Kannada Astrology: ಇನ್ನು ಶುರುವಾಗುತ್ತಿದೆ ಶನಿ ದೇವನ ಕೃಪೆ: ಶನಿ ದೇವನೇ ನಿಂತು ಅದೃಷ್ಟ ನೀಡುವುದು ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಸಂಸ್ಕೃತದಲ್ಲಿ ಒಂದು ಮಾತಿದೆ “ತೇನ ವಿನ ತೃಣಮಪಿ ನ ಚಲತಿ” ಎಂದು. ಅಂದರೆ ಇದರ ಅರ್ಥ ದೇವರ ಅನುಗ್ರಹವಿಲ್ಲದೆ ಅಥವಾ ದೇವರ ಇಚ್ಚೆಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ ಎಂದು. ಹಾಗಾಗಿ ಮನುಷ್ಯನ ಜೀವನ ನಿಂತಿರುವುದು ಗ್ರಹಗತಿಗಳ ಚಲನೆಯ ಆಧಾರದ ಮೇಲೆ. ಪ್ರತಿಯೊಬ್ಬ ವ್ಯಕ್ತಿಯ ಗ್ರಹಗತಿಗಳು ಕಾಲ ಕಾಲಕ್ಕೆ ಬದಲಾಗುತ್ತಿರುತ್ತವೆ. ಅದರ ಮೇಲೆ ವ್ಯಕ್ತಿಯ ಜೀವನ ನಿಂತಿರುತ್ತದೆ. ಆತನು ಮಾಡುವ ಕೆಲಸದಲ್ಲಿ ಸೋಲು ಗೆಲುವು ನಿರ್ಧಾರವಾಗುತ್ತದೆ. ಶನಿಶ್ಚರನು ಜನವರಿ ಮಧ್ಯಭಾಗದಲ್ಲಿ ಕುಂಭ ರಾಶಿಗೆ ಪ್ರವೇಶಿಸಿದ್ದು, ಜನವರಿ ಅಂತ್ಯದಲ್ಲಿ ಅಸ್ತಗೊಂಡಿದ್ದಾನೆ. ಇದರಿಂದ ಕೆಲವೊಬ್ಬರಿಗೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಉಂಟಾಗಿರಬಹುದು. ಇದೆಲ್ಲ ತಾತ್ಕಾಲಿಕ. ಮಾ.5ರಂದು ಮತ್ತೆ ಶನಿಶ್ಚರನು ಸ್ವಂತ ರಾಶಿಯಾದ ಕುಂಭರಾಶಿಯಲ್ಲಿ ಉದಯಿಸಲಿದ್ದಾನೆ. ಈ ವೇಳೆ ಕೆಲವು ರಾಶಿಯವರಿಗೆ ಲಾಭವಾಗಲಿದೆ. ಹಾಗಾದರೆ ಯಾವ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ:Pavitra Lokesh: ಎಷ್ಟೇ ಮಾಡಿದರೂ ಮತ್ತೆ ಅದೇ ಕಷ್ಟಕ್ಕೆ ಸಿಲುಕಿದ ಪವಿತ್ರ: ತಂದೆಯಂತೆ ಆಗಬಾರದು ಎಂದುಕೊಂಡಿದ್ದರೆ ಕೊನೆಗೆ ಆಗಿದ್ದೇನು ಗೊತ್ತೇ?

ವೃಷಭ ರಾಶಿ:

ಈ ರಾಶಿ ಮಾ.5 ನಂತರ ಆರ್ಥಿಕವಾಗಿ ಬಹಳ ಲಾಭವನ್ನು ಕಾಣುತ್ತಾರೆ. ಆಕಸ್ಮಿಕ ಧನಾಗಮನವಾಗುವ ಸೂಚನೆಯಿದೆ. ಯಾರಾದರೂ ಹೊಸದಾಗಿ ಉದ್ಯೋಗಕ್ಕೆ ಸೇರಬೇಕು ಎಂದು ಪ್ರಯತ್ನಿಸುತ್ತಿದ್ದವರಿಗೆ ಅಥವಾ ಉದ್ಯೋಗದಲ್ಲಿ ಬದಲಾವಣೆ ಮಾಡಬೇಕು ಎಂದುಕೊಂಡವರಿಗೆ ಇದು ಸೂಕ್ತ ಕಾಲವಾಗಿದೆ.

ಸಿಂಹ ರಾಶಿ:

ಶನಿಶ್ಚರನ ಉದಯದಿಂದ ಸಿಂಹ ರಾಶಿಯವರಿಗೆ ಲಾಭದಾಯಕವಾಗಲಿದೆ.  ಸಿಂಹ ರಾಶಿಯವರಿಗೆ ಇನ್ನು ಮುಂದೆ ಒಳ್ಳೆಯ ದಿನಗಳು ಕಾದಿವೆ. ನೀವು ಇಷ್ಟು ದಿನ ಯಾವ ಕೆಲಸ ಮಾಡಬೇಕೆಂದು ಕಾದು ಕುಳಿತಿದ್ದರೋ ಆ ಕೆಲಸ ಮಾಡಲು ಇದು ಸುಸಮಯವಾಗಿದೆ. ಅಲ್ಲದೆ ಕೆಲಸವು ಸಹ ಯಾವುದೇ ಸಮಸ್ಯೆ ಇಲ್ಲದೆ ಮುಗಿಯುತ್ತದೆ. 

ಕುಂಭ ರಾಶಿ: ಈ ರಾಶಿಯವರಿಗೆ ಶನೀಶ್ಚರನ ಉದಯವು ಬಹಳ ಧನಾತ್ಮಕ ಫಲಿತಾಂಶಗಳನ್ನು ನೀಡಲಿದೆ. ನೀವು ನಿಮ್ಮ ಕಚೇರಿಯಲ್ಲಿ ನಿಮ್ಮ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಯ ಮಾತುಗಳನ್ನು ಕೇಳುತ್ತೀರಿ. ಅಲ್ಲದೆ ನಿಮ್ಮ ಜೀವನದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಇದರ ಜೊತೆಗೆ ನಿಮ್ಮ ಸಂಗಾತಿಯೊಡನೆ ನಿಮ್ಮ ಸಂಬಂಧವು ಇನ್ನಷ್ಟು ಗಟ್ಟಿಯಾಗಲಿದೆ. ಅವರ ಜೊತೆ ಒಳ್ಳೆಯ ಸಮಯ ಕಳೆಯಲಿದ್ದೀರಿ.

Comments are closed.