Bhagyalakshmi Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಬಿಗ್ ಟ್ವಿಸ್ಟ್. ಕುಸುಮ ಮಾಡೋಕೆ ಹೊರಟಿರುವುದು ಏನು ಗೊತ್ತಾ?

Bhagyalakshmi Serial: ಕಳೆದ ಸಾಕಷ್ಟು ಸಮಯಗಳಿಂದ ಭಾಗ್ಯಲಕ್ಷ್ಮಿ ಧಾರವಾಹಿಯನ್ನು ನೋಡುತ್ತಿರುವಂತಹವರು ಯಾವ ರೀತಿಯಲ್ಲಿ ಭಾಗ್ಯಗೆ ತಾಂಡವ್ ಕಾಟ ಕೊಡುತ್ತಿದ್ದಾನೆ ಅನ್ನೋದನ್ನ ನೋಡಿರುತ್ತೀರಿ. ಈಗ ಭಾಗ್ಯ ಕೂಡ ತಿರುಗೇಟು ನೀಡುವುದಕ್ಕೆ ಸಜ್ಜಾಗಿ ನಿಂತಿದ್ದಾಳೆ. ಬನ್ನಿ ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ. ಯಾಕೆಂದ್ರೆ ಭಾಗ್ಯಲಕ್ಷ್ಮಿ ಧಾರವಾಹಿಯ ವೀಕ್ಷಕರು ಧಾರವಾಹಿಯ ಪ್ರತಿಯೊಂದು ಟ್ವಿಸ್ಟ್ ಆಗು ಟರ್ನ್ ಗಳನ್ನು ನೋಡೋದಕ್ಕೆ ಇಷ್ಟ ಪಡ್ತಾರೆ. ಹೀಗಾಗಿ ಈ ಅಪ್ಡೇಟ್ಗಳು ಅವರಿಗೆ ಪ್ರಮುಖವಾಗಿರುತ್ತವೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ನೀವು ತಾಳಿ ಕಟ್ಟಿದೀರೆನೋ ಧೈರ್ಯಕ್ಕೆ ನಾನು ಈ ರೀತಿ ಮಾತನಾಡುತ್ತಿರುವುದು ನನಗೆ ಮಕ್ಕಳು ಹಾಗೂ ಮಾವ ಕೂಡ ಇದ್ದಾರೆ ಅನ್ನೋದು ಕೂಡ ಬಲವಾಗಿದೆ ಎಂದು ಭಾಗ್ಯ ಹೇಳ್ತಾಳೆ. ಇದೇ ಸಂದರ್ಭದಲ್ಲಿ ನಾನು ಸುಳ್ಳು ಹೇಳಿದ್ದರಿಂದನೇ ಈಗಲಾಯಿತು ಅಂತ ಗುಂಡಣ್ಣ ತನ್ವಿ ಬಳಿ ಅಳ್ತಾ ಹೇಳ್ತಾನೆ. ನನ್ನಿಂದಾನೆ ಅಮ್ಮ ಮನೆ ಬಿಟ್ಟು ಹೋಗ್ತಾ ಇರೋದು ಅಂತಾನೇ ಗುಂಡಣ್ಣ ಅಳುತ್ತಾ ಹೇಳ್ತಾ ಇರ್ತಾನೆ. ಆ ಸಂದರ್ಭದಲ್ಲಿ ಬಾಗಿಲ ಬಳಿ ಸದ್ದಾಗುತ್ತದೆ ಹಾಗೂ ಅಮ್ಮ ಬರ್ತಾಳೆ. ಆಗ ಅವಳನ್ನು ತಬ್ಬಿ ಹಿಡಿದು ಅಳುತ್ತಾ ನೀನು ಎಲ್ಲಿಗೂ ಕೂಡ ಹೋಗೋದಿಲ್ಲ ಅಲ್ವಾಮ್ಮ ಎಂಬುದಾಗಿ ಕೇಳ್ತಾನೆ.

ನೀವು ಇಬ್ಬರು ಒಟ್ಟಿಗೆ ಇರಲಿ ಅಂತ ನಾವು ಈ ರೀತಿ ಮಾಡಿದ್ದು ಅದನ್ನ ಬಿಟ್ರೆ ಬೇರೆ ಯಾವ ಉದ್ದೇಶ ಕೂಡ ಇರ್ಲಿಲ್ಲ ಅನ್ನೋದಾಗಿ ಇಬ್ಬರೂ ಕೂಡ ಅಮ್ಮನನ್ನ ಅಪ್ಪಿ ಹಿಡಿದು ಅಳುತ್ತಾ ಹೇಳುತ್ತಾರೆ. ಈ ಸಂದರ್ಭದಲ್ಲಿ ಗುಂಡಣ್ಣ ಕೂಡ ಅಮ್ಮನ ಮನ್ನು ನೀನು ಬಿಟ್ಟು ಹೋಗೋದಿಲ್ಲಾ ಅಲ್ವಾ ಅಮ್ಮ ಅನ್ನೋದಾಗಿ ಹೇಳ್ತಾನೆ. ಅದಕ್ಕೆ ಭಾಗ್ಯ ನಿಮ್ಮಿಬ್ಬರಿಗೂ ನಾನು ಹಾಗೂ ನಿನ್ನ ಅಪ್ಪ ಇಬ್ಬರೂ ಒಟ್ಟಿಗೆ ಇರಬೇಕು ಅನ್ನೋದೆ ಆಸೆ ಅಲ್ವಾ ಹೀಗಾಗಿ ನಾನು ಎಲ್ಲಿಗೂ ಹೋಗೋದಿಲ್ಲ ಇಲ್ಲೇ ನಿಮ್ಮ ಮುಂದೆ ಇರ್ತೀನಿ ಅನ್ನೋದಾಗಿ ಭಾಗ್ಯ ಹೇಳ್ತಾಳೆ.

ಈಗ ಭಾಗ್ಯ ಕೂಡ ಎದುರು ಮಾತಾಡ್ತಿರೋದನ್ನ ನೋಡಿ ತಾಂಡವ ಕೂಡ ತಲೆ ಕೆಟ್ಟವನಂತೆ ಆಡುತ್ತಿದ್ದಾನೆ. ಭಾಗ್ಯ್ಯಾಳ ಬಗ್ಗೆ ತಾಂಡವ ಸಂಪೂರ್ಣವಾಗಿ ಕೋಪ ಮಾಡಿಕೊಂಡಿದ್ದಾನೆ ಎಂಬುದನ್ನ ನೀವು ಈ ಸನ್ನಿವೇಶದಲ್ಲಿ ತಿಳಿದುಕೊಳ್ಳಬಹುದಾಗಿದೆ. ಇನ್ನು ಇದರ ಬಗ್ಗೆ ಕುಸುಮಾಳ ಬಳಿ ಕೂಡ ತಾಂಡವ್ ಜಗಳ ಆಡೋಕೆ ಹೋಗ್ತಾನೆ. ಆಗ ಕೋಪಗೊಂಡ ಕುಸುಮ ಒಂದಿಷ್ಟು ವಿಷ ಕೊಟ್ಟು ಬಿಡು ಎನ್ನುವುದಾಗಿ ಹೇಳುತ್ತಾಳೆ. ಮುಂದಿನ ಸಂಚಿಕೆಯಲ್ಲಿ ಇದು ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಭಾಗ್ಯ ಧಾರವಾಹಿಯ ವೀಕ್ಷಕರಿಗೆ ದಿನೇ ದಿನೇ ಧಾರವಾಹಿಯ ಪ್ರತಿಯೊಂದು ಎಪಿಸೋಡ್ಗಳು ಕೂಡ ನಿರೀಕ್ಷೆಯನ್ನು ಹೆಚ್ಚಿಸುತ್ತವೆ ಹಾಗೂ ಟರ್ನ್ ಗಳಿಂದ ರೋಮಾಂಚನಗೊಳಿಸುತ್ತಿದೆ.

Comments are closed.