Kannada Serial: ಕಿರುತೆರೆ ನಿರ್ಮಾಪಕರು ಕೈ ಬಿಟ್ರೂ  ವಿಷ್ಣು ಅಳಿಯನ ಕೈ ಹಿಡಿದ ಎಸ್ ನಾರಾಯಣ್! ಹೊಸ ಧಾರವಾಹಿ ಮೂಲಕ ಅನಿರುದ್ಧ ಖಡಕ್ ಎಂಟ್ರಿ, ಯಾವ ಧಾರಾವಾಹಿ ಗೊತ್ತೇ?

Kannada Serial: ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಎನ್ನುವ ಪಾತ್ರದ ಮೂಲಕ ಮಿಂಚಿದ ನಟ ಅನಿರುದ್ಧ (SAniruddha Jatkar). ಆದರೆ ನಿರ್ದೇಶಕರು ಹಾಗೂ ಅನಿರುದ್ಧ ನಡುವಿನ ಅಭಿಪ್ರಾಯದಿಂದ ಅನಿರುದ್ಧ ಜೊತೆ ಜೊತೆಯಲಿ (Jote Joteyali) ಧಾರಾವಾಹಿಯಲ್ಲಿ  ಅಭಿನಯಿಸುವುದನ್ನು ಬಿಟ್ಟರು. ಕಿರುತೆರೆಯಿಂದ ಅನಿರುದ್ಧ ಅವರನ್ನು ಬ್ಯಾನ್ ಮಾಡಲಾಗಿದೆ ಎಂದು ಹೇಳಲಾಗಿತ್ತು. ಇದರಿಂದ ಅನಿರುದ್ಧ ಫ್ಯಾನ್ಸ್ (Fans) ಗರಂ ಆಗಿದ್ರು. ಆದರೆ ಇದೀಗ ಅನಿರುದ್ಧನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.

JYO 1 | Live Kannada News
Kannada Serial: ಕಿರುತೆರೆ ನಿರ್ಮಾಪಕರು ಕೈ ಬಿಟ್ರೂ  ವಿಷ್ಣು ಅಳಿಯನ ಕೈ ಹಿಡಿದ ಎಸ್ ನಾರಾಯಣ್! ಹೊಸ ಧಾರವಾಹಿ ಮೂಲಕ ಅನಿರುದ್ಧ ಖಡಕ್ ಎಂಟ್ರಿ, ಯಾವ ಧಾರಾವಾಹಿ ಗೊತ್ತೇ? https://sihikahinews.com/anirudh-jatkar-re-entry-to-serial/

ಕಿರುತೆರೆಗೆ ಅನಿರುದ್ಧ ಖಡಕ್ ರಿ ಎಂಟ್ರಿ!

ನಟ ಅನಿರುದ್ಧ ಧಾರವಾಹಿಯಲ್ಲಿ ಅಭಿನಯಿಸುವುದಕ್ಕೆ ಬರಬೇಕು ಅನ್ನೋದು ಅವರ ಅಭಿಮಾನಿಗಳ ಬಯಕೆ ಆಗಿತ್ತು. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದೀಗ ಫ್ಯಾನ್ಸ್ ಗಳಿಗೆ ಹೊಸ ಸುದ್ದಿ ನೀಡಿರುವ ಅನಿರುದ್ಧ ಸಂತೋಷದ ವಿಚಾರ ಒಂದನ್ನು ಫೋಟೋ ಸಮೇತವಾಗಿ ಹಂಚಿಕೊಂಡಿದ್ದಾರೆ. ಹೌದು ಎರಡು ವರ್ಷಗಳ ಕಾಲ ಸೀರಿಯಲ್ ಅಥವಾ ಬೇರೆ ಕಾರ್ಯಕ್ರಮದಲ್ಲಿ ಅನಿರುದ್ಧ ಅವರನ್ನು ಬಳಸಿಕೊಳ್ಳಬಾರದು ಎಂದು ನಿರ್ಮಾಪಕ (Producer) ರ ಸಂಘ ನಿರ್ಧಾರ ಮಾಡಿತ್ತು. ಆದರೆ ಅದನ್ನ ಮೀರಿ ಯು ನಿರ್ದೇಶಕ ನಾರಾಯಣ್ ಅವರ ಧಾರಾವಾಹಿ ಒಂದರಲ್ಲಿ ಅನಿರುದ್ಧ ಅವರು ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: Chamrajanagara: ಹಣವಿಲ್ಲದೇ ಪ್ಲಾಸ್ಟಿಕ್ ಕವರ್ ನಲ್ಲಿಯೇ  ಪತ್ನಿಯ ಶವ ಸಾಗಿಸಿದ ಪತಿ; ಚಾಮರಾಜನಗರದಲ್ಲಿ ನಡೆಯಿತು ಹೃದಯ ವಿದ್ರಾವಕ ಘಟನೆ!

ಸ್ಯಾಂಡಲ್ ವುಡ್ (Sandalwood) ಕಂಡ ಅತ್ಯದ್ಭುತ ನಟ ಹಾಗೂ ನಿರ್ದೇಶಕ ಎಸ್ ನಾರಾಯಣ (S. Narayan) ಇವರ ನಿರ್ದೇಶನದಲ್ಲಿ ಉದಯ ಟಿವಿ (Udaya Tv)ಯಲ್ಲಿ ಸೂರ್ಯವಂಶ ಎನ್ನುವ ಧಾರಾವಾಹಿ ಪ್ರಸಾರವಾಗಲಿದೆ. ಹೌದು ಸೂರ್ಯವಂಶ ಸೀರಿಯಲ್ ನಲ್ಲಿ ಅನಿರುದ್ಧ ಅವರು ಪ್ರಮುಖ ಪಾತ್ರ ಒಂದನ್ನು ನಿಭಾಯಿಸಲಿದ್ದಾರೆ ಅನಿರುದ್ಧ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ಈ ಫೋಟೋದ ಮೂಲಕ ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ತಾ ಇದ್ದೇನೆ. ಉದಯವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್ ನಾರಾಯಣ ಸರ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ಸೂರ್ಯವಂಶದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸ್ತಾ ಇದ್ದೇನೆ. ನಿಮ್ಮೆಲ್ಲರ ಹಾರೈಕೆ ಆಶೀರ್ವಾದದ ಸಾಲ ಇದು ನಿಮ್ಮ ಪ್ರೀತಿ ಪ್ರೋತ್ಸಾಹ ನನ್ನ ಮೇಲೆ ಸದಾ ಹೀಗೆ ಇರಲಿ’ ಎಂದು ಅನಿರುದ್ಧ ಬರೆದುಕೊಂಡಿದ್ದಾರೆ.

ಇನ್ನು ಈ ಧಾರಾವಾಹಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಧಾರಾವಾಹಿ ತಂಡ ನೀಡಬೇಕಷ್ಟೇ. ಒಟ್ಟಿನಲ್ಲಿ ಅನಿರುದ್ಧ ಅವರ ಕಂಬ್ಯಾಕ್ ಅವರ ಅಭಿಮಾನಿಗಳಿಗಂತೂ ಸಂತೋಷ ನೀಡಿದೆ.               

Comments are closed.