Gautham Gambhir: ಆರ್ಸಿಬಿಯನ್ನು ಮತ್ತೆ ಕೆಣಕಿದ ಗಂಭೀರ್- ಚೆನ್ನೈ ಕಪ್ ಗೆಲ್ಲುತ್ತಿದ್ದಂತೆ, ಇರಲಾರದೆ ಗಂಭೀರ್ ಹೇಳಿದ್ದೇನು ಗೊತ್ತೇ? ಇವೆಲ್ಲಾ ಬೇಕಿತ್ತಾ ಗುರು??

Gautham Gambhir: 2023ರ ಐಪಿಎಲ್ (IPL) ಸೀಸನ್ ಮೊನ್ನೆಯಷ್ಟೇ ಮುಕ್ತಾಯವಾಗಿದೆ. ಈ ಸೀಸನ್ ನಲ್ಲಿ ಟಫ್ ಕಾಂಪಿಟೇಶನ್ ಏನೋ ಇತ್ತು. ಈಗ ವಿನ್ನರ್ ಆಗಿ ಹೊರಹೊಮ್ಮಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಗಿದೆ. ಬರೋಬ್ಬರಿ 5ನೇ ಸಾರಿ ಸಿ.ಎಸ್.ಕೆ (CSK) ತಂಡ ಟ್ರೋಫಿಯನ್ನು ಗೆದ್ದಿದೆ. ಮುಂಬೈ ತಂಡ 5 ಸಾರಿ ಟ್ರೋಫಿ ಗೆದ್ದಿದ್ದು, ಚೆನ್ನೈ ಈಗ ಅದಕ್ಕೆ ಸಮವಾಗಿ ನಿಂತಿದೆ. ಸಿ.ಎಸ್.ಕೆ ತಂಡ ಗೆದ್ದ ನಂತರ ಗೌತಮ್ ಗಂಭೀರ್ ಅವರು ಆರ್ಸಿಬಿ ತಂಡವನ್ನು ಕೆಣಕಿ ಟ್ವೀಟ್ ಮಾಡಿದ್ದು, ಈಗ ಅದು ವೈರಲ್ ಆಗಿದ್ದು.

gautham gambir trolls rcb | Live Kannada News
Gautham Gambhir: ಆರ್ಸಿಬಿಯನ್ನು ಮತ್ತೆ ಕೆಣಕಿದ ಗಂಭೀರ್- ಚೆನ್ನೈ ಕಪ್ ಗೆಲ್ಲುತ್ತಿದ್ದಂತೆ, ಇರಲಾರದೆ ಗಂಭೀರ್ ಹೇಳಿದ್ದೇನು ಗೊತ್ತೇ? ಇವೆಲ್ಲಾ ಬೇಕಿತ್ತಾ ಗುರು?? https://sihikahinews.com/2023/05/31/gautham-gambhir-trolls-rcb/

ಐಪಿಎಲ್ ಫಿನಾಲೆ ಪಂದ್ಯ ಭಾನುವಾರ ನಡೆಯಬೇಕಿತ್ತು, ಆದರೆ ಮಳೆಯ ಕಾರಣದಿಂದ ಸೋಮವಾರಕ್ಕೆ ಮುಂದೂಡಲಾಯಿತು, ಪಂದ್ಯ ನಡೆದದ್ದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ. ಸಿ.ಎಸ್.ಕೆ ವರ್ಸಸ್ ಜಿಟಿ (CSK vs GT) ವಿರುದ್ಧದ ಪಂದ್ಯದಲ್ಲಿ ಜಿಟಿ ತಂಡ ಮೊದಲು ಬ್ಯಾಟಿಂಗ್ ಮಾಡಿ 4 ವಿಕೆಟ್ಸ್ ನಷ್ಟಕ್ಕೆ 214 ರನ್ಸ್ ಸ್ಕೋರ್ ಮಾಡಿ, ಸಿ.ಎಸ್.ಕೆ ತಂಡಕ್ಕೆ 215 ರನ್ ಗುರಿ ನೀಡಿತು. ಆದರೆ ಎರಡನೇ ಇನ್ನಿಂಗ್ಸ್ ಶುರು ಮಾಡುವ ವೇಳೆಗೆ ಮತ್ತೆ ಮಳೆ ಶುರುವಾಯಿತು.. ಇದನ್ನು ಓದಿ..Gold Rate: ನಾವು ಹೇಳಿದ ಹಾಗೆ ಮತ್ತಷ್ಟು ಕುಸಿಯಿತು ಚಿನ್ನ- ಈ ಬಾರಿ ಎಷ್ಟು ಸಾವಿರ ಕಡಿಮೆ ಆಗಿದೆ ಗೊತ್ತೇ? ಅಂಗಡಿಗೆ ಮುಗಿಬಿದ್ದ ಜನ

ಮಳೆ ಇಂದ ಎರಡನೇ ಇನ್ನಿಂಗ್ಸ್ ತಡವಾಗಿ ಶುರುವಾದ ಕಾರಣ, 15 ಓವರ್ ಗಳಲ್ಲಿ ಚೆನ್ನೈ ತಂಡ 171 ರನ್ಸ್ ಗಳಿಸಬೇಕಿತ್ತು. ಇದನ್ನು ಚೇಸ್ ಮಾಡಿದ ಚೆನ್ನೈ ತಂಡ 5 ವಿಕೆಟ್ಸ್ ಗಳ ನಷ್ಟಕ್ಕೆ 171 ರನ್ಸ್ ಭಾರಿಸಿ, ಐದನೇ ಸಾರಿ ಐಪಿಎಲ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು. ಚೆನ್ನೈ ತಂಡ ಗೆಲ್ಲುತ್ತಿದ್ದ ಹಾಗೆ, ಅಭಿಮಾನಿಗಳು ಕ್ರಿಕೆಟ್ ಪ್ರಿಯರು ಮತ್ತು ಎಲ್ಲರೂ ಸಹ ಶುಭಾಶಯ ತಿಳಿಸುವುದಕ್ಕೆ ಶುರು ಮಾಡಿದರು. ಈ ವೇಳೆ ಗೌತಮ್ ಗಂಭೀರ್ (Gautam Gambhir) ಅವರು ಮಾಡಿರುವ ಒಂದು ಟ್ವೀಟ್ ಈಗ ವಿವಾದವಾಗಿದೆ.

“ಶುಭಾಶಯಗಳು ಚೆನ್ನೈ ಸೂಪರ್ ಕಿಂಗ್ಸ್.. ಒಂದು ಟ್ರೋಫಿ ಗೆಲ್ಲುವುದೇ ಕಷ್ಟ..ಅಂಥದ್ರಲ್ಲಿ ಐದು ಸಾರಿ ಟ್ರೋಫಿ ಗೆಲ್ಲುವುದು ನಂಬಲು ಅಸಾಧ್ಯ ಎನ್ನಿಸುವಂಥದ್ದು..” ಎಂದು ಟ್ವೀಟ್ ಮಾಡಿದ್ದು, ಇದು ಪರೋಕ್ಷವಾಗಿ ಆರ್ಸಿಬಿ ತಂಡಕ್ಕೆ ಟಾಂಗ್ ಕೊಟ್ಟಿರುವ ಟ್ವೀಟ್ ಆಗಿದೆ. ಇದರಿಂದ ಆರ್ಸಿಬಿ ಅಭಿಮಾನಿಗಳು ಕೋಪಗೊಂಡಿದ್ದು, ಗೌತಮ್ ಗಂಭೀರ್ ಅವರಿಗೆ ಇದೆಲ್ಲಾ ಬೇಕಿತ್ತಾ ಎನ್ನುತ್ತಿದ್ದಾರೆ. ಇದನ್ನು ಓದಿ..Kannada News: ಅಧಿಕಾರಕ್ಕೆ ಏರಿದ ತಕ್ಷಣ ಮತ್ತೊಂದು ಖಡಕ್ ಆದೇಶ ಕೊಟ್ಟ ಡಿಕೆಶಿ- ಪಕ್ಷಾತೀತವಾಗಿ ಬೆಂಬಲ ಕೊಟ್ಟ ಬಿಜೆಪಿ ಫ್ಯಾನ್ಸ್. ಏನು ಗೊತ್ತೇ?

Comments are closed.