Dimple Hayathi: ನಿಮಗೆ ಗುಡಿ ಕಟ್ಟುತ್ತೇನೆ ಎಂದ ಅಭಿಮಾನಿಗೆ, ಖ್ಯಾತ ನಟಿ ಹೇಳಿದ್ದೇನು ಗೊತ್ತೇ?? ಯಪ್ಪಾ ಇಂಗು ಇರ್ತಾರ. ಅಭಿಮಾನಿಗೆ ಶಾಕ್.

Dimple Hayathi: ನಟಿ ಡಿಂಪಲ್ ಹಯಾತಿ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ನಟಿಗೆ ಉತ್ತಮವಾದ ಫ್ಯಾನ್ ಬೇಸ್ ಕೂಡ ಇದೆ. ಡಿಂಪಲ್ ಅವರು ಖಿಲಾಡಿ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ (Film Industry) ಎಂಟ್ರಿ ಕೊಟ್ಟರು, ಈ ಸಿನಿಮಾ ಸೂಪರ್ ಹಿಟ್ ಆಗಿ ಇವರಿಗೆ ಒಳ್ಳೆಯ ಹೆಸರು ಬರುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು, ಆದರೆ ಅದು ಸುಳ್ಳಾಯಿತು. ಖಿಲಾಡಿ ಸಿನಿಮಾ (Khiladi Film) ಫ್ಲಾಪ್ ಆಯಿತು. ಈಗ ಡಿಂಪಲ್ ಅವರು ಎರಡನೇ ಸಿನಿಮಾ ಮೂಲಕ ಪೇಕ್ಷಕರ ಎದುರು ಬಂದಿದ್ದಾರೆ. ಇದನ್ನೂಓದಿ: Hrithik Roshan: ಹೃತಿಕ್ ರೋಷನ್ ಒಂದೇ ಸಿನೆಮಾಗೆ 85 ಕೋಟಿ ಸಂಭಾವನೆ, ಸಿಕ್ಕಿದ್ದೇ ಚಾನ್ಸ್ ಎಂದು ದೀಪಿಕಾ ಕೇಳಿದ್ದು ಎಷ್ಟು ಗೊತ್ತೇ?

ನಟ ಗೋಪಿಚಂದ್ ಅವರಿಗೆ ಹೀರೋಯಿನ್ (Heroine) ಆಗಿ ರಾಮಬಾಣಂ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಶ್ರೀವಾಸ್ ಅವರು ನಿರ್ದೇಶನ ಮಾಡಿದ್ದು, ಮೇ 5ರಂದು ಸಿನಿಮಾ ತೆರೆಕಂಡಿದೆ, ಸಿನಿಮಾ ಪ್ರೊಮೋಷನ್ ಗಾಗಿ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಡಿಂಪಲ್. ಅದರ ಭಾಗವಾಗಿ ನಡೆದ ಪ್ರೆಸ್ ಮೀಟ್ ನಲ್ಲಿ ಅಭಿಮಾನಿಯೊಬ್ಬರು ಡಿಂಪಲ್ ಅವರಿಗೆ ಒಂದು ಪ್ರಶ್ನೆ ಕೇಳಬೇಕು ಎಂದು ಹೇಳಿ, ನಿಮಗಾಗಿ ಒಂದು ದೇವಸ್ಥಾನ ಕಟ್ಟಬೇಕು ಎಂದುಕೊಂಡಿದ್ದೇನೆ, ಅದನ್ನು ಅಮೃತ ಶಿಲೆಗಳಿಂದ ಕಟ್ಟಬೇಕಾ ಅಥವಾ ಇಟ್ಟಿಗೆಯಿಂದ ಕಟ್ಟಬೇಕಾ ಎಂದು ಪ್ರಶ್ನೆ ಕೇಳಲಾಯಿತು.

ಈ ಪ್ರಶ್ನೆಗೆ ಯಾರು ಊಹಿಸದ ಹಾಗೆ ಉತ್ತರ ಕೊಟ್ಟು ಶಾಕ್ ನೀಡಿದ್ದಾರೆ ನಟಿ ಡಿಂಪಲ್ ಹಯಾತಿ. “ನನಗೆ ಅಮೃತ ಶಿಲೆ ಬೇಡ, ಇಟ್ಟಿಗೆ ಕೂಡ ಬೇಡ.. ಚಿನ್ನದಲ್ಲಿ ನನಗೆ ದೇವಸ್ಥಾನ ಕಟ್ಟಿಸಿ..” ಎಂದು ಹೇಳಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಅಲ್ಲಿ ಇದ್ದ ಪ್ರತಿಯೊಬ್ಬರು ಕೂಡ ಈ ಉತ್ತರ ಕೇಳಿ ನಕ್ಕಿದ್ದಾರೆ. ಆಕೆಯಿಂದ ಈ ರೀತಿಯ ಉತ್ತರವನ್ನು ಯಾರು ಎಕ್ಸ್ಪೆಕ್ಟ್ ಮಾಡಿರಲಿಲ್ಲ. ಇನ್ನೊಬ್ಬರು ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯೆ ಕೇಳಿದರು…

ಅದಕ್ಕೆ ಉತ್ತರಿಸಿ, ನನ್ನ ಮೇಲೆ ಟ್ರೋಲ್ ನಡೆಯುತ್ತಿದೆ ಎಂದು ನನಗೆ ಗೊತ್ತಿದೆ..ಅದು ಮಿತಿ ಮೀರದೆ ಇರುವವರೆಗೂ ನಾನು ಸಂತೋಷವಾಗಿಯೇ ಇರುತ್ತೇನೆ..ಟ್ರೋಲ್ ಗಳು ತಮಾಷೆಯಾಗಿದ್ದರೆ ಅವುಗಳನ್ನು ನಾವು ಇಷ್ಟಪಡುತ್ತೇವೆ. ಕೆಲವೊಮ್ಮೆ ಅದು ಹೆಚ್ಚಾಗಿ, ಮಿತಿ ಮೀರುತ್ತದೆ ಆಗ ದುಃಖವಾಗುತ್ತದೆ.. ಎಂದು ಹೇಳಿದ್ದಾರೆ ಡಿಂಪಲ್. ಡಿಂಪಲ್ ಅವರ ಈ ರೀತಿಯ ಉತ್ತರಗಳು ಅಭಿಮಾನಿಗಳಿಗೆ ಶಾಕ್ ನೀಡಿದೆ. ಇದನ್ನೂ ಓದಿ; News: ದೇಶವೇ ಮೆಚ್ಚುವಂತಹ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ IRCTC (ರೈಲ್ವೆ)- 7 ದಿನಗಳ ಟ್ರಿಪ್ ಗೆ ಎಷ್ಟು ಕಡಿಮೆ ಬೆಲೆ ಗೊತ್ತೇ? ಎಲ್ಲಿಗೆ ಪಯಣ ಗೊತ್ತೆ??

Comments are closed.