Siddaramaiah Biopic: ಎಲ್ಲಾ ಭಾಷೆಗಳಲ್ಲಿಯೂ ಸಾಕಷ್ಟು ವೆರೈಟಿ ಸಿನಿಮಾ (Film)ಗಳನ್ನ ನಿರ್ಮಾಣ ಮಾಡುತ್ತಾರೆ. ಫೈಟಿಂಗ್, ರೊಮ್ಯಾನ್ಸ್, ಕಾಮೆಡಿ ಇತ್ಯಾದಿ ಇತ್ಯಾದಿ.. ಆದ್ರೆ ಸಿನಿಮಾಗಳಲ್ಲಿ ಹೆಚ್ಚು ಗಮನ ಸೆಳೆಯುವ ಟಾಪಿಕ್ ಗಳಲ್ಲಿ ಬಯೋಪಿಕ್ (Biopic) ಗಳು ಕೂಡ ಒಂದು. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಜೀವನ ಚರಿತ್ರೆಯನ್ನು ತೆರೆಯ ಮೇಲೆ ತರುವುದೇ ಬಯೋಪಿಕ್! ಬಾಲಿವುಡ್ ನಿಂದ ಸೌತ್ ವರೆಗೂ ಬಯೋಪಿಕ್ ಟ್ರ್ಂಡ್ ಶುರುವಾಗಿದೆ. ಇದೀಗ ಕನ್ನಡದಲ್ಲಿ ಮತ್ತೊಂದು ಬಯೋಪಿಕ್ ನಿರ್ಮಾಣ ಮಾಡುವುದಕ್ಕೆ ಚಿತ್ರ ತಂಡವನ್ನು ಮುಂದಾಗಿದೆ. ಯಾರ ಬಗ್ಗೆ ಅಂತ ತಿಳಿದ್ರೆ ನೀವು ಆಶ್ಚರ್ಯ ಪಡ್ತೀರಿ!
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಕರುನಾಡಿನಲ್ಲಿ ಒಳ್ಳೆಯ ಹೆಸರಿದೆ. ಮುಖ್ಯಮಂತ್ರಿ (CM)ಯಾಗಿ ಒಂದಿಷ್ಟು ಸ್ಧನೆ ಮಾಡಿರುವ ಇವರು ವಿರೋಧ ಪಕ್ಷದ ನಾಯಕರಾಗಿಯೂ ಸಹ ಸರ್ಕಾರ ತಿದ್ದುವ ಕೆಲಸ ಮಾಡುತ್ತಾರೆ. ಸಾಕಷ್ಟು ರೋಚಕ ವಿಷಯಗಳನ್ನು ಜೀವನದಲ್ಲಿ ಕಂಡ ಸಿದ್ಧರಾಮಯ್ಯ ಅವರ ಜಯೋಪಿಕ್ ಸಿದ್ದ ಮಾಡಲು ಚಿತ್ರತಂಡವೊಂದು ಮುಂದೆ ಬಂದಿದೆ.
ಯಾರು ನಿರ್ಮಾಣ ಮಾಡಲಿದ್ದಾರೆ ಗೊತ್ತಾ?
ತಮ್ಮ ಹೊಸ ಹೊಸ ಚಿಂತನೆಗಳ ಮೂಲಕ ಆಗಾಗ ಸುದ್ದಿಯಲ್ಲಿ ಇರುವ ಸಿದ್ದರಾಮಯ್ಯ ಅವರ ಜಯೋಪಿಕ್ ರೆಡಿ ಆಗ್ತಾ ಇರೋದು ಅವರ ಅಭಿಮಾನಿಗಳಲ್ಲೂ ಸಂತಸ ಮೂಡಿಸಿದೆ. ಯಾವುದಾದರೂ ವ್ಯಕ್ತಿಯ ಜೀವನದ ಕಥೆಯನ್ನು ಆಧರಿಸಿದ ಸಿನಿಮಾಗಳನ್ನು ನಿರ್ಮಾಣ ಮಾಡುವುದು ಇತ್ತೀಚಿಗೆ ಟ್ರೆಂಡ್ ಆಗಿದೆ ಇಂಥ ಸಿನಿಮಾಗಳು ಯಶಸ್ಸು ಕಂಡಿದ್ದೂ ಇದೆ. ಹಾಗಾಗಿ ಸಿದ್ಧರಾಮಯ್ಯ ಬಯೋಪಿಕ್ ಬೆಳ್ಳಿತೆರೆಯ ಮ್ಲೆ ಬಂದ್ರೆ ಅಭಿಮಾನಿಗಳಿಗೆ ಇಷ್ಟವಾಗುವುದಂತೂ ಪಕ್ಕಾ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದ ಹಯಾತ್ ಪೀರ್ ಸಾಬ್ ಎಂಬವರು ಎಂ ಎಸ್ ಕ್ರಿಯೇಶನ್ ಎನ್ನುವ ಬ್ಯಾನರ್ ಅಡಿಯಲ್ಲಿ ಸಿದ್ದರಾಮಯ್ಯ ಅವರ ಜೀವನ ಚರಿತ್ರೆಯನ್ನು ಕನ್ನಡಿಗರ ಕಣ್ಮುಂದೆ ತರಲು ನಿರ್ಧರಿಸಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಅವರ ಬಳಿ ಮಾತುಕತೆ ಮಾಡಲಾಗಿದೆ. ಬಯೋಪಿಕ್ ನಲ್ಲಿ ಯಾವುದೇ ತಪ್ಪುಗಳೂ ಆಗದಂತೆ ಅವರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರದೇ ಇರುವ ರೀತಿಯಲ್ಲಿ ಬಯೋಪಿಕ್ ನಿರ್ಮಾಣ ಮಾಡುವುದಕ್ಕೆ ಸರಿಯಾದ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಸಿನಿಮಾ ನಿರ್ದೇಶಕ ಹೀರೋ ಯಾರು ಗೊತ್ತಾ?
ಸಿದ್ಧರಾಮಯ್ಯ ಅವರ ಜಯೋಪಿಕ್ ನಿರ್ಮಾಣಕ್ಕಾಗಿ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲು ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಅವರೊಂದಿಗೆ ಮಾತುಕತೆ ಮಾಡಲಾಗಿದೆ. ಅವರು ಒಪ್ಪಿ ಕಾಲ್ ಶೀಟ್ ನೀಡಿದ್ರೆ ಈ ಸಿನಿಮಾ ಪಾತ್ರಕ್ಕೆ ಅವರೇ ಸೂಟ್ ಆಗೋದು ಎನ್ನುತ್ತಿದೆ ಗಾಂಧಿನಗರ. ಇನ್ನು ಈ ಚಿತ್ರವನ್ನು ಸತ್ಯರತ್ನಂ ನಿರ್ದೇಶನ ಮಾಡಲಿದ್ದಾರೆ.
ಸಿನಿಮಾ ಬಜೆಟ್ ಎಷ್ಟು ಗೊತ್ತಾ!?
ಕರ್ನಾಟಕದ ಪ್ರಭಾವಿ ನಾಯಕ ಸಿದ್ದರಾಮಯ್ಯ ಅವರ ಬಯೋಪಿಕ್ ಅನ್ನು ದೊಡ್ದ ಬಜೆಟ್ ನಲ್ಲಿಯೇ ನಿರ್ಮಾಣ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಹಳೆಯ ಕಾಲವನ್ನು ಮರುಸೃಷ್ಟಿ ಮಾಡಲು ಮುಂದಾಗಿದ್ದು ಚಿತ್ರ ನಿರ್ಮಾಣಕ್ಕೆ ಬರೋಬ್ಬರಿ 50 ಕೋಟಿ ಬಜೆಟ್ ಹೋಡಿಕೆ ಮಾಡಲು ನಿರ್ಮಾಪಕರು ಸಿದ್ಧರಿದ್ದಾರೆ. ಒಟ್ಟಿನಲ್ಲಿ ಸಿದ್ಧರಾಮಯ್ಯ ಅವರ ಬಯೋಪಿಕ್ ಬಂದರೆ ಕರ್ನಾಟಕದಲ್ಲಿ ದೊಡ್ದ ಮಟ್ಟದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುವುದಂತೂ ಸತ್ಯ.