ಸಮಂತಾಅವರನ್ನು ಬಿಡದ ಕರಣ್ ಜೋಹರ್, ಪ್ರಶ್ನೆ ಕೇಳುವ ಬರದಲ್ಲಿ ನಯನಾತಾರಾಅವನ್ನು ಕೆಣಕಿದ್ದು ಹೇಗೆ ಗೊತ್ತೇ??

ಬಾಲಿವುಡ್ ನಲ್ಲಿ ಇಂದು ಹೆಚ್ಚು ಪ್ರಚಲಿತದಲ್ಲಿರುವ ಶೋ ಅಂದ್ರೆ ಅದು ಕಾಫಿ ವಿಥ್ ಕರಣ್. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಹಲವಾರು ಸೆಲಿಬ್ರೇಟಿಗಳು ಭಾಗವಹಿಸುತ್ತಾರೆ ತಮ್ಮ ಸಿನಿಮಾದಿಂದ ಹಿಡಿದು ವೈಯಕ್ತಿಕ ಜೀವನದ ವರೆಗೆ ಎಲ್ಲ ವಿಷಯಗಳನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಳ್ಳುತ್ತಾರೆ ಸೆಲೆಬ್ರಿಟಿಗಳು.

ಈ ಕಾರ್ಯಕ್ರಮ ಹೆಚ್ಚು ಚರ್ಚೆಗೆ ಒಳಗಾಗುವುದು ಹಾಗೂ ಹೆಚ್ಚು ಫೇಮಸ್ ಆಗಿರೋದು ಕರಣ್ ಜೋಹರ್ ಸೆಲೆಬ್ರಿಟಿಗಳಿಗೆ ಕೇಳುವ ಪ್ರಶ್ನೆಗಳು. ಹೌದು ಅವರ ವೈಯಕ್ತಿಕ ಜೀವನದ ಬಗ್ಗೆ ಆಗಲಿ ಅಥವಾ ಸಿನಿಮಾ ರೈವೆಲರಿ ಬಗ್ಗೆ ಆಗಲಿ ಕರುಣ ಜೋಹರ್ ಸ್ವಲ್ಪವೂ ಹಿಂಜರಿಕೆ ಇಲ್ಲದೆ ನೇರ ನೇರವಾಗಿ ಪ್ರಶ್ನೆಯನ್ನು ಕೇಳುತ್ತಾರೆ ಇದೇ ಕಾರಣಕ್ಕೆ ಕಾರಣ ಜೋಹರ್ ಅವರು ಕೂಡ ಸಾಕಷ್ಟು ಚರ್ಚೆಗೆ ಒಳಗಾಗುತ್ತಾರೆ ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಿರ್ಮಾಪಕ ಹಾಗೂ ನಿರ್ದೇಶಕ ನಟ ಕರಣ್ ಜೋಹರ್ ಸೆಲಿಬ್ರೆಟಿಗಳಿಗೆ ತಾವು ಕೇಳಬೇಕೆಂದುಕೊಂಡಿರುವ ಪ್ರಶ್ನೆಗಳನ್ನು ಸ್ವಲ್ಪವೂ ಹಿಂಜರಿಕೆ ಇಲ್ಲದೆ ಕೇಳುತ್ತಾರೆ.

ಕರಣ್ ಜೋಹರ್ ನಡೆಸಿಕೊಡುತ್ತಿರುವ ಕಾಫಿ ವಿತ್ ಕರಣ್ ಏಳನೆಯ ಸೀಸn ಪ್ರಸಾರವಾಗುತ್ತಿದೆ ಕಳೆದ ವಾರ ಕರಣ್ ಜೋಹರ್ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಹಾಗೂ ಸಮಂತ ರುತ್ ಪ್ರಭು ಭಾಗವಹಿಸಿದ್ದರು. ಈ ಸಂಚಿಕೆ ಕರಣ್ ಶೋಗೆ ತುಸು ಹೆಚ್ಚು ರಂಗನ ನೀಡಿತು ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಸದ್ಯ ಬಾಲಿವುಡ್ ನಲ್ಲಿ ಟಾಪ್ ನಟ ಎನಿಸಿಕೊಂಡಿರುವ ಅಕ್ಷಯ್ ಕುಮಾರ್ ಹಾಗೂ ಸೌತ್ ನಲ್ಲಿ ಟಾಪ್ ನಟಿ ಎನಿಸಿಕೊಂಡಿರುವ ಸಮಂತಾ ಒಟ್ಟಿಗೆ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಸಂತಸದ ವಿಷಯವಾಗಿತ್ತು.

ಕರಣ್ ಜೋಹರ್ ಇತ್ತೀಚಿಗೆ ವಿ’ಚ್ಛೇದನ ಪಡೆದ ಸಮಂತ ಅವರಿಗೆ ಈ ಕುರಿತು ಕೂಡ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೂ ಉತ್ತರವನ್ನು ನೀಡಿದ್ದಾರೆ ಸಮಂತ. ಇನ್ನು ಕರಣ್ ಜೋಹಾರ್ ಕೇಳಿದ ಇನ್ನೊಂದು ಪ್ರಶ್ನೆ ತಮಿಳುನಾಡಿ ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಸಿಟ್ಟು ಬರಿಸಿದೆ. ಅದೆಂತಹ ಪ್ರಶ್ನೆ ಕರಣ್ ಜೋಹರ್ ಕೇಳಿದ್ರು ಗೊತ್ತಾ?

ಕರಣ್ ಜೋಹರ್ ನಟಿ ಸಮಂತಾ ಬಳಿ ಇಂದು ದಕ್ಷಿಣ ಭಾರತದಲ್ಲಿ ಟಾಪ್ ನಟಿ ಯಾರು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ ಅದಕ್ಕೆ ಸಂಬಂಧಪಟ್ಟ ಹಿಂದೂ ಮುಂದು ನೋಡದೆ ನಯನತಾರ ಎಂದು ಉತ್ತರಿಸಿದರು ಆದರೆ ಕರಣ್ ಜೋಹರ್ ಮಾತ್ರ ನಯನತಾರ ನನ್ನ ಪಟ್ಟಿಯಲ್ಲಿ ಇಲ್ಲವೇ ಇಲ್ಲ ಅಂತ ಹೇಳಿದ್ದಾರೆ. ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಕರಣ್ ಜೋಹರ್ ಈ ಪ್ರಶ್ನೆಯನ್ನು ಕೇಳಿದ್ದಾರೆ ಈ ಪಟ್ಟಿಯಲ್ಲಿ ನಯನತಾರ ಹೆಸರಿನ ಬದಲು ಸಮೀಕ್ಷೆಯ ಪ್ರಕಾರ ಇರುವ ಹೆಸರು ಸಮಂತಾ ಅವರದ್ದು. ಹೀಗಾಗಿ ಟಾಪ್ ನಟಿಯಾಗಿರುವ ನಯನತಾರಾ ಅವರಿಗೆ ಅವಮಾನ ಮಾಡಲಾಗಿದೆ ಎಂದು ಅವರ ಅಭಿಮಾನಿಗಳು ಕರಣ್ ಜೋಹರ್ ವಿರುದ್ಧ ಟೀಕೆಯ ಪ್ರಹಾರವನ್ನ ಆರಂಭಿಸಿದ್ದಾರೆ.

ನಯನತಾರಾ ಇತ್ತೀಚಿಗಷ್ಟೇ ಬಹುಕಾಲದ ಗೆಳೆಯನಾಗಿದ್ದ ವಿಘ್ನೇಶ್ ಶಿವನ್ ಅವರನ ವಿವಾಹವಾಗಿದ್ದಾರೆ ಆದರೂ ಸಿನಿಮಾದಿಂದ ಮಾತ್ರ ನಯನತಾರಾ ಹಿಂದುಳಿದಿಲ್ಲ ಈಗಾಗಲೇ ಅವರ ಕೈಯಲ್ಲಿ ಕೆಲವು ಪ್ರಾಜೆಕ್ಟ್ಗಳಿವೆ ಅಲ್ಲದೆ ಬಾಲಿವುಡ್ ನಲ್ಲಿ ಶಾರುಖ್ ಖಾನ್ ನಟನೆಯ ಜವಾನ್ ಚಿತ್ರದಲ್ಲಿಯೂ ಕೂಡ ನಯನತಾರ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಲೇಡಿ ಸೂಪರ್ ಸ್ಟಾರ್ ಜಾಗವಣ ಯಾರೂ ತುಂಬಲು ಸಾಧ್ಯವೇ ಇಲ್ಲ ಅಂತ ನಯನತಾರ ಅಭಿಮಾನಿಗಳು ಕರಣ್ ಜೋಹರ್ ಅವರ ವಿರುದ್ಧ ಸಿಟ್ಟಿಗೆದ್ದಾರೆ.

Comments (0)
Add Comment