ಜುಲೈ 16 ರಿಂದ ಈ ಮೂರು ರಾಶಿಯವರಿಗೆ ರವಿ ತರಲಿದ್ದಾನೆ ಶುಭ ಸಮಾಚಾರ!

ಜುಲೈ 16 ಅಂದ್ರೆ ನಾಳೆ ಸೂರ್ಯ ದೇವ ತನ್ನ ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸಲಿದ್ದಾನೆ ಅಂದ್ರೆ ಮಿಥುನ ರಾಶಿಯಲ್ಲಿದ್ದ ಸೂರ್ಯ ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಗ್ರಹಗಳು ಹೀಗೆ ಸ್ಥಾನಪಲ್ಲಟಗೊಂಡಾಗ ಅವು ಮನುಷ್ಯರ ಜೀವನದ ಮೇಲೆ ಪ್ರಭಾವ ಬೀರುವುದು ಸಾಮಾನ್ಯ. ಹಾಗಾಗಿ ಈ ಬಾರಿಯೂ ರವಿಯ ಸಂಚಾರದಿಂದಾಗಿ ಕೆಲವು ರಾಶಿಯವರಿಗೆ ಉತ್ತಮ ಲಾಭ ಫಲಗಳನ್ನು ನೀಡಲಿದ್ದಾನೆ.

ರವಿ ಸಂಕ್ರಮಣ ಎಂದು ಕರೆಯಲಾಗುವ ಈ ಸಮಯವನ್ನು ಅತ್ಯಂತ ಶ್ರೇಷ್ಠ ಎಂದು ಹೇಳಲಾಗುತ್ತೆ. ರವಿ ಮಿಥುನದಿಂದ ಕರ್ಕಾಟಕ ರಾಶಿಗೆ ಪ್ರವೇಶಿಸಿದಾಗ ಉತ್ತರಾಯಣ ಮುಗಿದು ದಕ್ಷಿಣಾಯಣ ಆರಂಭವಾಗುತ್ತೆ. ಈ ಸಮಯದಲ್ಲಿ ಈ ಕೆಳಗಿನ ಮೂರು ರಾಶಿಯವರಿಗೆ ಸೂರ್ಯದೇವನ ಅದೃಷ್ಟ ಪ್ರಾಪ್ತಿಯಾಗಲಿದೆ. ರಾಶಿ ಯಾವುದು ನೋಡೋಣ.

ಮೇಷ ರಾಶಿ: ಮಿಥುನದಿಂದ ಕರ್ಕಾಟಕ ಪ್ರವೇಶಿಸುವ ಸೂರ್ಯ ಮೇಷ ರಾಶಿಯವರಿಗೆ ಲಾಭ ತರಲಿದ್ದಾನೆ. ಹೊಸ ಉದ್ಯೋಗವನ್ನು ಪಡೆಯುವ ಸಾಧ್ಯತೆಗಳಿವೆ. ಜೊತೆಗೆ ಈಗಾಗಲೇ ಉದ್ಯೋಗದಲ್ಲಿರುವವರಿಗೆ ಬಡ್ತಿ ಕೂಡ ದೊರೆಯಬಹುದು ನಾಳೆಯಿಂದ ಮುಂದಿನ ತಿಂಗಳು 17ನೇ ತಾರೀಕಿನವರೆಗೆ ಯಾವುದಾದರೂ ದೊಡ್ಡ ವ್ಯಾಪಾರ ವ್ಯವಹಾರವನ್ನು ನೀವು ಆರಂಭಿಸಲಿದ್ದೀರಿ.

ವೃಷಭ ರಾಶಿ; ಈ ಸಂಕ್ರಮಣದ ಸಮಯದಲ್ಲಿ ಸೂರ್ಯನ ಈ ಬದಲಾವಣೆಯಿಂದ ವೃಷಭ ರಾಶಿಯವರೆಗೂ ಲಾಭವಾಗಲಿದೆ. ಇವರಿಗೆ ಆರ್ಥಿಕ ಸಮಸ್ಯೆನ ಅನುಭವಿಸಿರುವವರು ಆರ್ಥಿಕ ವಿಷಯದಲ್ಲಿ ಚೇತರಿಕೆ ಕಾಣಲಿದ್ದಾರೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ ಉದ್ಯೋಗಿಗಳ ಆದಾಯವು ಕೂಡ ಹೆಚ್ಚಾಗಬಹುದು. ಅರ್ಧಂಬರ್ಧ ಆಗಿದ್ದ ಕೆಲಸ ಈ ತಿಂಗಳು ಪೂರ್ಣಗೊಳ್ಳಲಿವೆ. ಏನು ಉದ್ಯೋಗದಲ್ಲಿರುವವರು ವರ್ಗಾವಣೆಯನ್ನು ಬಯಸಿದರೆ ಅವರಿಗೆ ಬೇಕಾಗಿರುವ ವರ್ಗಾವಣೆ ಸಿಗಲಿದೆ.

ಮಿಥುನ ರಾಶಿ: ರವಿಯ ಸಂಚಾರ ಈ ರಾಶಿಯವರಿಗೆ ಶುಭವನ ನೀಡಲಿದೆ ಧನಾತ್ಮಕ ಫಲಿತಾಂಶಗಳನ್ನ ನೀವು ಕಾಣಬಹುದು. ನಿಮ್ಮ ಸಂಬಳ ಹೆಚ್ಚಳವಾಗಿ ಆರ್ಥಿಕವಾಗಿ ನೀವು ಸಬಲರಾಗಲಿದ್ದೀರಿ. ಯಾವುದಾದರೂ ವ್ಯವಹಾರದಲ್ಲಿ ನೀವು ಹೂಡಿಕೆ ಮಾಡಿದರೆ ನಿಮಗೆ ಲಾಭವಾಗುತ್ತದೆ. ಬಹುಕಾಲದಿಂದ ಬಾಕಿ ಇದ್ದ ಬರಬೇಕಾದ ಹಣ ನಿಮ್ಮ ಕೈಸೇರಲಿದೆ.

ಇನ್ನು ಈ ಮೂರು ರಾಶಿಗಳನ್ನು ಹೊರತುಪಡಿಸಿ ಕರ್ಕಾಟಕ ಹಾಗೂ ಸಿಂಹ ರಾಶಿಯವರಿಗೆ ಕೂಡ ಉತ್ತಮ ಲಾಭವನ್ನು ತರಲಿದ್ದಾನೆ ಸೂರ್ಯ. ವ್ಯಾಪಾರದಲ್ಲಿ ಪ್ರಗತಿ ಉದ್ಯೋಗದಲ್ಲಿ ಭಡ್ತಿ ಸಿಗಲಿದೆ. ಹಾಗಾದರೆ ಈಗ ಹೇಳಿ ನಿಮ್ಮ ರಾಶಿ ಯಾವುದು?

Comments (0)
Add Comment