Ramayan: ರಾಮಾಯಣ ಸಿನಿಮಾಗಾಗಿ ದೇವರ ಮೊರೆ ಹೋದ ರಾಕಿಂಗ್ ಸ್ಟಾರ್ ಯಶ್! ಕಾರಣ ಏನ್ ಗೊತ್ತಾ?

Ramayan: ರಾಕಿಂಗ್ ಸ್ಟಾರ್ ಯಶ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗ ಕೇವಲ ತಮ್ಮ ಮುಂದಿನ ಕನ್ನಡ ಸಿನಿಮಾ ಟಾಕ್ಸಿಕ್ ಸಿನಿಮಾಗಾಗಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ನಿರ್ಮಾಣ ಆಗುತ್ತಿರುವಂತಹ ರಾಮಾಯಣ ಸಿನಿಮಾಗಾಗಿ ಕೂಡ ಬ್ಯುಸಿಯಾಗಿದ್ದಾರೆ ಎಂದು ಹೇಳುಬಹುದಾಗಿದೆ. ಯಾಕೆಂದ್ರೆ ಈ ಸಿನಿಮಾದಲ್ಲಿ ಕೇವಲ ಅವರು ರಾವಣನ ಪಾತ್ರದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ ಬದಲಾಗಿ ಸಹ ನಿರ್ಮಾಪಕರಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದನ್ನ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ.

ಒಬ್ಬ ನಾಯಕನಟ ನಿರ್ಮಾಪಕ ಆದ್ಮೇಲೆ ಆ ಸಿನಿಮಾ ಆತನಿಗೆ ಸಾಮಾನ್ಯ ಸಿನಿಮಾಗಳಿಗಿಂತ ಹೆಚ್ಚಾಗಿ ಪ್ರಮುಖವಾಗಿರುತ್ತದೆ ಅನ್ನೋದನ್ನ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ. ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಹಾಗೂ ಸೀತೆಯ ಪಾತ್ರದಲ್ಲಿ ನಮ್ಮ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ಸಾಯಿ ಪಲ್ಲವಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ದಂಗಲ್ ಸಿನಿಮಾದ ಮೂಲಕ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಯಶಸ್ಸನ್ನು ಸಾಧಿಸಿರುವ ನಿರ್ದೇಶಕ ನಿತೇಶ್ ತಿವಾರಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಕೇಳಿ ಬಂದಿರುವ ಮಾಹಿತಿಯ ಪ್ರಕಾರ ಬರೋಬ್ಬರಿ 835 ಕೋಟಿ ರೂಪಾಯಿಗಳ ಬಜೆಟ್ ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ ಎನ್ನುವ ಮಾಹಿತಿ ಕೇಳಿ ಬಂದಿದೆ. ಈ ಹಿಂದೆ ಬಾಲಿವುಡ್ ಚಿತ್ರರಂಗ ಆದಿಪುರುಷ್ ಎನ್ನುವ ಹೆಸರಿನಲ್ಲಿ ಕೂಡ ರಾಮಾಯಣ ಸಿನಿಮಾದ ಕಾವ್ಯವನ್ನು ಹೇಳುವುದಕ್ಕೆ ಹೊರಟಿತ್ತು ಆದರೆ ಸಂಪೂರ್ಣವಾಗಿ ವಿಫಲವಾಯಿತು.

ದೇವರ ಮೊರೆ ಹೋದ ಯಶ್ ಕಾರಣ ಏನು?

ಈಗಾಗಲೇ ಮೊದಲ ಚರಣದ ಸಿನಿಮಾದ ಚಿತ್ರೀಕರಣ ಕೂಡ ಪೂರ್ತಿಯಾಗಿದ್ದು ನಡುವಲ್ಲಿ ಕಂಡುಬರುವಂತಹ ಸಮಸ್ಯೆ ಕಾರಣದಿಂದಾಗಿ ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ ಹಾಗಿದ್ದರೆ ಬನ್ನಿ ಅಲ್ಲಿ ಬಂದಿರುವಂತಹ ಸಮಸ್ಯೆ ಏನು ಹಾಗೂ ರಾಕಿಂಗ್ ಸ್ಟಾರ್ ಯಶ್ ರವರು ಯಾಕೆ ದೇವರ ಮೊರೆ ಹೋಗಿದ್ದಾರೆ ಅನ್ನುವಂತಹ ಮಾಹಿತಿಯನ್ನು ಪಡೆದುಕೊಳ್ಳೋಣ.

ರಾಮಾಯಣಂ ಸಿನಿಮಾದ ಸ್ಕ್ರಿಪ್ಟ್ ಹಕ್ಕುಗಳನ್ನು ಮೊದಲಿಗೆ ಬೇರೆ ನಿರ್ಮಾಪಕರು ಹೊಂದಿದ್ರು. ಅವರಿಗೆ ಹಣವನ್ನು ನೀಡದೆ ಅದನ್ನೇ ಸಿನಿಮಾ ಮಾಡಲು ಹೊರಟಿದ್ದಾರೆ ಅನ್ನುವುದಾಗಿ ಆ ನಿರ್ಮಾಪಕರು ರಾಮಾಯಣ ಸಿನಿಮಾದ ನಿರ್ಮಾಪಕರ ಮೇಲೆ ಕಾನೂನಾತ್ಮಕ ಪ್ರಕರಣವನ್ನು ದಾಖಲಿಸಿದ್ದಾರೆ. ಇದೇ ವಿಚಾರಕ್ಕೆ ರಾಕಿಂಗ್ ಸ್ಟಾರ್ ಯಶ್ ದೇವರ ಮೊರೆ ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಇನ್ನು ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಕಾಂಬಿನೇಷನ್ನಲ್ಲಿ ಗಾಡ್ ಪವರ್ ಎನ್ನುವಂತಹ ಸಿನಿಮಾ ಬರಲಿದೆ ಅನ್ನೋದಾಗಿ ತಿಳಿದು ಬಂದಿದ್ದು ಅದು ಇದೆ ಇರಬಹುದಾ ಅಥವಾ ಬೇರೇನೇ ಅನುದಾಗಿ ಕೂಡ ಆಶ್ಚರ್ಯ ಮೂಡೋದಕ್ಕೆ ಪ್ರಾರಂಭವಾಗಿದೆ. ಸಿನಿಮಾದ ಟೈಟಲ್ ನಿಜವಾಗಿ ಘೋಷಣೆ ಆಗುವವರೆಗೂ ಕೂಡ ಯಾವುದನ್ನು ಕೂಡ ನಂಬಲು ಸಾಧ್ಯವಿಲ್ಲ ಎಂದು ಹೇಳಬಹುದಾಗಿದೆ.

Ramayan