Cricket News: ಪ್ಲೇ ಆಫ್ ಗೆ ಆರ್‌ಸಿಬಿ ಕ್ವಾಲಿಫೈ ಆಗುತ್ತಿದ್ದಂತೆ ಪುನೀತ್ ರಾಜಕುಮಾರ್ ರವರ ಪತ್ನಿ ಅಶ್ವಿನಿ ಬಗ್ಗೆ ಜನ ಹೇಳಿದ್ದೇನು? ಹೇಗ್ ಬೇಕಾದ್ರೂ ಬರತ್ತೆ ಮಾತು !

Cricket News: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಕೂಡ ಸಾಕಷ್ಟು ವರ್ಷಗಳ ನಂತರ ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾಗುವಂತಹ ಸಾಧನೆಯನ್ನು ಮಾಡಿದೆ. ಮೇ 18ನೇ ದಿನಾಂಕದಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವಂತಹ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ಲೇ ಆಫ್ ಹಂತಕ್ಕೆ ತೇರ್ಗಡೆ ಆಗುವಂತಹ ಸಾಧನೆಯನ್ನು ಪಾಫ್ ಡ್ಯೂಪ್ಲಿಸಿಸ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾಡಿದೆ. ಒಂದು ಸಮಯದಲ್ಲಿ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದು ಪಾಯಿಂಟ್ಸ್ ಟೇಬಲ್ ನಲ್ಲಿ ಕೊನೆಯ ಸ್ಥಾನದಲ್ಲಿ ಇದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ನಾಲ್ಕನೇ ತಂಡವಾಗಿ ಕ್ವಾಲಿಫೈ ಆಗಿರುವುದು ನಿಜಕ್ಕೂ ಕೂಡ ಮೆಚ್ಚಿ ಕೊಳ್ಳಬೇಕಾಗಿರುವಂತಹ ವಿಚಾರ ಎಂದು ಹೇಳಬಹುದಾಗಿದೆ. ಕೊನೆಯ ಆರು ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಬೆಂಗಳೂರಿನ ಹುಡುಗರು ಈ ವಿಜಯವನ್ನ ಸಾಧಿಸಿದ್ದಾರೆ ಎಂದು ಹೇಳಬಹುದಾಗಿದೆ.

ಅಶ್ವಿನಿ ಪುನೀತ್ ರಾಜಕುಮಾರ್ ರವರಿಗೆ ಪ್ರಶಂಸೆಯ ಸುರಿಮಳೆ!

ನಿಮಗೆಲ್ಲರಿಗೂ ತಿಳಿದಿರಬಹುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಆರಂಭಕ್ಕೂ ಮುನ್ನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅನ್ ಬಾಕ್ಸಿಂಗ್ ಕಾರ್ಯಕ್ರಮವನ್ನು ಇಟ್ಟುಕೊಂಡಿತ್ತು. ಒಂದು ಲೆಕ್ಕದಲ್ಲಿ ಟೂರ್ನಮೆಂಟ್ ಗೆ ಶುಭಾರಂಭ ಮಾಡುವಂತಹ ಕಾರ್ಯಕ್ರಮ ಅದಾಗಿತ್ತು. ಆ ಸಂದರ್ಭದಲ್ಲಿ ಮುಖ್ಯ ಅತಿಥಿಯ ರೂಪದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಆಗಿರುವಂತಹ ಅಶ್ವಿನಿ ಪುನೀತ್ ರಾಜಕುಮಾರ್ ರವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅದಾದ ನಂತರ ಆರ್‌ಸಿಬಿ ತಂಡ ಸತತವಾಗಿ ಾಕಷ್ಟು ಪಂದ್ಯಗಳನ್ನು ಸೋತಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಬೇರೆ ನಟರ ಅಭಿಮಾನಿಗಳು ಅಶ್ವಿನಿ ಪುನೀತ್ ರಾಜಕುಮಾರ್ ರವರು ಈ ಕಾರ್ಯಕ್ರಮಕ್ಕೆ ಬಂದ ಕಾರಣದಿಂದಾಗಿಯೇ ಆರ್‌ಸಿಬಿ ತಂಡ ಈ ರೀತಿ ಸೋಲುತ್ತಿದೆ ಎಂಬುದಾಗಿ ಹೇಳಿಕೊಂಡಿದ್ದರು.

ಆದರೆ ಈಗ ಅದಾದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತವಾಗಿ ಪಂದ್ಯಗಳನ್ನು ಗೆದ್ದು ಸಾಕಷ್ಟು ಸಮಯಗಳ ನಂತರ ಎಲಿಮಿನೇಟರ್ ಹಂತವನ್ನು ತಲುಪಿದ್ದು ನಿಜಕ್ಕೂ ಕೂಡ ವಿಸ್ಮಯಕಾರಿ ಸಾಧನೆ ಎಂದು ಹೇಳಬಹುದಾಗಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪುನೀತ್ ರಾಜಕುಮಾರ್ ರವರ ಪತ್ನಿ ಆಗಿರುವಂತಹ ಅಶ್ವಿನಿ ಪುನೀತ್ ರಾಜಕುಮಾರ್ ರವರು ಕಾರ್ಯಕ್ರಮಕ್ಕೆ ಬಂದ ಕಾಲ್ಗುಣದಿಂದಾಗಿಯೇ ಈ ರೀತಿ ಗೆಲುವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಅನ್ನೋದಾಗಿ ಪೋಸ್ಟ್ಗಳನ್ನು ಮಾಡಲು ಪ್ರಾರಂಭಿಸಿದ್ದಾರೆ.

ಈ ಹಿಂದೆ ಆರ್‌ಸಿಬಿ ಸೋಲಲು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕಾರಣ ಎಂದು ಹೇಳುತ್ತಿದ್ದ ಟೀಕೆ ಗಾರರು ಎಲ್ಲಿದ್ದೀರಪ್ಪ ಎಂಬುದಾಗಿ ಕೂಡ ಇಲ್ಲಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಕೇಳುವುದಕ್ಕೆ ಪ್ರಾರಂಭ ಮಾಡಿದ್ದಾರೆ. ಖಂಡಿತವಾಗಿ ಈ ಅರ್ಥದಲ್ಲಿ ನಾವು ಮಾತನಾಡುವುದಾದರೆ ಅಶ್ವಿನಿ ಪುನೀತ್ ರಾಜಕುಮಾರ್ ರವರ ಕಾಲ್ಗುಣ ನಿಜಕ್ಕೂ ಕೂಡ ಆರ್ಸಿಬಿ ಪರವಾಗಿ ಈ ಬಾರಿ ಐಪಿಎಲ್ ನಲ್ಲಿ ಸಾಕಷ್ಟು ಒಳ್ಳೆಯ ರೀತಿಯಲ್ಲಿ ಪರಿಣಾಮ ಬೀರಿದೆ ಎಂದು ಹೇಳಬಹುದಾಗಿದೆ.

Comments are closed.