Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಮತ್ತೊಂದು ಹೊಸ ಟ್ವಿಸ್ಟ್ ; ಮಕ್ಕಳನ್ನು ಬಲವಂತವಾಗಿ ಕೂಡಿಹಾಕಿ ತಾಂಡವ್ ಮಾಡಲು ಹೊರಟಿದ್ದೇನು ಗೊತ್ತಾ?

Kannada Serial: ಸದ್ಯಕ್ಕೆ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್ ಗಳು ನಡೆಯುತ್ತಿವೆ. ಅಪ್ಪ ಅಮ್ಮ ಇಬ್ಬರು ಕೂಡ ತಮ್ಮನ್ನ ಬಿಟ್ಟು ಹೋಗಬಾರದು ಎನ್ನುವ ಕಾರಣಕ್ಕಾಗಿ ಮನೆಯಲ್ಲಿ ಮಕ್ಕಳಾಗಿರುವ ತನ್ವಿ ಹಾಗೂ ತನ್ಮಯ್ ಇಬ್ಬರೂ ಕೂಡ ನಾಟಕ ಆಡ್ತಿದ್ದಾರೆ. ಪೂಜಾ ಪ್ಲಾನ್ ಪ್ರಕಾರನೇ ಎಲ್ಲರೂ ಒಟ್ಟಿಗೆ ಇರಬೇಕು ಎನ್ನುವ ಕಾರಣಕ್ಕಾಗಿ ಅವಳು ಹೇಳಿದಂತೆ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಆದರೆ ತಾಂಡವ್ಗೆ ಈ ವಿಚಾರ ತಿಳಿದು ಮಕ್ಕಳ ಮೇಲೆ ಕೋಪಗೊಳ್ಳುತ್ತಾನೆ. ಮನೆಯವರನ್ನೆಲ್ಲಾ ಒಟ್ಟುಗೂಡಿಸಿರುವಂತಹ ತಾಂಡವ್ ತಮ್ಮ ಈ ರೀತಿ ಸುಳ್ಳು ನಾಟಕ ಆಡೋದಕ್ಕೆ ಭಾಗ್ಯನೇ ಕಾರಣ ಎನ್ನುವುದಾಗಿ ಬಯ್ಯುತ್ತಾನೆ. ಕುಸುಮ ಹಾಗೂ ಧರ್ಮರಾಜ್ ಗೆ ಈ ವಿಚಾರ ಗೊತ್ತಿದ್ರು ಕೂಡ ಸುಮ್ನೆ ಇದ್ದಾರೆ ಎನ್ನುವುದಾಗಿ ತಿಳಿದು ಮತ್ತಷ್ಟು ಕೋಪಗೊಳ್ಳುತ್ತಾನೆ.

ಮಗ ತನ್ಮಯ್ ಈ ರೀತಿ ತಲೆ ಸುತ್ತಿ ಬಂದವರಂತೆ ನಾಟಕ ಮಾಡುತ್ತಿದ್ದಾನೆ ನಾನು ಎಷ್ಟೆಲ್ಲಾ ರಿಸರ್ಚ್ ಮಾಡಿದ್ದೇನೆ ಹಾಗೂ ಡಾಕ್ಟರ್ ಬಳಿ ಹೋಗಿದ್ದೇನೆ, ಎಷ್ಟು ಚಿಂತೆ ಮಾಡಿಕೊಂಡಿದ್ದೇನೆ ಅನ್ನೋದರ ಬಗ್ಗೆ ನಿಮಗೇನಾದ್ರೂ ಗೊತ್ತಾ ಅನ್ನೋದಾಗಿ ಹೇಳುತ್ತಿದ್ದಾನೆ. ಇದಕ್ಕೆ ಧರ್ಮರಾಜ ನಿನ್ನ ಮಗ ಸುಳ್ಳು ಹೇಳ್ತಿರೋದು ಹಾಗೂ ನಾಟಕ ಮಾಡುತ್ತಿರುವುದು ಒಂದು ಒಳ್ಳೆಯ ಉದ್ದೇಶಕ್ಕಾಗಿ ಅದಕ್ಕಾಗಿ ನಾವು ಅವನಿಗೆ ಸಪೋರ್ಟ್ ಮಾಡುತ್ತಿದ್ದೇವೆ ಅನ್ನುವುದಾಗಿ ಧರ್ಮರಾಜ್ ಹೇಳ್ತಾನೆ.

ತಂದೆ ಸೇರಿದಂತೆ ಮನೆಯವರೆಲ್ಲರೂ ಕೂಡ ಭಾಗ್ಯದ ಪರವಾಗಿ ನಿಂತಿರುವುದನ್ನು ನೋಡಿದಂತಹ ತಾಂಡವ್ ಕೋಪಗೊಂಡು, ಮಕ್ಕಳಿಗಾಗಿ ಇಷ್ಟೊಂದು ಸಮಯ ನಾನು ಸಹಿಸಿಕೊಂಡಿದ್ದೆ, ಇನ್ಮುಂದೆ ನೀವೆಲ್ಲ ಒಂದು ಹಾಗೂ ನಾನು ಒಬ್ಬನೇ ಇದ್ದರೂ ಕೂಡ ಪರ್ವಾಗಿಲ್ಲ ಕೂಡ್ಲೇ ನಾನು ಭಾಗ್ಯಳಿಗೆ ಡಿವೋರ್ಸ್ ನೀಡುತ್ತೇನೆ ಈ ಕೂಡಲೇ ಅವಳು ಮನೆ ಬಿಟ್ಟು ಹೊರಗಡೆ ಹೋಗಬೇಕು ಮಕ್ಕಳು ಹಾಗು ನೀವಿಬ್ರು ನನ್ನ ಜೊತೆ ಇರಬೇಕು ಅನ್ನೋದಾಗಿ ತನ್ನ ತಂದೆ ತಾಯಿ ಮತ್ತು ಮಕ್ಕಳಿಗೆ ತಾಂಡವ್ ಹೇಳ್ತಾನೆ. ಇದರಿಂದಾಗಿ ಕುಸುಮ ಹಾಗೂ ಧರ್ಮರಾಜ್ ಇಬ್ಬರಿಗೂ ಕೂಡ ಬೇಸರವಾಗುತ್ತೆ.

ನೀನಿನ್ನು ಈ ಮನೆಯಲ್ಲಿ ಇರೋ ಹಾಗಿಲ್ಲ ಅನ್ನುವುದಾಗಿ ಭಾಗ್ಯಳನ್ನ ತಾಂಡವ್ ಮನೆಯಿಂದ ಹೊರಗೆ ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಾನೆ ಆಗ ಮಕ್ಕಳಿಬ್ಬರು ಕೂಡ ಬಂದು ತಂದೆಯನ್ನು ತಡೆಯುತ್ತಾರೆ. ಮಕ್ಕಳಿಬ್ಬರನ್ನು ಕೂಡ ರೂಮಿನಲ್ಲಿ ಕೂಡಿ ಹಾಕಿ ತಾಂಡವ್ ಭಾಗ್ಯಗಳನ್ನು ಮತ್ತೆ ಮನೆಯಿಂದ ಹೊರ ತಳ್ಳೋದಕ್ಕೆ ಹೋದಾಗ ಕುಸುಮ ತಡೆಯೋದಕ್ಕೆ ಬರ್ತಾಳೆ. ಆಗ ತಾಂಡವ್ ಕೋಪಗೊಂಡು ನಾನು ದುಡಿದುಕೊಂಡು ಬಂದು ತಂದು ಹಾಕಿದ್ದನ್ನು ನೀವು ತಿಳಿದುಕೊಂಡು ಸುಮ್ಮನೆ ಬಿದ್ದಿರಬೇಕು ಅನ್ನೋದಾಗಿ ಹೇಳಿದಾಗ ತಾಯಿ ಬೇಸರಗೊಳ್ಳುತ್ತಾಳೆ. ತಮ್ಮ ಮಗ ಬದಲಾಗಿರುವುದನ್ನ ಗಮನಿಸಿ ಕುಸುಮ ಹಾಗೂ ಧರ್ಮರಾಜ್ ಕೂಡ ಮರಗುತ್ತಾರೆ.

ಸುಂದ್ರಿಯನ್ನ ಮನೆಯಿಂದ ಹೊರದಬ್ಬಿದ ಶ್ರೇಷ್ಠ

ಮಕ್ಕಳ ಬಗ್ಗೆ ಶ್ರೇಷ್ಠ ಬೈಯುತ್ತಿರುವ ಬಗ್ಗೆ ಸುಂದ್ರಿ ಮಕ್ಕಳಿಗೆ ಈ ರೀತಿ ಬಯ್ಯೋದು ಸರಿಯಲ್ಲ ಅನ್ನೋದಾಗಿ ಹೇಳಿದಾಗ ಅವಳ ಬ್ಯಾಗ್ ಅನ್ನು ಮನೆಯಿಂದ ಹೊರಹಾಕಿ ಈಗಲೇ ಮನೆ ಬಿಟ್ಟು ಹೋಗುವಂತ ಹೇಳುತ್ತಾಳೆ ಹಾಗೂ ಇದರ ಬಗ್ಗೆ ಕುಸುಮ ಆಗಬೇಕಾದರೂ ಹೇಳು ಮನೆ ಓನರ್ಗೆ ಬೇಕಾದರೂ ಹೇಳು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಅನ್ನುವುದಾಗಿ ಶ್ರೇಷ್ಠ ಹೇಳುತ್ತಾಳೆ. ಈಗ ಭಾಗ್ಯಲಕ್ಷ್ಮಿ ಧಾರವಾಹಿಯನ್ನು ನೋಡುತ್ತಿರುವಂತಹ ಪ್ರತಿಯೊಬ್ಬರು ಕೂಡ ಭಾಗ್ಯ ಮನೆಯಿಂದ ಹೊರಗೆ ಹೋಗೋದು ತಪ್ಪುತ್ತಾ, ಕುಸುಮ ಬಳಿ ಸುಂದರಿ ನಿಜ ವಿಚಾರವನ್ನು ಹೇಳ್ತಾಳಾ ಅನ್ನೋದೇ ಕುತೂಹಲಕರವಾಗಿದೆ.

Comments are closed.