Rakshit Shetty: ರಾಮಮಂದಿರದ ದರ್ಶನದ ಬಗ್ಗೆ ತನ್ನ ಅನುಭವವನ್ನು ಹಂಚಿಕೊಂಡು ರಕ್ಷಿತ್ ಶೆಟ್ಟಿ ಹೇಳಿದ್ದೇನು ಗೊತ್ತೇ?

Rakshit Shetty: ಜನವರಿ 22ರಂದು ಅಯೋಧ್ಯೆಯ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಅದ್ದೂರಿಯಾಗಿ ನಡೆದಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಈ ಸಂದರ್ಭದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ರಾಮಮಂದಿರಕ್ಕೆ ಭೇಟಿ ನೀಡಿ ರಾಮನ ದರ್ಶನವನ್ನು ಪಡೆದುಕೊಂಡಿದ್ದರು ಹಾಗೂ ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿರುವಂತಹ ಶ್ರೀ ನರೇಂದ್ರ ಮೋದಿಯವರು ದೇವಸ್ಥಾನದ ಉದ್ಘಾಟನೆಯನ್ನು ಕೂಡ ಮಾಡಿದ್ದರು. ಈಗ ರಾಮನನ್ನು ನೋಡುವ ಸರದಿ ನಮ್ಮ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರದ್ದು. ಅಯೋಧ್ಯ ಶ್ರೀ ರಾಮನ ದರ್ಶನವನ್ನು ಪಡೆದುಕೊಂಡಿರುವಂತಹ ರಕ್ಷಿತ್ ಶೆಟ್ಟಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ವಿವರವನ್ನು ಪಡೆದುಕೊಳ್ಳೋಣ.

ರಾಮನ ಪ್ರಾಣ ಪ್ರತಿಷ್ಠೆ ಆದಾಗಿನಿಂದಲೂ ಕೂಡ ರಾಮನನ್ನು ನೇರವಾಗಿ ನೋಡಬೇಕು ಎಂಬುದಾಗಿ ಸಾಕಷ್ಟು ದಿನಗಳಿಂದ ನಾನು ಕಾಯುತ್ತಿದ್ದ ಹಾಗೂ ರಾಮನ ಕಣ್ಣುಗಳನ್ನು ಪ್ರತಿ ಬಾರಿ ನೋಡಿದಾಗಲೂ ಕೂಡ ಅದು ನಿಜವಾದ ಕಣ್ಣುಗಳೇ ಅನ್ನುವ ರೀತಿಯಲ್ಲಿ ನನಗೆ ಅನುಭವಕ್ಕೆ ಬರುತ್ತಿತ್ತು ಎಂಬುದಾಗಿ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ. ಈಗ ನಾನು ನೇರವಾಗಿ ರಾಮನನ್ನು ನನ್ನ ಕಣ್ಣುಗಳಲ್ಲಿ ತುಂಬಿಕೊಂಡಿದ್ದೇನೆ.

ರಾಮನ ಮೂರ್ತಿಯ ಕಣ್ಣಿನ ಬಿಲುಪಿನ ಭಾಗಕ್ಕೆ ವಿಭಿನ್ನವಾದ ಕುಸುರಿಯನ್ನು ಮಾಡಲಾಗಿದೆ ಯಾಕೆಂದರೆ ಅದಲ್ಲದೆ ಹೋದಲ್ಲಿ ಅಷ್ಟೊಂದು ನೈಜತೆ ಆ ಕಣ್ಣುಗಳಲ್ಲಿ ಕಾಣಲು ಸಾಧ್ಯವಿಲ್ಲ ಎಂಬುದಾಗಿ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ. ರಾಮನ ದರ್ಶನವನ್ನು ಪಡೆದುಕೊಳ್ಳುವುದು ಸಾಕಷ್ಟು ಜನರಿಗೆ ಸಾಧ್ಯ ಇರುವುದಿಲ್ಲ ಆದರೆ ಆ ಅದೃಷ್ಟ ನನಗೆ ಸಿಕ್ಕಿದೆ. ಸುಮಾರು ಅರ್ಧ ಗಂಟೆಯ ಕಾಲ ನಾನು ರಾಮನ ಮೂರ್ತಿಯ ಎದುರುಗಡೆ ಕುಳಿತಿದ್ದೆ ಎಂಬುದಾಗಿ ತಮ್ಮ ಅನುಭವವನ್ನು ರಕ್ಷಿತ್ ಶೆಟ್ಟಿ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮೂರ್ತಿಯನ್ನು ಕೆತ್ತಿರುವಂತಹ ನಮ್ಮ ಕರ್ನಾಟಕದ ಪ್ರತಿಭೆ ಆಗಿರುವಂತಹ ಅರುಣ್ ಯೋಗಿರಾಜ್ ಅವರ ಬಗ್ಗೆ ಕೂಡ ರಕ್ಷಿತ್ ಶೆಟ್ಟಿ ಮಾತನಾಡುತ್ತಾ ಅವರ ಅನುಭವಗಳನ್ನು ಅವರಿಂದಲೇ ನಾನು ಕೇಳಿ ತಿಳಿಯುವ ಕುತೂಹಲವನ್ನು ಹೊಂದಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಈ ಹಿಂದೆ ಕಾಶಿಗೆ ಭೇಟಿ ನೀಡಿರುವಂತಹ ಅನುಭವದ ಬಗ್ಗೆ ಕೂಡ ರಕ್ಷಿತ್ ಶೆಟ್ಟಿ ಹಂಚಿಕೊಂಡಿದ್ದಾರೆ. ಒಟ್ಟಾರೆಯಾಗಿ ತಾವು ಬಹು ದಿನಗಳಿಂದ ಕಾಯುತ್ತಿದ್ದ ರಾಮನ ದರ್ಶನವನ್ನು ಪೂರೈಸಿರುವ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ಸಂತೋಷದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವುದು ರಾಮನನ್ನು ನೋಡಲು ಇರುವಂತಹ ಅವರ ಕಾತುರತೆಯ ಪ್ರಮಾಣವನ್ನು ಅದು ಸಾಬೀತುಪಡಿಸುತ್ತದೆ.

ಒಬ್ಬ ಸೆಲೆಬ್ರಿಟಿಯಾಗಿ ಕೂಡ ತಾವು ರಾಮನ ಭಕ್ತಿಯನ್ನು ಜಗತ್ತಿಗೆ ಸಾರುವ ರೀತಿಯಲ್ಲಿ ಹಂಚಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬ ರಾಮನ ಭಕ್ತರಿಗೆ ಹೆಮ್ಮೆಯ ವಿಷಯವಾಗಿದೆ. ಸದ್ಯದ ಮಟ್ಟಿಗೆ ರಕ್ಷಿತ್ ಶೆಟ್ಟಿ ಅವರು ತಮ್ಮ ಮುಂದಿನ ಸಿನಿಮಾ ರಿಚರ್ಡ್ ಆಂಟನಿಯ ತಯಾರಿಯಲ್ಲಿ ಇದ್ದಾರೆ. ಇದು ಉಳಿದವರು ಕಂಡಂತೆ ಸಿನಿಮಾದ ಸೀಕ್ವೆಲ್ ಆಗಿದ್ದು ಸಾಕಷ್ಟು ಅಭಿಮಾನಿಗಳು ಈ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಬಹುದಾಗಿದೆ.

Comments are closed.