Astrology: ಏಪ್ರಿಲ್ ತಿಂಗಳಿನಿಂದ ಇವರು ರಾಜರಂತೆ ಬದುಕುತ್ತಾರೆ. ಅದೃಷ್ಟವಂತ ರಾಶಿಯರಲ್ಲಿ ನೀವು ಇದ್ದೀರ ನೋಡಿ.

Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಪತ್ತು ಹಾಗೂ ಸಮೃದ್ಧಿಯ ಸಂಕೇತವಾಗಿರುವಂತಹ ಶುಕ್ರ ಗ್ರಹ ಶನಿಯ ರಾಶಿ ಆಗಿರುವಂತಹ ಕುಂಭ ರಾಶಿಯಿಂದ ತನ್ನ ಉಚ್ಛ ರಾಶಿಯಾಗಿರುವಂತಹ ಮೀನ ರಾಶಿಗೆ ಇದೆ ಮಾರ್ಚ್ 31ರಂದು ಕಾಲಿಡಲಿದ್ದಾನೆ. ಇದರಿಂದಾಗಿ ವಿಶೇಷ ರಾಜಯೋಗ ರೂಪಗೊಳ್ಳಲಿದ್ದು ಏಪ್ರಿಲ್ ತಿಂಗಳಲ್ಲಿ ಕೆಲವು ವಿಶೇಷ ರಾಶಿಯವರಿಗೆ ಇದರ ಸಕಾರಾತ್ಮಕ ಪರಿಣಾಮ ಬೀರಲಿದ್ದು ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ.

ಮಿಥುನ ರಾಶಿ

ಉದ್ಯೋಗ ಕ್ಷೇತ್ರದಲ್ಲಿ ಇರುವಂತಹ ಮಿಥುನ ರಾಶಿಯವರಿಗೆ ಸಾಕಷ್ಟು ಲಾಭಗಳು ಒಂದಾದ ಮೇಲೊಂದರಂತೆ ಸಿಗಲಿದೆ. ಕೆಲಸದಲ್ಲಿ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಸೇರಿದಂತೆ ವರಿಷ್ಠ ಅಧಿಕಾರಿಗಳ ಮೆಚ್ಚುಗೆ ಕೂಡ ಸಿಗಲಿದೆ. ಸಾಕಷ್ಟು ಸಮಯಗಳಿಂದ ಕೆಲಸದ ನಿರೀಕ್ಷೆಯಲ್ಲಿ ಇರುವಂತಹ ನಿರುದ್ಯೋಗಿಗಳಿಗೆ ಅವರಿಗೆ ಇಷ್ಟ ಆಗುವಂತಹ ಕೆಲಸ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಫ್ಯಾಷನ್ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಉದ್ಯೋಗಿಗಳಿಗೆ ಕೂಡ ಸಾಕಷ್ಟು ಪ್ರಗತಿ ಹೊಂದುವಂತಹ ಅವಕಾಶ ಸಿಗಲಿದೆ.

ಕರ್ಕ ರಾಶಿ

ಕಳೆದ ಸಾಕಷ್ಟು ಸಮಯಗಳಿಂದ ಕರ್ಕ ರಾಶಿಯವರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರಬಹುದು ಆದರೆ ಇನ್ನು ಮುಂದೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಯಾಕೆಂದರೆ ಏಪ್ರಿಲ್ ತಿಂಗಳಲ್ಲಿ ಶುಕ್ರನ ಕೃಪೆಯಿಂದಾಗಿ ಕೈತುಂಬ ಹಣ ಸಿಗಲಿದೆ. ಅನಿರೀಕ್ಷಿತವಾಗಿ ಬೇರೆ ಬೇರೆ ಮೂಲಗಳಿಂದ ಆರ್ಥಿಕ ಲಾಭ ಆಗುವಂತಹ ಸಾಧ್ಯತೆ ಹೆಚ್ಚಾಗಿದೆ. ಕೆಲಸದ ವಿಚಾರದಲ್ಲಿ ದೂರ ಪ್ರಯಾಣ ಮಾಡಬೇಕಾದ ಅವಶ್ಯಕತೆ ಕೂಡ ಈ ಸಂದರ್ಭದಲ್ಲಿ ಕಂಡುಬರುತ್ತದೆ. ನಿಮ್ಮ ಮೆಚ್ಚಿನ ಸಂಗಾತಿಯಿಂದ ನಿಮ್ಮ ಜೀವನದಲ್ಲಿ ಖುಷಿ ಇನ್ನಷ್ಟು ಹೆಚ್ಚಾಗಲಿದೆ ಹಾಗೂ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡಿರುವಂತಹ ದೊಡ್ಡ ಕನಸು ನನಸಾಗುವಂತಹ ಸಮಯ ಕೂಡ ಹತ್ತಿರವಾಗಿದೆ.

ತುಲಾ ರಾಶಿ

ಈ ಸಮಯದಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿವೆ ಹಾಗೂ ಇದೇ ಕಾರಣದಿಂದಾಗಿಯೇ ಜನರು ನಿಮ್ಮತ್ತ ಇನ್ನಷ್ಟು ಹೆಚ್ಚು ಆಕರ್ಷಿತರಾಗುತ್ತಾರೆ. ಯಾವುದೇ ಕೆಲಸ ಮಾಡುವಂತಹ ಧೈರ್ಯ ಹಾಗೂ ಆತ್ಮವಿಶ್ವಾಸ ನಿಮ್ಮಲ್ಲಿ ಹೆಚ್ಚಾಗಲಿದೆ. ಇನ್ವೆಂಷನ್ ಕ್ಷೇತ್ರದಲ್ಲಿ ಇರುವಂತಹ ಉದ್ಯೋಗಿಗಳಿಗೆ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಉತ್ತಮವಾದ ಬೆಳವಣಿಗೆಗಳನ್ನು ಕಾಣುವಂತಹ ಅವಕಾಶ ಇದೆ. ಅದೃಷ್ಟದ ಸಹಾಯದಿಂದಾಗಿ ನೀವು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಗೆಲುವನ್ನು ಸಂಪಾದನೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾಕಷ್ಟು ಸಮಯಗಳಿಂದ ಕಂಕಣ ಭಾಗ್ಯಕ್ಕಾಗಿ ಎದುರು ನೋಡುತ್ತಿರುವಂತಹ ತುಲಾ ರಾಶಿಯವರಿಗೆ ಮದುವೆ ಆಗುವಂತಹ ಭಾಗ್ಯ ಕೂಡಿ ಬರಲಿದೆ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ನಿಮ್ಮ ಕುಟುಂಬಸ್ಥರ ಹಾಗೂ ಸ್ನೇಹಿತರ ಬೆಂಬಲ ಇರಲಿದ್ದು ಯಾವುದೇ ಸಂದರ್ಭದಲ್ಲಿ ಕೂಡ ಅವರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಕೂಡ ನಡೆಯಲಿದ್ದು ಅದರಲ್ಲಿ ನೀವು ಭಾಗಿಯಾಗುವ ಮೂಲಕ ದೇವರ ಕೃಪೆಗೆ ಪಾತ್ರರಾಗಬಹುದಾಗಿದೆ.

Comments are closed.