Kichcha Sudeep: ಅಭಿಮಾನಿಗಳಿಗೆ ಸುಳ್ಳು ಹೇಳಿದ್ರ ಕಿಚ್ಚ ಸುದೀಪ್? ಕಾರ್ಯಕ್ರಮ ಒಂದಕ್ಕೆ ಕಿಚ್ಚ ಬಾರದೆದ್ದಕ್ಕೆ ಅಭಿಮಾನಿಗಳ ಆಕ್ರೋಶ; ಆಹ್ವಾನ ಇರಲಿಲ್ಲ ಎಂದ ಸುದೀಪ್, ಸುದೀಪ್ ಅವರನ್ನ ಆಹ್ವಾನ ಮಾಡಿದ್ದ ಫೋಟೋಗಳು ವೈರಲ್!

Kichcha Sudeep: ದಾವಣಗೆರೆ (Davanagere) ಯಲ್ಲಿ ನಡೆದಂತಹ ಒಂದು ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಬರಬೇಕಿತ್ತು ಆದರೆ ಅವರು ಬಂದಿಲ್ಲ ಎನ್ನುವ ಕಾರಣಕ್ಕೆ ವೇದಿಕೆಯ ಮುಂಭಾಗದಲ್ಲಿ ಇದ್ದ ಚೇರ್ಗಳನ್ನ ಒಡೆದು ಪೊಲೀಸ (Police)ರ ಮೇಲೆಯೂ ಕೂಡ ಅಭಿಮಾನಿಗಳು ಹಲ್ಲೆ ಮಾಡಿದ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಯ ಹರಿಹರ (Harihara) ತಾಲೂಕಿನ ರಾಜನಹಳ್ಳಿಯ ಗುರುಪೀಠದ ವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ ಅವರನ್ನು ಆಹ್ವಾನ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಈ ಸಮಯದಲ್ಲಿ ಕಿಚ್ಚ ಸುದೀಪ್ ಉಪಸ್ಥಿತರಿರಲಿಲ್ಲ ಹಾಗಾಗಿ ಸಾಕಷ್ಟು ಸಮಯ ತಮ್ಮ ನೆಚ್ಚಿನ ಸ್ಟಾರ್ ನಟ (Star Actor)  ಬರ್ತಾರೆ ಅಂತ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಬೇಸರವಾಗಿದೆ. ಸುದೀಪ ಅವರು ಯಾಕೆ ಬರಲಿಲ್ಲ ಎಂಬುದನ್ನ ಹೇಳಿ ಎಂದು ಅಭಿಮಾನಿಗಳು ಆಯೋಜಕರನ್ನ ಕೇಳಿದ್ದಾರೆ. ಜೊತೆಗೆ ವೇದಿಕೆಯ ಮುಂಭಾಗದಲ್ಲಿ ಇದ್ದ ಕುರ್ಚಿಗಳನ್ನು ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಬ್ಯಾರಿಕೆಟ್ ಗಳನ್ನು ಬೀಳಿಸಿ ಪೊಲೀಸರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಈ ಘರ್ಷಣೆಯಲ್ಲಿ ಮೂರು ಜನ ಪೊಲೀಸರು ಗಾಯಗೊಂಡಿದ್ದಾರೆ. ಇನ್ನು ಈ ಘಟನೆಗೆ ಸಂಬಂಧಪಟ್ಟ ಹಾಗೆ ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇದನ್ನೂ ಓದಿ: Kannada Astrology: ಇನ್ನು ಆರು ದಿನಗಳಲ್ಲಿ ಈ ರಾಶಿಯವರಿಗೆ ಆರಂಭವಾಗಲಿದೆ ಶುಕ್ರ ದೆಸೆ; ಈ ರಾಶಿಯವರತ್ತ ಬರುವ ಹಣವನ್ನು ಯಾರು ತಪ್ಪಿಸೋದಕ್ಕೆ ಸಾಧ್ಯವಿಲ್ಲ ಅದೃಷ್ಟವಂತ ರಾಶಿಗಳು ಯಾವವು ಗೊತ್ತೇ??

ಕಿಚ್ಚ ಸುದೀಪ್ ಪೋಸ್ಟ್ ನಲ್ಲಿ ಏನಿದೆ?

“ಸ್ನೇಹಿತರಿಗೆ ನಲ್ಮೆಯ ನಮಸ್ಕಾರ- ದಾವಣಗೆರೆಯ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು, ನನಗೆ ಕಾರ್ಯಕ್ರಮ ಆಯೋಜಕರಿಂದ ಆಹ್ವಾನ ಇರಲಿಲ್ಲ ಕಾರ್ಯಕ್ರಮದ ಕುರಿತು ಮಾಹಿತಿಯು ಇರಲಿಲ್ಲ ನಾನು ಒಪ್ಪಿಕೊಂಡ ಕಾರ್ಯಕ್ರಮವನ್ನು ತಪ್ಪಿಸುವುದಿಲ್ಲ. Cont’d”. ಎಂಬುದಾಗಿ ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು.  ಕಿಚ್ಚ ಸುದೀಪ್ ಮುಂದಿನ ಬಾರಿ ಕಂಡಿತ ಬರುತ್ತೇನೆ ಪ್ರೀತಿ ಇರಲಿ. ಶಾಂತ ರೀತಿಯಿಂದ ವರ್ತಿಸಿ ಪ್ರೀತಿಯ ಎಂದು ಪೋಸ್ಟ್ ಹಾಕಿದ್ದರೂ ಕೂಡ, ಅಭಿಮಾನಿಗಳು ಸುಮ್ಮನಾಗಲಿಲ್ಲ.

ಕಿಚ್ಚ ಸುದೀಪ್ ಗೆ ಇತ್ತು ಆಹ್ವಾನ!

 ಕಿಚ್ಚ ಸುದೀಪ್ ಅವರು ಬೆಂಗಳೂರಿನಲ್ಲಿ ಇಲ್ಲದೆ ಇರುವ ಕಾರಣ ರಾಜನಹಳ್ಳಿ ವಾಲ್ಮೀಕಿ ಜಾತ್ರೆಗೆ, ಮಹಾ ಸ್ವಾಮೀಜಿ ಹಾಗೂ ಶಾಸಕರಾದ ಎಸ್ ವಿ ರಾಜ ಚಂದ್ರಪ್ಪ ಮೊದಲಾದವರು ಸುದೀಪ್ ಅವರ ತಂದೆ ಸಂಜೀವ್ ಅವರಿಗೆ ಆಹ್ವಾನ ಪತ್ರವನ್ನು ನೀಡಿ ಕಿಚ್ಚ ಸುದೀಪ್ ಅವರನ್ನು ಆಹ್ವಾನಿಸಿದ್ದಾರೆ. ಸದ್ಯ ಈ ಫೋಟೋ ಕೂಡ ಕಿಚ್ಚ ಸುದೀಪ್ ಅವರನ್ನು ಅವರ ಅಭಿಮಾನಿಗಳು ಹಾಕಿದ್ದಾರೆ.

ತಾನು ಆಹ್ವಾನ ಇರುವ ಯಾವ ಕಾರ್ಯಕ್ರಮವನ್ನು ತಪ್ಪಿಸುವುದಿಲ್ಲ ಎಂದು ಸುದೀಪ್ ಹೇಳಿದ್ದಾರೆ ಆದರೆ ಹೀಗೆ ಆಹ್ವಾನ ನೀಡಿದರು ಕೂಡ ದಾವಣಗೆರೆ ಕಾರ್ಯಕ್ರಮಕ್ಕೆ ಬಾರದೇ ಇದ್ದಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಜಾತ್ರೆಗೆ ಸಂಬಂಧಪಟ್ಟ ಹಾಗೆ ಕಿಚ್ಚ ಸುದೀಪ್ ಅವರ ಆಹ್ವಾನದ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಆಗಿವೆ.

Comments are closed.