾಲ್ ಗಂಜ್ ನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಬಿಹಾರದ ಅಂಡರ್ 19 ತಂಡದ ಭಾಗವಾಗಿದ್ದರು. ಇವರ ತಂದೆ ಆಟೋ ಡ್ರೈವರ್, ತಮಗೆ ಸಹಾಯ ಮಾಡಲು ಕೋಲ್ಕತ್ತಾಗೆ ಬರಬೇಕು ಎಂದು ಮಗನನ್ನು ಕೇಳಿದರು.

ಮೂರು ಸಾರಿ ಮೆಡಿಕಲ್ ಎಂಟ್ರನ್ಸ್ ಎಕ್ಸಾಂ ನಲ್ಲಿ ಫೇಲ್ ಆಗಿದ್ದ ಮುಕೇಶ್ ಅವರು ತಂದೆಗೆ ಸಹಾಯ ಮಾಡಲು ಕೋಲ್ಕತ್ತಾಗೆ ಹೋಗಿ, ಅಲ್ಲಿಯೂ ಕ್ರಿಕೆಟ್ ಅಭ್ಯಾಸ ಶುರು ಮಾಡಿದರು, ಆ ಅಭ್ಯಾಸ ಮತ್ತು ಪಟ್ಟ ಕಷ್ಟ ಇಂದು ಈ ಸ್ಥಾನಕ್ಕೆ ತಂದಿದೆ. ಐಪಿಎಲ್ ಹರಾಜಿನಲ್ಲಿ ಇವರ ಮೂಲ ಬೆಲೆ 20 ಲಕ್ಷ ಆದರೆ ಡೆಲ್ಲಿ ತಂಡ ಇವರನ್ನು 5.5 ಕೋಟಿ ಕೊಟ್ಟು ಖರೀದಿ ಮಾಡಿತು. ಇದನ್ನು ನೋಡಿದರೆ ಇವರ ಸಾಧನೆಯ ಹಾದಿ ಹೇಗಿದೆ ಎಂದು ಗೊತ್ತಾಗುತ್ತದೆ.

ಇದನ್ನು ಓದಿ: Astrology: ಸಾಲದ ಸುಳಿಯಲ್ಲಿ ಸಿಲುಕಿಕೊಂಡು ತೆಗೆದುಕೊಂಡ ಹಣ ಹಿಂತಿರುಗಿ ಕೊಡಲು ಸಾಧ್ಯವಾಗದೆ ಕಷ್ಟ ಪಡುತ್ತಿದ್ದರೆ ಈ ಒಂದು ಪ್ರಯೋಗ ಮಾಡಿ ಸಾಕು ಸಾಲದಿಂದ ಶಾಶ್ವತ ಮುಕ್ತಿ ಸಿಗುತ್ತದೆ!

Best News in KannadaDC vs SRHiplipl16jasprit bumrahkannada liveKannada NewsKannada Trending Newslive newsLive News Kannadalive trending newsMukesh kumarmumbai indiansNews in Kannadatem indiatop news kannada