Vaishnavi: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಿಥುನ ರಾಶಿ (Mithuna Rashi) ಧಾರವಾಹಿ ಎಲ್ಲರ ಫೇವರೆಟ್ ಪಾತ್ರಗಳಲ್ಲಿ ಒಂದು. ಈ ಧಾರವಾಹಿಯ ನಾಯಕಿ ರಾಶಿ ಅಂದ್ರೆ ನಟಿ ವೈಷ್ಣವಿ ಅವರ ಪಾತ್ರ ವೀಕ್ಷಕರ ಫೇವರೆಟ್ ಪಾತ್ರಗಳಲ್ಲಿ ಒಂದು ಎಂದರೆ ತಪ್ಪಲ್ಲ. ಪಟಪಟ ಮಾತನಾಡುತ್ತಾ ಆಟೋ ಓಡಿಸಿ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದ ಹುಡುಗಿಯ ಪಾತ್ರ ಇದಾಗಿತ್ತು. ಈ ಪಾತ್ರದಲ್ಲಿ ವೈಷ್ಣವಿ ಅವರು ಅಚ್ಚುಕಟ್ಟಾಗಿ ನಟಿಸುತ್ತಿದ್ದಾರೆ. ಮಿಥುನ ರಾಶಿ ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲದ ವೈಷ್ಣವಿ ಅವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ ?
ವೈಷ್ಣವಿ ಅವರು ಮೊದಲಿಗೆ ಶಾಂತಮ್ ಪಾಪಂ ಕ್ರೈಮ್ ಸೀರೀಸ್ ಶೋನಲ್ಲಿ ನಟಿಸಿದ್ಧರು, ಬಳಿಕ ಮಿಥುನ ರಾಶಿ ಧಾರವಾಹಿಯಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಈ ಪಾತ್ರದಲ್ಲಿ ಬಹಳ ಚೆನ್ನಾಗಿ ನಟಿಸಿದ್ದರು ವೈಷ್ಣವಿ. ಹಾಗಾಗಿ ಧಾರವಾಹಿ ಮುಗಿದು ಒಂದು ವರ್ಷ ಆಗಿದ್ದರು ಕೂಡ ಕಿರುತೆರೆ ವೀಕ್ಷಕರು ಇನ್ನು ರಾಶಿ ಪಾತ್ರವನ್ನು ಮರೆತಿಲ್ಲ. ಮಿಥುನ ರಾಶಿ ನಂತರ ವೈಷ್ಣವಿ ಅವರು ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ತಮಿಳು ಮತ್ತು ಮಲಯಾಳಂ ಕಿರುತೆರೆಯಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ.
ತಮಿಳಿನ ಉಳ್ಳತೈ ಅಳ್ಳಿತ್ತ ಸೀರಿಯಲ್ ನಲ್ಲಿ ನಟಿಸಿ ಒಳ್ಳೆಯ ಹೆಸರು ಪಡೆದಿದ್ದ ವೈಷ್ಣವಿ ಅವರು ಈಗ ಮಲಯಾಳಂ ನ ಸೂರ್ಯ ಟಿವಿಯಲ್ಲಿ ಕಣ್ಣಿಲ್ ಪೂವು ಎನ್ನುವ ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸುಟ್ಟಿದ್ದಾರೆ. ಮಲಯಾಳಂ ಕಿರುತೆರೆ ವೀಕ್ಷಕರಿಗೆ ಬಹಳ ಇಷ್ಟವಾಗಿರುವ ವೈಷ್ಣವಿ ಅವರು ಇತ್ತೀಚೆಗೆ ನಡೆದ ಓಣಂ ಹಬ್ಬಕ್ಕಾಗಿ ಅಪ್ಪಟ ಕೇರಳ ಸಂಪ್ರದಾಯದ ರೀತಿಯಲ್ಲಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇನ್ನು ಕನ್ನಡದಲ್ಲಿ ವೈಷ್ಣವಿ ಅವರು ಧಾರವಾಹಿ ಮಾಡಿಲ್ಲ, ಆದರೆ ಉಂಡೆನಾಮ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಕಾಲ್ ಗರ್ಲ್ ಪಾತ್ರದಲ್ಲಿ ನಟಿಸಿದ್ದು, ಸಿನಿಮಾಗೆ ಒಳ್ಳೆಯ ಟ್ವಿಸ್ಟ್ ಕೊಡುವ ಪಾತ್ರ ಆಗಿದೆಯಂತೆ. ಈ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆ ಸಹ ಆಗಿದೆ. ಕೋಮಲ್ ಅವರು ಹೀರೋ ಆಗಿದ್ದು, ನಟಿ ಧನ್ಯಾ ಬಾಲಕೃಷ್ಣ ಹೀರೋಯಿನ್ ಆಗಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ವೈಷ್ಣವಿ ಅವರು ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ನೆಚ್ಚಿನ ನಟಿಯನ್ನು ಸಿನಿಮಾದಲ್ಲಿ ನೋಡಿ, ಅಭಿಮಾನಿಗಳು ಕೂಡ ಖುಷಿ ಪಟ್ಟಿದ್ದಾರೆ.