kannada astrology:ಹೊಸ ವರ್ಷ ಆರಂಭವಾದರೂ ಈ ರಾಶಿಯವರಿಗೆ ಮಾತ್ರ ಶನಿ ಕಾಟ ತಪ್ಪಿದ್ದಲ್ಲ, ಎಚ್ಚರಿಕೆಯಿಂದ ಇರಿ; ಯಾವ ರಾಶಿಯವರಿಗೆ ಗೊತ್ತಾ?
kannada astrology; ಶನಿ ಗ್ರಹದ ಕಾಟ ಅಥವಾ ಸಾಡೇ ಸಾಥ್ ಶುರುವಾದರೆ ಏಳು ವರ್ಷ ಶನಿಯ ಪ್ರಭಾವ ನಮ್ಮ ಮೇಲೆ ಇರುತ್ತೆ ಎಂದು ಹೇಳಲಾಗುತ್ತೆ. ಇನ್ನು ಶನಿಯ ಪ್ರಭಾವ ಎಲ್ಲಾ ರಾಶಿಗಳ ಮೇಲೆ ಒಂದೇ ರೀತಿಯಾಗಿ ಇರುವುದಿಲ್ಲ. ಒಟ್ಟಿಗೆ ಏಳು ವರ್ಷ ಶನಿ ಕಾಡುವುದಿಲ್ಲ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಶನಿ ಗ್ರಹ ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ತನ್ನ ಪಥ ಬದಲಾಯಿಸುತ್ತದೆ. ಶನಿದೇವ ಹೊಸವರ್ಷದ ಜನವರಿ ತಿಂಗಳಿನಲ್ಲಿ ಧನು ರಾಶಿಯಿಂದ ಕುಂಭರಾಶಿಯನ್ನು ಪ್ರವೇಶ ಮಾಡುವುದರಿಂದ ಧನಸ್ಸು ರಾಶಿಯವರಿಗೆ ಶನಿಯ ಕಾಟದಿಂದ ಮುಕ್ತಿ. ಆದರೆ ಶನಿಯ ಪ್ರಭಾವ ಇನ್ನೂ ಮೂರು ರಾಶಿಗಳ ಮೇಲೆ ಇದ್ದೇ ಇರುತ್ತದೆ. ಜನವರಿ 17 2023ರ ಸಂಜೆ 5:4 ನಿಮಿಷಕ್ಕೆ ಶನಿಯು ಕುಂಭರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯ ಪ್ರಭಾವ ಇದ್ದರೆ ಅಂತಹ ವ್ಯಕ್ತಿ ಯಾವುದೇ ಕೆಲಸ ಮಾಡಿದರು ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಆದರೆ ಜಾತಕದ ಪಾದ ಬದಲಾವಣೆಯ ಮೇಲೆ ಶನಿ ಕೇವಲ ಕೆಟ್ಟ ಪ್ರಭಾವ ಮಾತ್ರವಲ್ಲ, ಉತ್ತಮ ದೃಷ್ಟಿಯನ್ನೂ ಹರಿಸುತ್ತಾನೆ. ಇದನ್ನೂ ಓದಿ: Business Ideas: ನಿಮ್ಮ ಬಳಿ ಸಾವಿರ ರೂಪಾಯಿ ಇದ್ಯಾ? ಈ ಬ್ಯುಸನೆಸ್ ಮಾಡಿದ್ರೆ ಸಾಕು ತಿಂಗಳಿಗೆ 30ಸಾವಿರ ರೂಪಾಯಿ ಆದಾಯ ಫಿಕ್ಸ್!
ಆದರೆ ಈ ಮೂರು ರಾಶಿಯವರ ಮೇಲೆ ಮಾತ್ರ ಈ ವರ್ಷ ಅಷ್ಟು ಉತ್ತಮ ಫಲ ನೀಡುವುದಿಲ್ಲ ಎಂದು ಹೇಳಬಹುದು. ಯಾವ ರಾಶಿಗಳು ನೋಡೋಣ. ಇದನ್ನೂ ಓದಿ:Job Tips: ಪದೇ ಪದೇ ಕೆಲಸ ಬದಲಾಯಿಸುವುದರಲ್ಲಿಯೂ ಇದೆ ಬೆನಿಫೀಟ್; ಏನು ಗೊತ್ತಾ?
ಮಕರ ರಾಶಿ (Capricorn);
ಈ ರಾಶಿಯವರ ಎರಡನೇ ಮನೆಯಲ್ಲಿ ಶನಿಯ ಸಂಚಾರ. ಹಾಗಾಗಿ , ಸಾಡೇ ಸಾತಿಯ ಎರಡನೇ ಹಂತ ಮುಗಿದು, ಮೂರನೇ ಹಂತ ಈ ರಾಶಿಯಲ್ಲಿ ಆರಂಭವಾಗುತ್ತದೆ. ಇದು ಕೊನೆಯ ಹಂತವಾಗಿದ್ದರಿಂದ ಈ ವರ್ಷ ಮಿಶ್ರ ಫಲಿತಾಂಶ ಸಿಗಲಿದೆ ಎನ್ನಬಹುದು. ವರ್ಷವಿಡಿ ಶನಿಯ ಕಾಟ ಇರುವುದಿಲ್ಲ. ಶನಿ ದೋಷ ಪರಿಹಾರ ಮಾಡಿಕೊಳ್ಳಿ. ಒಳ್ಳೆಯದೇ ಆಗುತ್ತದೆ.
ಕುಂಭ ರಾಶಿ (Aquarius):
ಈ ರಾಶಿಯವರಿಗೆ ಸಾಡೇ ಸಾತಿಯ ಮೊದಲ ಹಂತ ಮುಗಿದು ಎರಡನೇ ಹಂತ ಆರಂಭವಾಗುತ್ತದೆ. ಹಾಗಾಗಿ ತುಸು ಜಾಸ್ತಿಯೇ ಕೆಲಸ ಕಾರ್ಯಗಳಲ್ಲಿ ಅಡೆ -ತಡೆಗಳು ಉಂಟಾಗಬಹುದು. ಈ ಸಮಯದಲ್ಲಿ ನೀವು ಯಾವುದೇ ಕೆಲಸವನ್ನು ಹೆಚ್ಚು ಪ್ರತಿಫಲ ಇಟ್ಟುಕೊಳ್ಳದೇ ಮಾಡುವುದು ಉತ್ತಮ. ಪ್ರಯತ್ನ ನಮ್ಮದು ಫಲ ದೇವರು ಕೊಡುತ್ತಾನೆ ಎಂದುಕೊಂಡೆ ಕೆಲಸ ಮಾಡಿದರೆ ಉತ್ತಮ ಫಲ ದೊರೆಯುತ್ತದೆ. ಇದನ್ನೂ ಓದಿ: RCB IPL 2023:
ಮೀನ ರಾಶಿ (Pisces);
ಮೀನ ರಾಶಿಯವರಿಗೆ ಸಾಡೇ ಸಾತಿಯ ಮೊದಲ ಹಂತ ಆರಂಭವಾಗಲಿದೆ. ಹಾಗಾಗಿ ಎಲ್ಲಾ ಕೆಲಸಗಳಲ್ಲೂ ಸಮಸ್ಯೆ ಅನುಭವಿಸಬೇಕಾಗುತ್ತದೆ. ಆರೋಗ್ಯ , ಹಣಕಾಸು ಹೀಗೆ ಎಲ್ಲಾ ವಿಚಾರದಲ್ಲಿ ಒಂದಲ್ಲಾ ಒಂದು ಸಮಸ್ಯೆ ಇದ್ದಿದ್ದೇ. ಸ್ವಲ್ಪ ಜಾಗರೂಕತೆಯಿಂದ ನಿರ್ಧಾರ ತೆಗೆದುಕೊಳ್ಳಿ. ಇದನ್ನೂ ಓದಿ:Kannada Bigg Boss Season 9: ವಾರಾಂತ್ಯದ ಬಿಗ್ ಎಲಿಮಿನೇಷನ್ಸ್; ಅಮೂಲ್ಯ ಜೊತೆಗೆ ಅರುಣ್ ಸಾಗರ್ ಕೂಡ ಮನೆಗೆ; ಅರುಣ್ ಔಟ್ ಆಗೋದಕ್ಕೆ ಅಸಲಿ ಕಾರಣ ವೋಟಿಂಗ್ ಅಲ್ವಂತೆ ನೋಡಿ!?
ಇನ್ನು ಶನಿ ಗ್ರಹದ ಬದಲಾವಣೆ ಕೆಲವು ರಾಶಿಗೆ ಒಳ್ಳೆಯದನ್ನು ಮಾಡಲಿದೆ. ಶನಿ, ಧನಸ್ಸು ರಾಶಿಯಿಂದ ಕುಂಭ ರಾಶಿ ಪ್ರವೇಶ ಮಾಡುವುದರಿಂದ ಧನಸ್ಸು, ಮಿಥುನ ಹಾಗೂ ತುಲಾ ರಾಶಿಯವರಿಗೆ ಸಾಡೇ ಸಾತಿನಿಂದ ಹೊಸ ವರ್ಷ ಮುಕ್ತಿ ಸಿಗುತ್ತದೆ. ಹಾಗೆಯೇ ಮಕರ, ಕುಂಭ, ಮೀನದ ಜೊತೆಗೆ ಕಟಕ ಹಾಗೂ ವೃಶ್ಚಿಕ ರಾಶಿಗೆ ಸಾಡೇ ಸಾತ್ ಆರಂಭವಾಗುತ್ತದೆ. ಆದಷ್ಟು ದೇವರ ಧ್ಯಾನ, ದಾನ ಧರ್ಮಗಳಿಂದ ಶನಿಯ ದೋಷವನ್ನ ಕಡಿಮೆಮಾಡಿಕೊಳ್ಳಬಹುದು ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.
Comments are closed.