Vaikunta ekadashi 2023: ಹಿಂದೂ ಧರ್ಮದಲ್ಲಿ ವೈಕುಂಠ ಏಕಾದಶಿಗೆ ಹೆಚ್ಚು ಮಹತ್ವ ಇದೆ ಶ್ರೀ ಮಹಾವಿಷ್ಣುವನ್ನು ಪೂಜಿಸುವಂತಹ ವೈಕುಂಠ ಏಕಾದಶಿ ಬಹಳ ಪವಿತ್ರವಾದ ಆಚರಣೆಗಳಲ್ಲಿ ಒಂದು. ಇಂದು ಹೊಸ ವರ್ಷದ ಮೊದಲ ವೈಕುಂಠ ಏಕಾದಶಿ ಈ ದಿನ ಸಾಕಷ್ಟು ಜನ ಉಪವಾಸ ಇದ್ದು ದೇವರ ನಾಮ ಪೂಜಿಸುತ್ತಾರೆ. ಈ ದಿನ ಚಂದ್ರನ ಸ್ಥಾನ ಬದಲಾವಣೆಯಿಂದ ಯಾವ ರಾಶಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ನೋಡೋಣ ಬನ್ನಿ.
ಇಂದು 2023ರ ಮೊದಲ ಸೋಮವಾರ. ಚಂದ್ರನು ಮೇಷ ರಾಶಿಯಿಂದ ವೃಷಭ ರಾಶಿಗೆ ತನ್ನ ಪ್ರಯಾಣ ಆರಂಭಿಸುತ್ತಾನೆ. ಈ ದಿನ ಸಿಂಹ, ವೃಶ್ಚಿಕ, ಕುಂಭ ರಾಶಿಯವರು ಯಾವುದೇ ಕೆಲಸ ಮಾಡಿದರು ಯಶಸ್ಸು ಕಟ್ಟಿಟ್ಟ ಬುತ್ತಿ.
ಸಿಂಹ ರಾಶಿ; ಈ ದಿನ ನಿಮಗೆ ಬಹಳ ಒಳ್ಳೆಯ ದಿನ ಕೆಲಸ ಮಾಡುವ ಸ್ಥಳದಲ್ಲಿ ಬಹಳ ಆರಾಮದಾಯಕವಾಗಿ ಕಾರ್ಯವನ್ನು ನಿರ್ವಹಿಸುತ್ತೀರಿ. ನೆಮ್ಮದಿಯ ಜೀವನ ಇಂದು ನಿಮ್ಮ ಪಾಲಿಗೆ ಒಲಿದು ಬರಲಿದೆ. ನಿಮ್ಮ ಪ್ರೀತಿಯ ಸಂಗಾತಿಯ ಜೊತೆಗೆ ಹೆಚ್ಚು ಸಮಯವನ್ನು ಕಳೆಯುತ್ತೀರಿ ಗುರು ಹಿರಿಯರ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಕುಟುಂಬದ ಹಿರಿಯರ ಆರೋಗ್ಯ ಸಮಸ್ಯೆಯನ್ನು ನೀವು ಆಸ್ಪತ್ರೆಗೆ ಓಡಾಡುವ ಸಾಧ್ಯತೆಯೂ ಇದೆ. ಇನ್ನು ಕೆಲಸದ ವಿಚಾರಕ್ಕೆ ಬಂದರೆ ನೀವು ಸಾಕಷ್ಟು ಕಲಿಯಬೇಕು ನಿಮಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು ಹಾಗೆ ಮಾಡಿದರೆ ಪ್ರಶಂಸೆಯನ್ನು ಕಳಿಸಿಕೊಳ್ಳುತ್ತೀರಿ. ತಪ್ಪದೇ ವಿಷ್ಣು ಸಹಸ್ರನಾಮವನ್ನು ಪಠಿಸಿ. ಇದನ್ನೂ ಓದಿ: Temple Story: ಇಷ್ಟಾರ್ಥಗಳು ಸಿದ್ಧಿಸಬೇಕು ಅಂದ್ರೆ ತಿರುಪತಿ ತಿಮ್ಮಪ್ಪನಿಗೂ ಮೊದಲು ವರಾಹ ಸ್ವಾಮಿಯ ದರ್ಶನ ಮಾಡ್ಲೇಬೇಕು; ಯಾಕೆ ಗೊತ್ತಾ? ಇದು ದೇವರ
ವೃಶ್ಚಿಕ ರಾಶಿ; ವೃಶ್ಚಿಕ ರಾಶಿಯವರಿಗೆ ಇಂದು ತಮ್ಮ ಸಂಗಾತಿಯ ಜೊತೆ ಸಮಯ ಕಳೆಯಲು ಅನುಕೂಲಕರವಾದ ದಿನ. ಇಂದು ಸಿಕ್ಕಿಹಾಕಿಕೊಂಡಿದ್ದ ಹಣ ನಿಮಗೆ ತಿರುಗಿ ಸಿಗುತ್ತದೆ ಇದರಿಂದ ನಿಮ್ಮ ಧೈರ್ಯವೂ ಇಮ್ಮಡಿಯಾಗುತ್ತದೆ. ಮನೆಯಲ್ಲಿ ಹಿರಿಯರಿಂದ ಹಿಡಿದು ಕಿರಿಯರವರೆಗೆ ಎಲ್ಲರಿಂದಲೂ ಸಿಹಿ ಸುದ್ದಿ ಪಡೆಯುವ ಸಾಧ್ಯತೆ ಇದೆ. ಸಂಬಂಧಿಗಳು ಗುಡ್ ನ್ಯೂಸ್ ನೀಡಲಿದ್ದಾರೆ. ನೀವು ನಿಮ್ಮ ಕೋಪವನ್ನು ನಿಯಂತ್ರಣ ಮಾಡಿಕೊಂಡರೆ ಜೀವನವನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸಲು ಸಹಾಯಕವಾಗುತ್ತದೆ ಹಾಗಾಗಿ ಈ ಬಗ್ಗೆ ಇಂದಿನಿಂದಲೇ ಯೋಚಿಸಿ. ಇದು ನೆಮ್ಮದಿಯ ಜೀವನ ಕಳೆಯುತ್ತೀರಿ. ನಿಮ್ಮ ಕುಟುಂಬದ ಇತರ ಸದಸ್ಯರನ್ನು ಭೇಟಿ ಆಗುವ ಸಾಧ್ಯತೆ ಇದೆ ಒಟ್ಟಿನಲ್ಲಿ ಶುಭದಿನ ಇಂದು. ಸಾಧ್ಯವಾದರೆ ಹಸಿದವರಿಗೆ ಸಹಾಯ ಮಾಡಿ. ಇದನ್ನೂ ಓದಿ:Kannada Astrology: ಹೊಸ ವರ್ಷದಲ್ಲಿ ಹಣ ಪಡೆದು, ವರ್ಷ ಪೂರ್ತಿ ಶ್ರೀಮಂತರಾಗಬೇಕು ಎಂದರೆ, ಈ ಚಿಕ್ಕ ತಂತ್ರ ಅನುಸರಿಸಿ ಸಾಕು. ಏನು ಮಾಡಬೇಕು ಗೊತ್ತೆ?
ಕುಂಭ ರಾಶಿ; ಈ ದಿನ ನಿಮಗೆ ಶುಭದಿನ. ನೀವು ಕೆಲಸದ ವಿಚಾರದಲ್ಲಿ ಹೆಚ್ಚು ಪರಿಶ್ರಮ ಹಾಕುತ್ತಿರಿ ಇದರಿಂದ ನಿಮ್ಮ ಅಧಿಕಾರಿಗಳು ನಿಮ್ಮೊಂದಿಗೆ ಸಂತೋಷದಿಂದ ಇರುತ್ತಾರೆ. ದಿನನಿತ್ಯ ವ್ಯಾಪಾರ ಮಾಡುವವರಿಗೆ ಆದಾಯ ಹೆಚ್ಚಾಗುತ್ತದೆ. ವ್ಯಾಪಾರದ ನಿಮಿತ್ತ ನೀವು ಪ್ರಯಾಣ ಮಾಡಿದರೆ ಆ ಪ್ರಯಾಣವು ಲಾಭದಾಯಕವಾಗಿರುತ್ತದೆ. ಹೊಸ ವ್ಯಾಪಾರ ವಹಿವಾಟು ಆರಂಭಿಸಲು ಬಹುದು. ಕೌಟುಂಬಿಕ ಜೀವನದಲ್ಲಿ ತುಸು ಏರುಪೇರು ಇರಬಹುದು ಆದರೆ ಯಾರೊಂದಿಗೂ ಜಗಳವಾಡಬೇಡಿ. ಮನೆಯ ಹಿರಿಯರೊಂದಿಗೆ ಹೊಸ ಕೆಲಸದ ಬಗ್ಗೆ ಚರ್ಚೆ ಮಾಡಬಹುದು. ಇಂದು ತಪ್ಪದೇ ಶ್ರೀ ಕೃಷ್ಣನನ್ನು ಪಠಿಸಿ.