Kannada Serial: ಭಾಗ್ಯ ತಾಂಡವ್ ಜೀವನದಲ್ಲಿ ಮತ್ತೊಂದ್ ಟ್ವಿಸ್ಟ್! ಏನೋ ಮಾಡಕ್ ಹೋಗಿ ಇನ್ನೇನೋ ಮಾಡಿ ಭಾಗ್ಯಕ್ಕೆ ಮತ್ತೆ ತೊಂದ್ರೆ ಕೊಡ್ತಾನಾ?

Kannada Serial: ಭಾಗ್ಯಲಕ್ಷ್ಮಿ ಧಾರವಾಹಿ ಈಗಾಗಲೇ ತನ್ನ ಪ್ರೇಕ್ಷಕರನ್ನ ರೋಚಕ ಎಪಿಸೋಡ್ಗಳ ಮುಖಾಂತರ ಸೆಳೆಯುವುದಕ್ಕೆ ಯಶಸ್ವಿಯಾಗಿದೆ. ಈಗ ಮೂಡಿ ಬರುತ್ತಿರುವ ಎಪಿಸೋಡ್ ನಲ್ಲಿ ತಾಂಡವ ಭಾಗ್ಯ ಬಳಿ ಬಂದು ನಿಂಗೆ ಮನೆಯಿಂದ ಹೊರಗೆ ಹೋಗೋದಿಕ್ಕೆ ಏನು ಬೇಕು ಅಂತ ಕಿರುಚಾಡ್ತಾನೆ, ಇವರಿಬ್ಬರ ಜಗಳ ನೋಡಿ ಮನೆಯವರೆಲ್ಲ ಬರ್ತಾರೆ.

ಪ್ರತಿದಿನ ಮನೆಯಲ್ಲಿ ಇದೇ ಜಗಳ ಆಗ್ತಾ ಇರೋದು ನೋಡಿ ಮಕ್ಕಳಿಗೂ ಕೂಡ ಬೇಸತ್ತು ಹೋಗಿದೆ. ಇನ್ನು ಮನೆಯ ಗೆರೆಯನ್ನು ದಾಟಿ ಈಚೆಗೆ ಬಂದಿರುವುದನ್ನು ನೋಡಿ ಕುಸುಮ ಕೂಡ ಇದನ್ನ ಪ್ರಶ್ನಿಸುತ್ತಾಳೆ. ನಿಮ್ಮಿಬ್ಬರ ನಡುವೆ ಯಾವುದೇ ತೊಂದರೆ ಆಗಬಾರದು ಅನ್ನೋ ಕಾರಣಕ್ಕಾಗಿ ಅಲ್ವಾ ಈ ರೀತಿ ಗೆರೆ ಹಾಕಿರೋದು ಇನ್ನು ಯಾಕೆ ಜಗಳ ಆಡ್ತಿಯಾ ಎಂದು ಅಮ್ಮ ಕೇಳಿದಾಗ ನಿನ್ನದು ಅತಿ ಆಯ್ತು ಅನ್ನೋದಾಗಿ ತಾಂಡವ್ ಏರಿದ ಧ್ವನಿಯಲ್ಲಿ ಮಾತನಾಡುತ್ತಾನೆ. ಇದಾದ ನಂತರ ಭಾಗ್ಯಳ ಕಡೆಗೆ ಮುಖ ಮಾಡಿ ನಿನಗೆ ನಿನ್ನ ತವರು ಮನೆಯ ಕೊಂಪೆಯಲ್ಲಿ ಬದುಕೋದಕ್ಕೆ ಇಷ್ಟ ಇಲ್ಲ ಅಂತ ತಾನೇ ಇಲ್ಲಿ ಇರೋದಕ್ಕೆ ಈ ರೀತಿ ಮಾಡ್ತಾ ಇರೋದು ಅಂತ ಕೇಳ್ತಾನೆ. ಈ ಸಂದರ್ಭದಲ್ಲಿ ಅವಳಿಗೆ ಚು-ಚ್ಚಿ ಮಾತನಾಡುವ ರೀತಿಯಲ್ಲಿ ನನ್ನ ಮನೆ ಒಡವೆ ಹಣ ಎಲ್ಲವನ್ನೂ ಕೂಡ ಕೊಡ್ತೀನಿ ನನ್ನ ಬಿಟ್ಟು ಹೋಗು ಅಂತ ತನ್ನ ಪರ್ಸನಲ್ ಇರುವಂತಹ ಹಣವನ್ನು ಆಕೆಯ ಮುಖಕ್ಕೆ ಎಸೆಯುತ್ತಾನೆ‌. ಇದರಿಂದಾಗಿ ಭಾಗ್ಯ ಅಳೋದಕ್ಕೆ ಪ್ರಾರಂಭ ಮಾಡುತ್ತಾಳೆ.

ಲಾಕರ್ ನಲ್ಲಿರೋ ಸೇಫ್ ಆಗಿರುವ ಬೆಳ್ಳಿ ಬಂಗಾರವನ್ನು ಕೂಡ ತಗೊಂಡು ಹೋಗು ಅಂತ ಉರಿಯೋ ಬೆಂಕಿ ಮೇಲೆ ತುಪ್ಪ ಸುರಿದಂತೆ ತಾಂಡವ್ ಹೇಳ್ತಾನೆ. ಆ ಸಂದರ್ಭದಲ್ಲಿ ಆಚಾತುರ್ಯದಿಂದಾಗಿ ಆತನ ಪರ್ಸ್ ನಲ್ಲಿ ಇರುವಂತಹ ಭಾಗ್ಯಳ ಹಾಲ್ ಟಿಕೆಟ್ ಹೊರಬರುತ್ತದೆ. ಮೊದಲಿಗೆ ಇದರ ಬಗ್ಗೆ ಯಾರಿಗೂ ಕೂಡ ಅಷ್ಟೊಂದು ಗಮನ ಇರೋದಿಲ್ಲ ಆದರೆ ನಂತರ ತನ್ನಿ ಇದರ ಬಗ್ಗೆ ಮನೆಯವರಿಗೆ ಹೇಳುತ್ತಾಳೆ. ಮುಂದಿನ ಸಂಚಿಕೆಯಲ್ಲಿ ಇದು ಯಾವ ಹಂತಕ್ಕೆ ಹೋಗುತ್ತದೆ ಅನ್ನೋದನ್ನ ಕಾದು ನೋಡಬೇಕಾಗಿದೆ.

ಸದ್ಯಕ್ಕೆ ಭಾಗ್ಯ ಮನೆಯಿಂದ ಹೊರಗೆ ಹೋಗಬೇಕು ಹಾಗೂ ಶ್ರೇಷ್ಠಾಳನ್ನ ಮದುವೆ ಆಗಬೇಕು ಅನ್ನುವಂತಹ ನಿರ್ಧಾರಕ್ಕೆ ತಾಂಡವ್ ಬಂದಿದ್ದಾನೆ. ಇದೇ ಕಾರಣಕ್ಕಾಗಿ ಭಾಗ್ಯಾಳಿಂದ ತಾಂಡವ್ ಡಿ ಬಾಸ್ ಪಡೆದುಕೊಳ್ಳಬೇಕು ಎನ್ನುವಂತಹ ನಿರ್ಧಾರವನ್ನು ಹೊಂದಿದ್ದಾನೆ. ಇದೇ ಕಾರಣಕ್ಕಾಗಿ ಪ್ರತಿದಿನ ಮನೆಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ಜಗಳ ನಡೆಯುತ್ತಿದೆ. ಸದ್ಯದ ಮಟ್ಟಿಗೆ ಧಾರವಾಹಿಯ ಪ್ರತಿಯೊಂದು ಎಪಿಸೋಡ್ ಗಳಲ್ಲಿ ಕಂಡುಬರುತ್ತಿರುವ ಒಂದಲ್ಲ ಒಂದು ರೋಚಕ ತಿರುವುಗಳಿಂದ ಧಾರವಾಹಿಯ ಪ್ರೇಕ್ಷಕರಿಗೆ ಪ್ರತಿದಿನ ಸಂಜೆ ಆದ ಕ್ಷಣ ಈ ಧಾರವಾಹಿಯನ್ನು ನೋಡುವಂತಹ ಅಭ್ಯಾಸ ಕರಗತವಾಗಿಬಿಟ್ಟಿದೆ ಅಂತ ಹೇಳಬಹುದು. ಅಷ್ಟರಮಟ್ಟಿಗೆ ಸಿನಿಮಾ ಗಿಂತ ಹೆಚ್ಚಾಗಿ ಈ ಧಾರವಾಹಿ ಪ್ರೇಕ್ಷಕರಿಗೆ ಉತ್ತಮ ದಾಧಾರವಾಹಿ ಅನುಭವವನ್ನು ನೀಡ್ತಾ ಇದೆ.

Comments are closed.