’ಅಲ್ಲೂರಿ’ ನಾಯಕ ಶ್ರೀ ವಿಷ್ಣು ಆಸ್ಪತ್ರೆಗೆ ದಾಖಲು; ಅವರ ಆರೋಗ್ಯದ ಬಗ್ಗೆ ಇಲ್ಲಿದೆ ನ್ಯೂ ಅಪ್ಡೇಟ್ಸ್!

ನಟ ಶ್ರೀ ವಿಷ್ಣು ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಶ್ರೀ ವಿಷ್ಣು ಅವರಿಗೆ ಕೆಲವು ದಿನಗಳಿಂದಲೂ ಜ್ವರ ಇತ್ತು. ಆದರೆ ಇದು ಸಾಮಾನ್ಯ ಜ್ವರ ಬಿಡು ಅಂತ ನಿರ್ಲಕ್ಷ ಮಾಡಿದ್ರು ಶ್ರೀ ವಿಷ್ಣು ಹಾಗಾಗಿ ಮನೆಯ ಹತ್ತಿರ ಸಣ್ಣ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿದ್ರು ಆದರೆ ವಿಷ್ಣು ಅವರಿಗೆ ವಾರ ಕಳೆದರೂ ಜ್ವರ ವಾಸಿಯಾಗಲೇ ಇಲ್ಲ ಇದೇ ಕಾರಣಕ್ಕೆ ಅವರ ಸ್ಥಿತಿಯು ಗಂಭೀರವಾಗಿದ್ದು ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಇದೆ.

ಸೂಕ್ತ ಚಿಕಿತ್ಸೆಗಾಗಿ ಶ್ರೀ ವಿಷ್ಣು ಅವರನ್ನ ಆಸ್ಪತ್ರೆಗೆ ದಾಖಲಿಸಿ ರಕ್ತ ಪರೀಕ್ಷೆ ಮಾಡಿಸಿದಾಗ ಅವರಿಗೆ ಡೆಂಗ್ಯೂ ಜ್ವರ ಇರುವುದು ಖಾತರಿಯಾಗಿದೆ. ಇದೀಗ ಹೈದರಾಬಾದ್ನ ಖಾಸಗಿ ಆಸ್ಪತ್ರೆ ಒಂದರಲ್ಲಿ ಶ್ರೀ ವಿಷ್ಣು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಶ್ರೀ ವಿಷ್ಣು ಅವರ ಆರೋಗ್ಯದ ಸ್ಥಿತಿ ಸುಧಾರಿಸುತ್ತಿದೆ ಆದರೆ ಅವರು ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂದು ಶ್ರೀ ವಿಷ್ಣು ಅವರ ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಲ್ಲೂರಿ ಸಿನಿಮಾದಲ್ಲಿ ಶ್ರೀ ವಿಷ್ಣು ಅವರು ನಟಿಸಿದ್ದು ಕೆಲವು ದಿನಗಳ ಹಿಂದೆ ಅಲ್ಲೂರಿ ಸೀತಾರಾಮರಾಜು ಜಯಂತಿಯಂತೆ ಈ ಸಿನಿಮಾದ ಟೀಸರನ ಬಿಡುಗಡೆ ಮಾಡಲಾಗಿತ್ತು. ಸಿನಿಮಾದ ಬಿಡುಗಡೆ ಹಾಗೂ ಪ್ರಚಾರದ ಕಾರ್ಯದಲ್ಲಿ ನಿರತರಾಗಿದ್ದ ಶ್ರೀ ವಿಷ್ಣು ಅವರು ಅದರಲ್ಲಿಯೇ ಬ್ಯುಸಿಯಾಗಿ ಆರೋಗ್ಯದಲ್ಲಿ ಮಾಡಿದ ನಿರ್ಲಕ್ಷದಿಂದಾಗಿ ಇಂದು ಆಸ್ಪತ್ರೆಗೆ ದಾಖಲಾಗುವಂತಾಗಿದೆ.

ನಟ ಶ್ರೀ ವಿಷ್ಣು ಅವರು ಟಾಲಿವುಡ್ ನ ಟರಲ್ಲಿ ಒಬ್ಬರು ಇವರು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ನಟನೆಯ ಕೆಲವು ಸಿನಿಮಾಗಳನ್ನ ಹೇಳುವುದಾದರೆ ನಾದಿ ನೀದಿ ಒಕೇ ಕತ, ವಸಂತ ರಾಯಲು, ತಿಪ್ಪರಾ ಮೀಸ, ಬ್ರೋಚೆವಾರೆವರುರಾ, ರಾಜರಾಜ ಚೋರ, ಅರ್ಜುನ ಪಾಲ್ಗುಣ, ರಾಮ್ ಪೋತಿನೇನಿ ಜೊತೆ ವುನ್ನೇದಿ ಒಕ್ಕಟೆ ಜೀವಿತಂ, ಮೆಂಟಲ್ ಮದಿಲೊ, ಭಲಾ ಥಾಂಡನಾ ಹೀಗೆ ಒಂದೇ ಎರಡೇ ಹಲವು ಚಿತ್ರಗಳಲ್ಲಿ ನಟಿಸಿರುವ ನಟ ಶ್ರೀ ವಿಷ್ಣು ಬೇಗ ಗುಣಮುಖರಾಗಿ ಮನೆಗೆ ಹಿಂತಿರುಗಲಿ ಅಂತ ಎಲ್ಲರೂ ಹಾರೈಸುತ್ತಿದ್ದಾರೆ.

Leave A Reply

Your email address will not be published.