Kannada Film: ವಿಷ್ಣು ಜೊತೆ ಈ ಸಿನಿಮಾ ಮಾಡಲು ಒಪ್ಪಿಕೊಳ್ಳಬಾರದಿತ್ತು ಎಂದು ನಟಿ ಸುಹಾಸಿನಿ ಸಿನಿಮಾ ಸೆಟ್ ನಲ್ಲಿ ತನ್ನ ಚಪ್ಪಲಿಯಲ್ಲಿ ತಾನೇ ಹೊಡೆದುಕೊಂಡಿದ್ದರಂತೆ; ರಾಜೇಂದ್ರ ಬಾಬು ಬಿಚ್ಚಿಟ್ಟ ತೆರೆಯ ಹಿಂದಿನ ಅಸಲಿ ಸತ್ಯ!

Kannada Film: ದಕ್ಷಿಣ ಭಾರತದ ಖ್ಯಾತ ನಟಿ ಸುಹಾಸಿನಿ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮೊದಲಾದ ಭಾಷೆಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ನಟಿ. ಬಹುಶಃ ನಟಿ ಆಗಿರುವ ಸುಹಾಸಿನಿ ಕನ್ನಡಕ್ಕೆ ಪರಭಾಷೆ ನಟಿಯಾಗಿ ಬಂದರು ಕನ್ನಡಿಗರೇ ಆಗಿ ಹೋಗಿದ್ದಾರೆ. ಕನ್ನಡದ ಲೆಜೆಂಡ್ ಆಕ್ಟರ್ ವಿಷ್ಣುವರ್ಧನ್ ಅವರ ಜೊತೆಗೆ ಹೆಚ್ಚಾಗಿ ಅಭಿನಯಿಸಿರುವ ಸುಹಾಸಿನಿ, ಈಗಲೂ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.

ಡಾಕ್ಟರ್ ವಿಷ್ಣುವರ್ಧನ್ ಹಾಗೂ ಸುಹಾಸಿನಿ ಅವರ ಅಭಿನಯದ ಮುತ್ತಿನ ಹಾರ ಸಿನಿಮಾವನ್ನು ಈಗಲೂ ನೋಡಿದರೆ ಜನರು ಕಣ್ಣೀರು ಹಾಕುತ್ತಾರೆ. ವಿಷ್ಣುವರ್ಧನ್ ಹಾಗೂ ಸುಹಾಸಿನಿ ಇಬ್ಬರು ತಮ್ಮ ಅದ್ಭುತ ಕಲಾ ಶಕ್ತಿಯನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಅವರು ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ರೋಚಕ ಕಥೆಯನ್ನು ವೇದಿಕೆಯೊಂದರಲ್ಲಿ ಹೇಳಿಕೊಂಡಿದ್ದಾರೆ.

ಮುತ್ತಿನ ಹಾರ ಸಿನಿಮಾ ಮಾಡುವುದು ನಿರ್ದೇಶಕರಿಗೆ ಹಾಗೂ ಕಲಾವಿದರಿಗೆ ದೊಡ್ಡ ಚಾಲೆಂಜ್ ಆಗಿತ್ತು. ಯಾಕಂದ್ರೆ ಈ ಸಿನಿಮಾದ ಚಿತ್ರೀಕರಣಕ್ಕಾಗಿ ಆಯ್ದುಕೊಂಡ ಸ್ಥಳವೇ ಹಾಗಿತ್ತು. 52 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿ ಇರುವ ಮರಳುಗಾಡಿನಲ್ಲಿ ವಿಷ್ಣುವರ್ಧನ ಹಾಗೂ ಸುಹಾಸಿನಿ ಅಭಿನಯಿಸಬೇಕಿತ್ತು. ಸುಹಾಸಿನಿ ಆಗಾಗ ರಸ್ತೆ ತೆಗೆದುಕೊಂಡು ವಿಷ್ಣುವರ್ಧನ್ ಮಾತ್ರ ಅಲ್ಲಿ ನಿಂತು ಪರಕಾಯ ಪ್ರವೇಶ ಮಾಡಿ ಅದೇ ಸ್ಥಳದವರೆ ಆಗಿಬಿಟ್ಟಿದ್ದರು. ಆದರೆ ಸುಹಾಸಿನಿ ಅವರಿಗೆ ಮಾತ್ರ ಇದು ಸಾಧ್ಯವೇ ಆಗಿರಲಿಲ್ಲ ತಾನು ಸತ್ತೇ ಹೋಗುತ್ತೇನೆ ಎನ್ನುವಂತಹ ಫೀಲ್ ಅವರಿಗೆ ಆಗಿತ್ತಂತೆ. ಅದಕ್ಕಾಗಿ ಅವರು ಮಾಡಿದ್ದೇನು ಗೊತ್ತಾ?

ಹೌದು ಮುತ್ತಿನ ಹಾರದ ಸಮಯದಲ್ಲಿ ಚಿತ್ರೀಕರಣ ಮಾಡುವಾಗ ಸುಹಾಸಿನಿ ಅವರಿಗೆ ಸಾಕಷ್ಟು ಸಮಸ್ಯೆ ಆಗಿದ್ದು ಹಾಗಾಗಿ ತನ್ನ ಚಪ್ಪಲ್ಲನ್ನು ತೆಗೆದು ತಾನೇ ಹೊಡೆದುಕೊಂಡು ಯಾಕಾದರೂ ಈ ಸಿನಿಮಾಕ್ಕೆ ಒಪ್ಪಿಕೊಂಡೆನೋ ಎಂದು ಅತ್ತಿದ್ದರಂತೆ. ಕೊನೆಗೆ ರಾಜೇಂದ್ರ ಸಿಂಗ್ ಬಾಬು ಅವರು ಈ ಸಿನಿಮಾದ ಹೇಗಿರುತ್ತೆ ನೋಡಿ ಜನ ನಿಮ್ಮನ್ನ ಗುರುತಿಸುತ್ತಾರೆ ಎಂದು ಹೇಳಿದರಂತೆ. ಅದರಂತೆ ಎವರು ಗ್ರೀನ್ ಸಿನಿಮಾ ಆಗಿ ಹೋಯಿತು ಮುತ್ತಿನ ಹಾರ ಈಗಲೂ ವಿಷ್ಣುವರ್ಧನ್ ಹಾಗೂ ಸುಹಾಸಿನಿ ಜೋಡಿಯನ್ನು ಈ ಸಿನಿಮಾದ ಮೂಲಕ ಜನ ಗುರುತಿಸುತ್ತಾರೆ. ಸುಹಾಸಿನಿ ಹಾಗೂ ವಿಷ್ಣುವರ್ಧನ್ ಇಬ್ಬರು ಎಂತಹ ಕಲಾವಿದರು ಎಂಬುದು ಈ ಸಿನಿಮಾದ ಮೂಲಕ ಸಾಕಷ್ಟು ಜನರಿಗೆ ಗೊತ್ತಾಗಿದೆ.  ಸುಹಾನಿಸಿಯವರು ಕೂಡ ತನ್ನ ವೃತ್ತಿ ಜೀವನದ ಅತ್ಯಂತ ಅದ್ಭುತ ಸಿನಿಮಾ ಇದು ಎಂದೇ ಹೇಳಿಕೊಂಡಿದ್ದಾರೆ.

Comments are closed.