Kannada Serial: ರಾಜ್ಯವನ್ನೇ ಗಮನ ಸೆಳೆದಿದ್ದ ಚಲುವೆ ದಿವ್ಯ ಸುರೇಶ್ಗೆ ತ್ರಿಪುರ ಸುಂದರಿ ಧಾರವಾಹಿಯಲ್ಲಿ ನಾಯಕ ಯಾರು ಗೊತ್ತೇ? ನೀವಂದುಕೊಂಡವರಲ್ಲ; ಮತ್ಯಾರು ಗೊತ್ತಾ?

Kannada Serial: ಈ ಎರಡು ಧಾರಾವಾಹಿ (Serials) ಗಳ ಪ್ರೋಮೋ (Promo) ವನ್ನು ವಾಹಿನಿ (Channel)ಯು ಬಿಡುಗಡೆ ಮಾಡಿದ್ದು, ಬಹಳ ವಿಭಿನ್ನವಾಗಿ ಮೂಡಿಬಂದಿದೆ. ಅದರಲ್ಲೂ ತ್ರಿಪುರ ಸುಂದರಿ ಧಾರಾವಾಹಿಯ ಎರಡು ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಎರಡು ಪ್ರೋಮೋವನ್ನು ಜನರು ಮೆಚ್ಚಿಕೊಂಡಿದ್ದಾರೆ. ಈ ಧಾರಾವಾಹಿಯನ್ನು ನೋಡಲು ಜನರು ಕಾಯುತ್ತಿದ್ದಾರೆ. ತ್ರಿಪುರ ಸುಂದರಿ (Tripura Sundari) ಧಾರಾವಾಹಿಯ ನಾಯಕ ನಟಿಯಾಗಿ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ಅವರು ಅಭಿನಯಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ದಿವ್ಯ ಸುರೇಶ ಅವರು ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಹರಡಿತ್ತು. ಅದಿಗ ನಿಜವಾಗಿದೆ.

ದಿವ್ಯ ಸುರೇಶ್ (Divya Suresh) ಅವರು ಬಿಗ್ ಬಾಸ್ ಸೀಸನ್-೮ ಸ್ಪರ್ಧಿಯಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಟ ಆಡುವ ಮೂಲಕ ಫೈನಲ್ ತಲುಪಿದ್ದರು. ಆದರೆ ಬಿಗ್ ಬಾಸ್ (Bigg Boss) ಬಳಿಕ ಎಲ್ಲಿಯೂ ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ದಿವ್ಯ ಸುರೇಶ್ ಅವರಿಗೆ ಬಿಗ್ ಬಾಸ್ ಬಳಿಕ ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದರು. ಅಭಿಮಾನಿಗಳೆಲ್ಲ ದಿವ್ಯ ಸುರೇಶ ಅವರು ಯಾವಾಗ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂದು ಕಾಯುತ್ತಿದ್ದರು. ಆದರೆ ದಿವ್ಯ ಸುರೇಶ್ ಅವರು ಬೆಳ್ಳಿ ಪರದೆ ಬಿಟ್ಟು ಕಿರುತೆರೆ ಕಡೆ ಮುಖ ಮಾಡಿದ್ದಾರೆ. ಇದರಿಂದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇದನ್ನೂ ಓದಿ: Kannada Bigg Boss Season 9:  ವಾರಾಂತ್ಯದ ಬಿಗ್ ಎಲಿಮಿನೇಷನ್ಸ್; ಅಮೂಲ್ಯ ಜೊತೆಗೆ ಅರುಣ್ ಸಾಗರ್ ಕೂಡ ಮನೆಗೆ; ಅರುಣ್ ಔಟ್ ಆಗೋದಕ್ಕೆ ಅಸಲಿ ಕಾರಣ ವೋಟಿಂಗ್ ಅಲ್ವಂತೆ ನೋಡಿ!?

ದಿವ್ಯ ಸುರೇಶ ಅವರು ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ಆಮ್ರಪಾಲಿ ಎನ್ನುವ ಗಂಧರ್ವ ಕನ್ಯೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ಆಮ್ರಪಾಲಿಯು ಗಂಧರ್ವ ರಾಜಕುಮಾರನನ್ನು ಹುಡುಕಿಕೊಂಡು ಭೂ ಲೋಕಕ್ಕೆ ಬರುತ್ತಾಳೆ. ಗಂಧರ್ವ ರಾಜನಿಗೆ ರಾಜಕುಮಾರನ ಜೊತೆಗೆ ಬರುತ್ತೇನೆ ಎಂದು ಮಾತನ್ನು ನೀಡಿ ಬಂದಿರುತ್ತಾಳೆ. ಇದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಇದನ್ನೂ ಓದಿ: Kannada Recipe: ಆಂಧ್ರ ಶೈಲಿಯಲ್ಲಿ ಇಂಥ ಒಂದು ಪುಳಿಯೋಗರೆ ಮಾಡಿದರೆ ಮನೆಯವರು ಚಪ್ಪರಿಸಿಕೊಂಡು ತಿಂತಾರೆ; ಹತ್ತು ನಿಮಿಷದ ಬೆಸ್ಟ್ ಬ್ರೇಕ್ ಫಾಸ್ಟ್ ರೆಸಿಪಿ ನೋಡಿ!

ಈ ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನಾಯಕ ನಟನಾಗಿ ನನ್ನರಸಿ ರಾಧೆ ಖ್ಯಾತಿಯ ಅಭಿನವ್ ವಿಶ್ವನಾಥನ್ (Abhinav Vishwanathan) ಅವರು ಅಭಿನಯಿಸುತ್ತಿದ್ದಾರೆ. ಇವರು ಇದರಲ್ಲಿ ಗಂಧರ್ವ ರಾಜಕುಮಾರನಾಗಿರುತ್ತಾನೆ. ಆದರೆ ಕಾರಣನಾಂತರಗಳಿಂದ ಆತ ಶಿಶುವಿರುವಾಗಲೇ ಭೂಮಿಗೆ ಬರಬೇಕಾಗುತ್ತದೆ. ಇಲ್ಲಿ ಒಬ್ಬ ಶ್ರೀಮಂತನ ಮನೆಯಲ್ಲಿ ಬೆಳೆದಿರುತ್ತಾನೆ. ಇತನನ್ನು ಹುಡುಕಿ ತ್ರಿಪುರ ಸುಂದರಿ ಆಮ್ರಪಾಲೆ ಬರುತ್ತಾಳೆ. ಇದನ್ನೂ ಓದಿ: Kannada Film: ಶುರುವಾಯಿತು ಯಶ್ ರವರಿಗೆ ಬಾಲಿವುಡ್ ಮೇಲೆ ಅತಿಯಾದ ಪ್ರೀತಿ: ಬಾಲಿವುಡ್ ಬಗ್ಗೆ ಹೇಳಿದ್ದೇನು ಗೊತ್ತೇ?

ಅಭಿನವ್ ಅವರು ನನ್ನರಸಿ ರಾಧೆ ಧಾರಾವಾಹಿಯಲ್ಲಿ ಮನೋಜ್ಞವಾಗಿ ಅಭಿನಯಿಸುವ ಮೂಲಕ ಒಂದಿಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ನನ್ನರಸಿ ರಾಧೆ ಧಾರಾವಾಹಿ ಮುಗಿದ ಬಳಿಕ ಇವರನ್ನು ತೆರೆಯ ಮೇಲೆ ನೋಡಲಾಗುವುದಿಲ್ಲವಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದರು. ಮತ್ತೆ ಕಂಬ್ಯಾಕ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

bigg boss kannada season 9Divya SureshKannada serialLifestyleTripura Sundariಕನ್ನಡ ಬಿಗ್ ಬಾಸ್ ಸೀಸನ್ 9