(Cricket News): ಟೀಮ್ ಇಂಡಿಯಾದ ಉಪನಾಯಕ ಕೆಎಲ್ ರಾಹುಲ್ ಕಳೆದ ಕೆಲವು ದಿನಗಳಿಂದ ಕಳಪೆ ಪ್ರದರ್ಶನ ನೀಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಅಭಿಮಾನಿಗಳಿಂದ ಛೀಮಾರಿ ಹಾಕಿಸಿಕೊಂಡಿದ್ದ ಕೆ ಎಲ್ ರಾಹುಲ್, ಇದೀಗ ಟೆಂಪಲ್ ರನ್ ಶುರು ಮಾಡಿದ್ದಾರೆ. ಈಗಾಗಲೇ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಟೀಮ್ ಇಂಡಿಯಾದ ಉಪನಾಯಕ.
ಕೆ ಎಲ್ ರಾಹುಲ್ (KL Rahul) ರೋಹಿತ್ ಶರ್ಮಾ (Rohit Sharma) ಮೊದಲಾದವರ ಕಳಪೆ ಆಟದಿಂದಾಗಿ ಟಿ 20 ವಿಶ್ವ ಕಪ್ (World Cut) ನಲ್ಲಿ ಸೆಮಿ ಫೈನಲ್ ಗೆ ತಲುಪಿದ ಟೀಮ್ ಮನೆಗೆ ಮರಳುವಂತೆ ಆಯ್ತು. ಇದರಿಂದ ಇವರಿಬ್ಬರ ಬದಲು ಆರಂಭಿಕವಾಗಿ ಬೇರೆ ಆಟಗಾರರನ್ನ ಕಣಕ್ಕಿಳಿಸಬೇಕು ಎಂದು ಕ್ರಿಕೆಟ್ (Cricket Fans) ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಇನ್ನು ಮುಂಬರುವ ಮ್ಯಾಚ್ ಗಳು ಕೆ ಎಲ್ ರಾಹುಲ್ ಅವರಿಗೆ ಡು ಆರ್ ಡೈ ಎನ್ನುವಂತೆ ಇದೆ. ಹಾಗಾಗಿ ಸದ್ಯ ತಂಡದ ಉಪನಾಯಕ ದೇವರ ಮೊರೆ ಹೋದಂತೆ ಕಾಣಿಸುತ್ತದೆ.
ಕೆ ಎಲ್ ರಾಹುಲ್ ಮಂಗಳೂರು (Mangalore) ಮೂಲದವರು ಹಾಗಾಗಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧವಾದ ಕುಕ್ಕೆ ಸುಬ್ರಹ್ಮಣ್ಯ (Kukke subramnya) ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿದ ರಾಹುಲ್ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ ಈ ವೇಳೆ ಅವರು ದೇವಾಲಯದಲ್ಲಿದ್ದ ಸಾಕಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಳೆದ ಬಾರಿ ಫಾರ್ಮ್ ಕಳೆದುಕೊಂಡಾಗಲು ರಾಹುಲ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ (Temple)ಕ್ಕೆ ಬಂದು ಕೈ ಮುಗಿದಿದ್ದರೂ ಅದಾದ ಬಳಿಕ ಉತ್ತಮ ಪ್ರದರ್ಶನವನ್ನು ಕೂಡ ನೀಡಿದ್ದಾರೆ. ಹಾಗಾಗಿ ಇದೀಗ ಮತ್ತೆ ದೇವರಿಗೆ ಕೈ ಮುಗಿದಿರುವ ರಾಹುಲ್ ಮುಂಬರುವ ಬಾಂಗ್ಲಾದೇಶದ ಸರಣಿಯಲ್ಲಿ ಮತ್ತೆ ಫಾರ್ಮಿಗೆ ಮರಳುತ್ತಾರಾ ಎನ್ನುವುದು ಅಭಿಮಾನಿಗಳಲ್ಲಿ ಇರುವ ಕುತೂಹಲ.
ಇನ್ನು ಕೆ ಎಲ್ ರಾಹುಲ್ ಗಾಸಿಪ್ ಗಳಿಂದಲೂ ಕೂಡ ದೂರ ಇಲ್ಲ. ರಾಹುಲ್ ಅವರು ಅಥಿಯಾ ಶೆಟ್ಟಿ (athiya Shetty) ಅವರ ಜೊತೆ ಮದುವೆಯಾಗುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಹಾಗಾಗಿ ಕೆಎಲ್ ರಾಹುಲ್ ದೇವಸ್ಥಾನಕ್ಕೆ ಹೋಗಿ ಯಾವ ವರ ಬೇಡಿದ್ದಾರೆ ಅಂತ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕುಕ್ಕೆ ಸುಬ್ರಮಣ್ಯ ದೇವರು ಕೆ ಎಲ್ ರಾಹುಲ್ ಅವರ ಬೇಡಿಕೆಯನ್ನು ಈಡೇರಿಸುವುದರ ಜೊತೆಗೆ ಟೀಮ್ ಇಂಡಿಯಾ ಬಾಂಗ್ಲಾದೇಶದ ಸರಣಿಯಲ್ಲಿ ಗೆಲ್ಲುವಂತೆ ಮಾಡಿದರೆ ಸಾಕು ಅಂತ ಕ್ರಿಕೆಟ್ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.