Kirik Keerthi: ಜೀವ ಕಳೆದುಕೊಳ್ಳಲು ಹೋಗಿದ್ದ ಕಿರಿಕ್ ಕೀರ್ತಿ ಈಗೇಲ್ಲಿದ್ದಾರೆ ಗೊತ್ತೇ; ಜನರ ಎಲ್ಲಾ ಪ್ರಶ್ನೆಗೂ ವಿಡಿಯೋ ಮೂಲಕ ಉತ್ತರ ಕೊಟ್ಟ ಕೀರ್ತಿ ಏನು ಹೇಳಿದ್ದಾರೆ ನೋಡಿ!

Kirik Keerthi: ಕಿರಿಕ್ ಕೀರ್ತಿ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಇತ್ತೀಚಿಗೆ ಬೇಸರಕ್ಕೆ ಒಳಗಾಗಿ ತಾವು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ತನ್ನ ಮಗನ ಮುಖ ನೆನಪಾಗಿ ತಾವು ಈ ನಿರ್ಧಾರವನ್ನು ಕೈಬಿಟ್ಟಿರುವುದಾಗಿ ಹೇಳಿದ್ದರು. ಕೆಲವರು ದಿನವೂ ಫೋನ್ ಮಾಡಿ ಬೆದರಿಕೆ ಒಡ್ಡುವುದು, ಕಿರುಕುಳ ನೀಡುವುದು ಎಲ್ಲವೂ ನನ್ನ ಅಮ್ಮನಿಗು ಮನೆಯವರಿಗು ನಾವಾಗಿದೆ. ಹಾಗಾಗಿ ಜೀವವನ್ನೇ ಕಳೆದುಕೊಳ್ಳುವ ನಿರ್ಧಾರ ಮಾಡಿದ್ಡೇನೆ ಎಂದು ಹೇಳಿಕೊಂಡಿದ್ದರು.

ಈ ಘಟನೆಯ ಬಳಿಕ ಕಿರಿಕ್ ಕೀರ್ತಿ ಅವರಿಗೆ ಲಕ್ಷಾಂತರ ಜನ ಮೆಸೆಜ್, ಕಾಲ್ ಮಾದಿ ಸಾಂತ್ವಾನ ತಿಳಿಸಿದ್ದರು. ಈ ಘಟನೆ ನಡೆದು ಕೆಲ ಸಮಯವಾಯ್ತು. ಅದಾದ ಬಳಿಕ ಕಿರಿಕ್ ಕೀರ್ತಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಅವರು ಒಂದು ಯುಟ್ಯೂಬ್ ಚಾನೆಲ್ ನಲ್ಲಿ ಕೆಲಸ ಮಾಡುತ್ತಿದ್ದು ಅದರಲ್ಲಿಯೂ ಅವರು ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಇದೀಗ ಜನರ ಪ್ರಶ್ನೆಗಳಿಗೆ ಉತ್ತರ ನೀಡಿರುವ ಅವರು ವಿಡಿಯೋ ಒಂದನ್ನು ಮಾಡಿ ತಾನು ಎಲ್ಲಿದ್ದೇನೆ ಏನು ಮಾಡುತ್ತಿದ್ದೇನೆ ಎಂಬುದನ್ನು ಹೇಳಿಕೊಂಡಿದ್ದಾರೆ.

ಕೀರ್ತಿ ವಿಡಿಯೋದಲ್ಲಿ ಹೇಳಿದ್ಡೇನು?

ಹೌದು, ಕಿರಿಕ್ ಕೀರ್ತಿ ಬೆಂಗಳೂರಿನಲ್ಲಿ ಇಲ್ಲ. “ಚುನಾವಣೆ ಹತ್ತಿರ ಬರುತ್ತಿರುವ ಕಾರಣಕ್ಕೆ ಬೇರೆ ಬೇರೆ ಪಕ್ಷಗಳ ಕೆಲಸ ಮಾಡಿಕೊಡಲು ಬೆಂಗಳೂರಿನಿಂದ ಹೊರಗೆ ಉಳಿದಿದ್ಡೇನೆ.  ಇಷ್ಟು ದಿನ ನೀವೆಲ್ಲರೂ ಮೆಸೆಜ್ ಕಾಲ್ ಮಾಡಿ ಹೇಗಿದ್ದೀರಿ ಎಂದು ಕೇಳಿದ್ದೀರಿ ಆದರೆ ನನಗೆ ಉತ್ತರಿಸುವುದಕ್ಕೆ ಆಗಿರಲಿಲ್ಲ. ಜೊತೆಗೆ ಮಾನಸಿಕವಾಗಿ ಸ್ವಲ್ಪ ಕುಗ್ಗಿದ್ದೆ. ಹಾಗಾಗಿ ಸ್ವಲ್ಪ ಪ್ರಕೃತಿ ಚಿಕಿತ್ಸೆಯ ಅಗತ್ಯವೂ ನನಗಿತ್ತು. ಸದ್ಯದಲ್ಲಿಯೇ ಏನಾಗಿತ್ತು ಎಂಬ ಎಲ್ಳಾ ವಿಷಯವನ್ನೂ ಹ್ಳಿಕೊಳ್ಳುತ್ತೇನೆ. ನಿಮ್ಮ ಪ್ರೀತಿ ಆಶೀರ್ವಾದ ಹೀಗೆ ಇರಲಿ. ಜೀವನದಲ್ಲಿ ಈಗ ಎಲ್ಲವೂ ಒಳ್ಳೆಯದೇ ಆಗಿತ್ತಿದೆ. ನಿಮ್ಮನ್ನೇಲ್ಲಾ ಕೂದ್ದಾಗಿ ಭೇಟಿಯಾಗುತ್ತೇನೆ”. ಎಂದು ಕಿರಿಕ್ ಕೀರ್ತಿ ವಿಡಿಯೋದಲ್ಲಿ ಹೇಳಿಕೊಂಡಿದ್ಡಾರೆ.

ಅಗುವುದೆಲ್ಲಾ ಒಳ್ಳೆಯದಕ್ಕೆ ಅಂತಾರೆ ಹಾಗೆಯೇ ಸದ್ಯ ಎಲ್ಲವೂ ಒಳ್ಳೆಯದೇ ಆಗುತ್ತಿದೆ. ಈ ಘಟನೆಯ ನಂತರ ಒಳ್ಳೊಳ್ಳೆ ಜನರ ಪರಿಚಯವಾಗಿದೆ ಎಂದೂ ಹೇಳಿಕೊಂಡಿದ್ದರೆ. ಸದ್ಯ ಕಿರಿಕ್ ಕೀರ್ತಿ ತಮ್ಮ ಖಿನ್ನತೆಯಿಂದ ಆಚೆ ಬಂದು ಮೊದಲಿನಂತೆಆಗಲಿ ಎನ್ನುವುದೇ ಹಲವರ ಹಾರೈಕೆ.

Comments are closed.