Chiranjeevi: ತನ್ನ ಸ್ವಂತ ಮಗಳಿಗಾಗಿ ಸಿನಿಮಾ ಮಾಡಲು ಸಿದ್ಧವಾದ ಚಿರು: ಯಾಕೆ ಈ ದೃಢ ನಿರ್ಧಾರ ಗೊತ್ತೇ?? ದಿಡೀರ್ ಎಂದು ಬದಲಾಗಿದ್ದು ಯಾಕೆ ಗೊತ್ತೇ?

Chiranjeevi: ಮೆಗಾಸ್ಟಾರ್ ಚಿರಂಜೀವಿ ಅವರು ಇಂದಿಗೂ ಎವರ್ ಗ್ರೀನ್ ಸ್ಟಾರ್ ಆಗಿ ಹೆಸರು ಮಾಡಿರುವವರು. ಇತ್ತೀಚೆಗೆ ಇವರ ವಾಲ್ಟರ್ ವೀರಯ್ಯ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಇದರಿಂದ ಚಿರಂಜೀವಿ ಅವರು ಮತ್ತೆ ಸಕ್ಸಸ್ ಟ್ರ್ಯಾಕ್ ಗೆ ಬಂದಿದ್ದಾರೆ. ಈ ಸಿನಿಮಾ ನಂತರ ಚಿರಂಜೀವಿ ಅವರು ಭೋಲಾ ಶಂಕರ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ತಮನ್ನಾ ಅವರು ಹೀರೋಯಿನ್ ಆಗಿ ನಟಿಸಿದ್ದು, ಕೀರ್ತಿ ಸುರೇಶ್ ಅವರು ಚಿರಂಜೀವಿ ಅವರ ತಂಗಿ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: kannada News: ರಾಹುಲ್ ಗಾಂಧಿ ರವರಿಗೆ ಸಿಕ್ಕ ಮೀನಿನ ವಿಶೇಷತೆ ಏನು ಗೊತ್ತೇ?? ಇದು ಅಂತಿಂತ ಮೀನು ಅಲ್ಲ, ಎಷ್ಟೆಲ್ಲ ವಿಶೇಷತೆ ಗೊತ್ತೇ?

ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇನ್ನುಮುಂದೆ ಚಿರಂಜೀವಿ ಅವರು ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರೆ. ಅದಕ್ಕಾಗಿ ಕೆಲವು ಕಥೆಗಳನ್ನು ಸಹ ಕೇಳುತ್ತಿದ್ದಾರೆ. ಬಿಂಬಿಸಾರ ಸಿನಿಮಾ ನಿರ್ದೇಶನ ಮಾಡಿದ ವಸಿಷ್ಠ ಅವರೊಡನೆ ಮುಂದಿನ ಸಿನಿಮಾ ಮಾಡಬಹುದು ಎಂದು ಸೂಚನೆ ಸಿಕ್ಕಿದ್ದು, ಇದರ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ.

ಚಿರಂಜೀವಿ ಅವರು ಈ ಸಿನಿಮಾಗಳ ಜೊತೆಗೆ ತಮ್ಮ ಮಗಳು ಸುಶ್ಮಿತಾ ಅವರಿಗಾಗಿ ಸಿನಿಮಾ ಕಥೆಗಳನ್ನು ಕೇಳುವುದಕ್ಕೆ ಶುರು ಮಾಡಿದ್ದಾರೆ. ಸುಶ್ಮಿತಾ ಅವರು ಗೋಲ್ಡ್ ಬಾಕ್ಸ್ ಎಂಟರ್ಟೈನ್ಮೆಂಟ್ಸ್ ಹೆಸರಿನ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದು, ಈ ಬ್ಯಾನರ್ ನಲ್ಲಿ ಶೂಟ್ ಅಟ್ ಆಲೆರು ಹಾಗೂ ಸೇನಾಪತಿ ಹೆಸರಿನ ಎರಡು ವೆಬ್ ಸೀರೀಸ್ ಗಳನ್ನು ನಿರ್ಮಾಣ ಮಾಡಲಾಗಿದೆ. ಇದರ ಬೆನ್ನಲ್ಲೇ ಚಿರಂಜೀವಿ ಅವರು ಮಗಳಿಗೋಸ್ಕರ ಕಥೆ ಕೇಳುತ್ತಿದ್ದಾರೆ, ಮಗಳಿಗೋಸ್ಕರ ಸಿನಿಮಾ ಮಾಡುವುದಕ್ಕೆ ನಿರ್ಧಾರ ಮಾಡಿದ್ದಾರೆ.

ಇದೀಗ ಚಿರಂಜೀವಿ ಅವರ ಲಿಸ್ಟ್ ನಲ್ಲಿ ವೆಂಕಿ ಕುಡುಮುಲ, ಕಲ್ಯಾಣ್ ಕೃಷ್ಣ ಕುರಸಾಲ, ಹಾಗೂ ತಮಿಳು ನಿರ್ದೇಶಕ ಪಿ.ಎಸ್.ಮಿತ್ರನ್ ಅವರು ಇದ್ದು, ಈ ಮೂವರು ಹೇಳಿರುವ ಒನ್ ಲೈನ್ ಸ್ಟೋರಿ ಚಿರು ಅವರಿಗೆ ಇಷ್ಟವಾಗಿ, ಕಥೆ ಸಿದ್ಧಪಡಿಸಲು ಹೇಳಿದ್ದಾರಂತೆ. ಅದರಲ್ಲಿ ಯಾರ ಕಥೆ ಇಷ್ಟ ಆಗುತ್ತದೆಯೋ ಆ ಕಥೆಯನ್ನು ಚಿರಂಜೀವಿ ಅವರು ಸಿನಿಮಾ ಮಾಡಲಿದ್ದಾರೆ. ಚಿರಂಜೀವಿ ಅವರ ಈ ನಿರ್ಧಾರ ಅವರ ಮಗಳಿಗೆ ಹಿಟ್ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಏಕೆಂದರೆ ಚಿರು ಅವರ ಸ್ಕ್ರಿಪ್ಟ್ ಸೆಲೆಕ್ಷನ್ ಅಷ್ಟು ಚೆನ್ನಾಗಿರುತ್ತದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನೂ ಓದಿ: TRAI: ಹೊಸ ನಿಯಮ ಬಿಡುಗಡೆ ಮಾಡಿದ ಟ್ರಾಯ್: ನಾಳೆ ಇಂದ ಏನೆಲ್ಲಾ ಬದಲಾಗಲಿದೆ ಗೊತ್ತೇ? ಜನ ಸಾಮಾನ್ಯರಿಗೆ ನಿಟ್ಟುಸಿರು.

Comments are closed.