Darshan Talk in Interview: ಮತ್ತೊಮ್ಮೆ ಬಳಸಬಾರದ ಪದ ಬಳಸಿದ ದರ್ಶನ್, ಆದರೂ ಖಡಕ್ ಆಗಿತ್ತು ಎಂದ ಫ್ಯಾನ್ಸ್. ಗಾಂಧಿ ನಗರದವರಿಗೆ ಎಚ್ಚರಿಕೆ ಕೊಟ್ಟು ಹೇಳಿದ್ದೇನು ಗೊತ್ತೇ??

Darshan Talk in Interview: 2023ರಲ್ಲಿ ಕನ್ನಡ ಸಿನೆಮಾ ರಂಗದಲ್ಲಿ ಬಿಡುಗಡೆಯಾಗುತ್ತಿರುವ ಬಹು ನಿರೀಕ್ಷಿತ ಸಿನೆಮಾ ಎಂದರೆ ಅದು ನಮ್ಮ ಡಿ.ಬಾಸ್, ಚಾಲೆಂಜಿಂಗ್ ಸ್ಟಾರ್ ನಟನೆಯ ಕ್ರಾಂತಿ ಸಿನೆಮಾ. ಇದೇ ೨೬ರಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲಿದೆ. ಡಿ.ಬಾಸ್ ಸೆಲೆಬ್ರಿಟಿಗಳು ಇದನ್ನು ಬರಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಸಿನೆಮಾ ಬಾಕ್ಸ್ ಆಫಿಸ್ನಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುವುದು ಖಚಿತವಾಗಿದೆ.
ದರ್ಶನ್ ಅವರು ಕ್ರಾಂತಿ ಸಿನೆಮಾದ ಪ್ರಚಾರ ಕಾರ್ಯವನ್ನು ಈಗಾಗಲೇ ಮುಗಿಸಿದ್ದಾರೆ. ಸುಮಾರು ೨೨ ತಿಂಗಳ ಬಳಿಕ ದರ್ಶನ್ ಅವರ ಸಿನೆಮಾ ಬಿಡುಗಡೆಯಾಗುತ್ತಿದೆ. ಒಂದಷ್ಟು ಸವಾಲುಗಳನ್ನು ಎದುರಿಸುತ್ತಲೇ ಕ್ರಾಂತಿ ಸಿನೆಮಾ ನಿರ್ಮಾಣ ಮಾಡಲಾಗಿದೆ. ಈ ಎಲ್ಲ ಸವಾಲುಗಳ ಕುರಿತು ದರ್ಶನ್ ಅವರು ತಮ್ಮ ಅಭಿಮಾನಿಗಳ ಅಧಿಕೃತ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮುಕ್ತಕಂಠದಿಂದ ಮಾತನಾಡಿದ್ದಾರೆ.

ಈ ಸಂದರ್ಶನದಲ್ಲಿ ದರ್ಶನ್ ಅವರು ಗಾಂಧಿನಗರದ ಟ್ರೆಂಡ್ ಬಗ್ಗೆ ಮಾತನಾಡಿದ್ದಾರೆ. ಕೆಲವು ಹಿರೋಗಳ ಚಲನವಲನಗಳನ್ನು ಅವರೇ ನಿರ್ಧಾರ ಮಾಡುತ್ತಾರೆ ಎನ್ನುವ ಆರೋಪವನ್ನು ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೆಲವರು ಎಲ್ಲವನ್ನು ಅವರೇ ನಿರ್ಧಾರ ಮಾಡುತ್ತಾರೆ. ಹಿರೋಗಳ ನಡೆ, ಸಿನೆಮಾ, ಪ್ರೊಡಕ್ಷನ್ ಹೌಸ್ ಬೆಳೆಸಬೇಕು ಎಂದು ಅವರೇ ನಿರ್ಧಾರ ಮಾಡುತ್ತಾರೆ. ಮೊನ್ನೆ ಯಾರೋ ಹೇಳುತ್ತಿದ್ದರು ಕೆಲವರು ಗಾಂಧಿ ನಗರದಲ್ಲಿ ಇದ್ದಾರಂತೆ. ಎಲ್ಲವನ್ನು ಅವರೇ ಡಿಸೈಡ್ ಮಾಡುತ್ತಾರಂತೆ. ಯಾವ ಹಿರೋ ಮುಂದಕ್ಕೆ ಹೋಗಬೇಕು, ಯಾವ ಹಿರೋ ಹಿಂದಕ್ಕೆ ಬರಬೇಕು, ಯಾವ ಹಿರೋ ಬೆಳೆಯಬೇಕು, ಯಾರಿಗೆ ಬೆಳೆಯಲು ಬಿಡಬಾರದು ಎಂದು ಅವರೇ ನಿರ್ಧಾರ ಮಾಡುತ್ತಾರಂತೆ ಎಂದು ದರ್ಶನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Kranti Film Early Morning Show: KGF 1 ದಾಖಲೆಗಳನ್ನು ಚಿಂದಿ ಚಿತ್ರಾನ್ನ ಮಾಡಿದ ಕ್ರಾಂತಿ: ಮುಂದಿನ ಟಾರ್ಗೆಟ್ ಅಪ್ಪು ಕೊನೆಯ ಚಿತ್ರ ಜೇಮ್ಸ್. ಎಲ್ಲಿಗೆ ಬಂದಿದೆ ಗೊತ್ತೇ??

ಅಂತಹವರಿಗೆ ನಾನು ಹೇಳುವುದು ಏನೆಂದರೆ ನೀವು ಡಿಸ್ಟ್ರಿಬ್ಯೂಷನ್ ಆಫೀಸ್ ಓಪನ್ ಮಾಡಿದಾಗ ನಿಮಗೆ ಹೆಸರು ಕೊಟ್ಟಿದ್ದೆ ನಮ್ಮ ಸಿನೆಮಾಗಳು. ನೀವು ಇವತ್ತು ಕುಳಿತುಕೊಂಡು ಎಲ್ಲವನ್ನು ಆಳ್ತಿವಿ ಎಂದು ಹೇಳಿದರೆ ಅದು ನಿಮ್ಮ ಮುಠ್ಠಾಳತನ ಎಂದು ಮುಕ್ತವಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ. ಅವರು ಅಂದುಕೊಂಡಿರಬಹುದೇನು ನನಗಂತೂ ಗೊತ್ತಿಲ್ಲ. ನಾವೇನೋ ದೂರದಲ್ಲಿ ಇದ್ದೇವೆ. ನಾವು ಮಾಡಿದ್ದು ಯಾರಿಗೂ ತಿಳಿಯುವುದಿಲ್ಲ ಎಂದು. ಇದನ್ನೂ ಓದಿ: Chiranjeevi: ಮೂರನೇ ಮದುವೆಯಾಗುತ್ತಿರುವ ಮಗಳಿಗೆ ಚಿರು ಕೊಟ್ಟ ಬಂಗ್ಲೆಯ ಬೆಲೆ ಎಷ್ಟು ಗೊತ್ತೇ?? ತಿಳಿದರೆ ಇಂತಹ ಅಪ್ಪ ಇರಬೇಕು ಅಂತೀರಾ!

ಯಾರು ಎಲ್ಲೋ ಹೂಸು ಬಿಟ್ಟರೂ ಅದರ ವಾಸನೆ ಎಲ್ಲೋ ಹೋಗಿರುತ್ತದೆ. ಇನ್ನು ನಮಗೆ ತಿಳಿಯದೆ ಇರುತ್ತದೆಯೇ? ಅಲ್ಲಾ ಕಂಡ್ರಯ್ಯ ನೀವು ನಮ್ಮ ಬಗ್ಗೆ ಯಾಕೆ ಇಷ್ಟು ತಲೆ ಕೆಡಿಸಿಕೊಳ್ಳುತ್ತೀರಿ ತಿಳಿಯುವುದಿಲ್ಲ. ನೀವು ಕೂಡ ಪ್ರೊಡಕ್ಷನ್ ಹೌಸ್ ನಡೆಸುತ್ತಿದ್ದಿರಲ್ಲ. ಅದರ ಬಗ್ಗೆ ಯೋಚಿಸಿ. ಯಾವ ಹಿರೋ ಯಾರ ಜೊತೆ ಸಿನೆಮಾ ಮಾಡಿದರೆ ನಿಮಗೇನು? ಆದರೆ ಅಷ್ಟೆಲ್ಲ ಜನರ ನಿದ್ದೆ ಹಾಳುಗುತ್ತಿದೆ ಎನ್ನುವ ಬಗ್ಗೆ ಖುಷಿಯಿದೆ ಎಂದು ಚಾಲೆಂಜಿಗ್ ಸ್ಟಾರ್ ಹೇಳಿದ್ದಾರೆ.

Comments are closed.