ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನರ ಮೆಚ್ಚಿನ ಧಾರವಾಹಿ ಲಕ್ಷಣ. ಈ ದಾರವಾಹಿಯಲ್ಲಿ ಆರಂಭದಿಂದಲೂ ಹಲವಾರು ಟ್ವಿಸ್ಟ್ ಗಳನ್ನು ನೀಡುತ್ತಾ ಕಥೆಯಲ್ಲಿ ಹೊಸ ಹೊಸ ಅಂಶಗಳನ್ನು ತರಲಾಗುತ್ತಿದೆ. ಕುತೂಹಲವನ್ನು ಮೂಡಿಸಿದೆ ಲಕ್ಷಣ ಧಾರಾವಾಹಿ. ಇದೀಗ ಇನ್ನಷ್ಟು ತಿರುವುಗಳನ್ನ ಲಕ್ಷಣ ಧಾರಾವಾಹಿಯಲ್ಲಿ ನೋಡಬಹುದು. ಲಕ್ಷ್ಮಣ ಧಾರವಾಹಿಯಲ್ಲಿ ಶ್ವೇತ ಅವಳ ಶ್ವೇತ ವರ್ಣದ ಹಿಂದಿರುವ ಕಹಿ ಸತ್ಯ ಎಲ್ಲರಿಗೂ ಅರ್ಥವಾಗಿದೆ. ಹೆತ್ತ ತಾಯಿಯನ್ನೇ ಮಹಡಿಯಿಂದ ನೂಕಿ ಕೊಲ್ಲಲು ಪ್ರಯತ್ನಿಸಿದ್ದು, ಮಿಲಿಯಿಂದಾಗಿ ಸೃಷ್ಟಿ ಹಾಗು ನಕ್ಷತ್ರ ಇಬ್ಬರಿಗೂ ಗೊತ್ತಾಗಿದೆ. ಅಲ್ಲದೆ ತನ್ನ ಮಗಳ ಬುದ್ಧಿ ಹೇಗಿದೆ ಅಂತ ತಾಯಿ ಜಯಮ್ಮ ಅವರಿಗೂ ಅರಿವಾಗಿದೆ. ಈಗ ಶ್ವೇತಾಳಿಗೆ ಎಲ್ಲರೂ ಸೇರಿ ಹೇಗೆ ಬುದ್ಧಿ ಕಲಿಸುತ್ತಾರೆ ಎನ್ನುವುದೇ ಕುತೂಹಲ. ಆದರೆ ಈ ನಡುವೆ ಇನ್ನೊಂದು ಭಯಂಕರ ಟ್ವಿಸ್ಟ್ ವೇಸ್ಟ್ ನೀಡಲಾಗಿದೆ.
ಇದೀಗ ನಕ್ಷತ್ರ ಹಾಗೂ ಭೂಪತಿ ಜೋಡಿ ನಡುವೆ ಒಬ್ಬ ಆಗಂತು’ಕನ ಆಗಮನವಾಗಿದೆ. ಕುಲದೇವಿಯ ಪೂಜೆಗೆಂದು ಹೊರಟ ನಕ್ಷತ್ರ ಹಾಗೂ ಭೂಪತಿ ಒಂದೇ ಸಮನೆ ಬೇರೆ ಬೇರೆ ಯಾಗುತ್ತಾರೆ ಭೂಪತಿ ಸೇತುವೆಯ ಮೇಲೆ ಮಲಗಿದ್ದರೆ ನಕ್ಷತ್ರಾಳನ ಯಾರೋ ಮರಕ್ಕೆ ಕಟ್ಟುಹಾಕಿರುತ್ತಾರೆ. ಮತ್ತೊಮ್ಮೆ ನಕ್ಷತ್ರ ರಸ್ತೆಯಲ್ಲಿ ಮಲಗಿದ್ರೆ, ಕಾಣೆಯಾಗಿದ್ದ ಭೂಪತಿ ರೂಮ್ನಲ್ಲಿ ಕಾಣಿಸಿಕೊಳ್ಳುತ್ತಾನೆ. ಆದರೆ ಇದನ್ನೆಲ್ಲಾ ಮಾಡ್ತಾ ಇರೋದು ಯಾರು ಅನ್ನೋದು ಮಾತ್ರ ರಿವೀಲ್ ಮಾಡಿಲ್ಲ ಲಕ್ಷಣ ಧಾರಾವಾಹಿ ತಂಡ.
ಇನ್ನು ಈಗ ನಡೆಯುತ್ತಿರುವುದಕ್ಕೆಲ್ಲಾ ಕಾರಣ ತಾನೇ ಎಂದು ಭೂಪತಿ ಭಾವಿಸಿದ್ದಾನೆ ನಕ್ಷತ್ರಾಳಿಗೆ ತಾನು ತನಗೆ ಅರಿವಿಲ್ಲದ ಹಾಗೆ ತೊಂದರೆ ಕೊಡುತ್ತಿದ್ದೇನೆ ಅಂತ ಮನುಷ್ಯರ ಜೀವನ ಕೂಡ ಭೇಟಿ ಮಾಡಿ ಚಿಕಿತ್ಸೆ ಪಡೆದಿದ್ದರು. ಅಲ್ಲದೆ ನಕ್ಷತ್ರ ಅವಳಿಗೆ ತನ್ನಿಂದ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಭೂಪತಿ ಪೊಲೀಸರ ಬಳಿ ಸರಂಡರ್ ಆಗಲು ಕೂಡ ಮುಂದಾಗಿದ್ದ. ಆದರೆ ಅದೃಷ್ಟವಶಾತ್ ನಕ್ಷತ್ರ ಭೂಪತಿಯನ್ನು ಮನೆಗೆ ಹಿಂತಿರುಗಿ ಕರೆದುಕೊಂಡು ಬಂದಿದ್ದಾಳೆ. ಆದರೂ ಇದೀಗ ಭೂಪತಿ ನಿದ್ರೆ ಮಾತ್ರೆಯನ್ನು ಕೂಡ ನುಂಗಿದ್ದಾನೆ.
ಇನ್ನು ಇಷ್ಟೆಲ್ಲ ಮಾಡಿಸುತ್ತಿರೋ ವ್ಯಕ್ತಿ ಯಾರು ಅಂತ ತಿಳಿದುಕೊಳ್ಳುವ ಕುತೂಹಲ ವೀಕ್ಷಕರಿಗೆ ಇದೆ. ಇದೀಗ ಆ’ಗಂ’ತುಕ ಭೂಪತಿಯ ಮನೆಯ ಎದುರು ಪ್ರತ್ಯಕ್ಷನಾಗಿದ್ದಾನೆ. ಇಷ್ಟೆಲ್ಲ ಮಾಡಿಸುತ್ತಿರುವುದು ಕೆಲವು ದಿನಗಳಿಂದ ಭೂಪತಿ ಮನೆಯಿಂದ ಕಾಣೆಯಾದ ಮುನ್ನ ಅಥವಾ ಭೂಪತಿಯ ಸಹೋದರ ಮೌರ್ಯ ಇರಬಹುದು ಅಂತ ಜನ ಊಹಿಸುತ್ತಿದ್ದಾರೆ. ಆದರೆ ನಿಜವಾಗಿ ಇಷ್ಟೆಲ್ಲ ಮಾಡಿಸ್ತಾ ಇರೋದು ಯಾರು ಅನ್ನೋದು ಲಕ್ಷಣದ ಪ್ರತಿ ಎಪಿಸೋಡ್ ನೀವು ತಪ್ಪದೆ ನೋಡಿದ್ರೆ ನಿಮಗೆ ಗೊತ್ತಾಗುತ್ತೆ.
ಭೂಪತಿಯಾಗಿ ಜಗನ್ನಾಥ್ ಚಂದ್ರಶೇಖರ್ ನಕ್ಷತ್ರ ಅಳೋ ಪಾತ್ರದಲ್ಲಿ ವಿಜಯಲಕ್ಷ್ಮಿ ಹಾಗೂ ಸುಕೃತಾ ನಾಗ ಶ್ವೇತಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಲಕ್ಷಣ ಧಾರಾವಾಹಿ, ಜಗನ್ನಾಥ್ ಚಂದ್ರಶೇಖರ್ ಅವರ ನಟನೆ ಹಾಗೂ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಧಾರಾವಾಹಿ.