Darshan Case:ನ್ಯಾಯಾಂಗ ಅವಧಿ ಇನ್ನೇನು ಮುಕ್ತಾಯ ಎನ್ನುವಷ್ಟರಲ್ಲಿ ದರ್ಶನ್ ಗೆ ಮತ್ತೊಂದು ಬಿಗ್ ಶಾಕ್;ಪಾಪ ಏನಾಗಿದೆ ಗೊತ್ತೇ?

Darshan Case:ಇವತ್ತು ಜುಲೈ 18 ನಿಮಗೆಲ್ಲರಿಗೂ ತಿಳಿದಿರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇವತ್ತು ತಮ್ಮ ಎರಡನೆಯ ನ್ಯಾಯಾಂಗ ಬಂಧನದ ಅವಧಿಯನ್ನು ಪೂರೈಸಲಿದ್ದಾರೆ. ಇನ್ನು ಇವತ್ತು ದರ್ಶನ್ ಪರವಾಗಿ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸುವಂತಹ ಸಾಧ್ಯತೆ ಇದೆ. ಆದರೆ ಪೊಲೀಸರು ಮಾತ್ರ ಇದಕ್ಕೆ ಅವಕಾಶ ಮಾಡಿಕೊಡೋದಿಲ್ಲ ಅನ್ನುವಂತಹ ಮಾತುಕತೆಗಳು ಕೂಡ ಕೇಳಿ ಬರ್ತಾ ಇದೆ. ಕಳೆದ ಬಾರಿಯ ರೀತಿಯಲ್ಲಿ ಈ ಬಾರಿ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆ ನಡೆಯಲಿದೆ ಎನ್ನುವಂತ ಮಾಹಿತಿ ಕೇಳಿ ಬಂದಿದೆ.

ಈಗಾಗಲೇ ಈ ಪ್ರಕರಣದಲ್ಲಿ ಸಾಕ್ಷಿ ನಾಶ ಆಗುವ ಕೆಲಸಗಳು ನಡೆದಿರುವುದರಿಂದಾಗಿ ಇನ್ನೂ ಒಂದು ವೇಳೆ ಜಾಮೀನು ಸಿಕ್ಕರೆ, ದರ್ಶನ್ ರವರು ಪ್ರಭಾವಿ ವ್ಯಕ್ತಿಯಾಗಿರುವ ಕಾರಣದಿಂದಾಗಿ ಪ್ರಕರಣಕ್ಕೆ ತೊಂದರೆ ಆಗಬಹುದು ಎನ್ನುವ ಕಾರಣಕ್ಕಾಗಿ ಜಾಮೀನು ಸಿಗುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ.

ಈ ಸಂದರ್ಭದಲ್ಲಿ ಪೊಲೀಸರು ಕೂಡ ರಿಮಾಂಡ್ ಅರ್ಜಿಯನ್ನು ಸಲ್ಲಿಸುವುದಕ್ಕೆ ಮುಂದಾಗಿದ್ದು ಅದರಲ್ಲಿ ಕೆಲವೊಂದು ಕಾರಣಗಳನ್ನು ಕೂಡ ಅವರು ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

  • ಉದಾಹರಣೆಗೆ ರೇಣುಕ ಸ್ವಾಮಿಯ ಮರಣದ ನಂತರ ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದರು ಕೂಡ ಎಂದು ಹೇಳಲಾಗಿದೆ.
  • ಇನ್ನು ಬಿಡುಗಡೆಯಾದ ನಂತರ ಉಳಿದಿರುವಂತಹ ಸಾಕ್ಷಿಗಳ ಮೇಲೆ ಕೂಡ ಇದು ಪರಿಣಾಮ ಬೀರುವುದಕ್ಕೆ ಕಾರಣವಾಗಬಹುದಾಗಿದೆ ಎಂದು ಕೂಡ ತಿಳಿದುಬಂದಿದೆ.
  • ಒಂದು ವೇಳೆ ಜಾಮೀನು ಸಿಕ್ಕರೆ ಅಪರಾಧಿಗಳು ವಿದೇಶಕ್ಕೆ ಕೂಡ ಹೋಗಬಹುದಾಗಿದೆ.
  • ದರ್ಶನ್ ರವರು ಹೊರಗೆ ಬಂದ ಮೇಲೆ ತಮ್ಮ ಹಣ ಹಾಗೂ ಅಭಿಮಾನಿಗಳ ಪ್ರಭಾವದಿಂದಾಗಿ ಈ ಪ್ರಕರಣದಲ್ಲಿ ಇನ್ನಷ್ಟು ಬೆಳವಣಿಗೆಗಳು ಹೊಂದೋದಕ್ಕೆ ಕಾರಣವಾಗಬಹುದು
  • ತನಿಖೆ ನಡೆಯುತ್ತಿರಬೇಕಾದರೆ ನೇ ಅಪರಾಧಿಗಳಿಗೆ ಜಾಮೀನು ಸಿಗೋದು ತನಿಖೆಗೆ ಹಿನ್ನಡೆ ಆಗುವಂತೆ ಮಾಡಬಹುದೆ ಎಂಬುದಾಗಿ ಕೂಡ ಪೊಲೀಸರು ತಮ್ಮ ಅಂಶವನ್ನು ತಿಳಿಸಬಹುದು.

ಹೀಗೆ ಇದೇ ರೀತಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಜಾಮೀನು ಸಿಗದೇ ಇರುವ ರೀತಿಯಲ್ಲಿ ಪೊಲೀಸರು ಸಾಕಷ್ಟು ಅಂಶಗಳನ್ನು ಪಟ್ಟಿ ಮಾಡಿದ್ದು ತಮ್ಮ ರಿಪೋರ್ಟ್ ನಲ್ಲಿ ನ್ಯಾಯಾಧೀಶರ ಮುಂದೆ ಇದನ್ನು ಇಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇವತ್ತು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಯಾವುದೇ ಜಾಮೀನು ಸಿಗುವಂತಹ ನಿರೀಕ್ಷೆ ಇಲ್ಲ ಎನ್ನುವುದಾಗಿ ಕೂಡ ಈ ವಿಚಾರಕ್ಕೆ ಸಂಬಂಧಪಟ್ಟಂತಹ ವಲಯದಲ್ಲಿ ಕೇಳಿ ಬರ್ತಾ ಇದೆ. ಈಗಾಗಲೇ ಡೆವಿಲ್ ಸಿನಿಮಾದ ಚಿತ್ರೀಕರಣವನ್ನು ಕೂಡ ಅರ್ಧದಲ್ಲಿಯೇ ಮುಟುಕುಗೊಳಿಸಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಜೈಲುವಾಸವನ್ನು ಅನುಭವಿಸುತ್ತಿದ್ದಾರೆ ಹೀಗಾಗಿ ಸಾಕಷ್ಟು ಸಿನಿಮಾಗಳು ಚಿತ್ರೀಕರಣಗಳು ಕೂಡ ಅರ್ಧಕ್ಕೆ ನಿಂತಿವೆ. ಇಂದು ಅಂದ್ರೆ ಜುಲೈ 18ರಂದು ನ್ಯಾಯಾಂಗ ಬಂಧನವನ್ನ ಮುಗಿಸಿ ಜಾಮೀನು ಪಡೆದುಕೊಂಡು ಹೊರಗೆ ಬರುವಂತಹ ಆಸೆಯನ್ನು ಇಟ್ಟುಕೊಂಡಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಪೊಲೀಸರು ತಣ್ಣೀರು ಎರೆಸುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ.

Comments are closed.