Kannada Serial: ಲಕ್ಷ್ಮೀ ಬಾರಮ್ಮ ಧಾರವಾಹಿಯ ಪ್ರೇಕ್ಷಕರಿಗೆ ಸರ್ಪ್ರೈಸ್! ಕೀರ್ತಿ ಪಾತ್ರ ಮುಗಿಯುತ್ತ? ಏನಿದೆ ನಿಜವಾದ ರಹಸ್ಯ.

Kannada Serial: ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಈಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕಂಡುಬರುತ್ತಿದೆ. ಈಗ ಕೀರ್ತಿಯ ಹುಡುಗ ವೈಷ್ಣವ್ ಆಕೆಯ ಅಂತ್ಯ ಸಂಸ್ಕಾರವನ್ನು ಮಾಡಿರುವುದು ಪ್ರೋಮೊದಲ್ಲಿ ಕಂಡು ಬಂದಿದೆ.

ಕಾರುಣ್ಯ ಗೆ ನಿಮ್ಮ ಮಗಳನ್ನು ಕರೆದುಕೊಂಡು ಬರ್ತೀನಿ ಅನ್ನೋದಾಗಿ ಮಾತು ನೀಡಿದ್ದ ಲಕ್ಷ್ಮಿ ಈಗ, ಕೀರ್ತಿಯ ಅಂತ್ಯ ಸಂಸ್ಕಾರವನ್ನು ಮಾಡುತ್ತಿದ್ದಾಳೆ. ಇಲ್ಲಿ ನಿಜಕ್ಕೂ ಹೇಳಬೇಕೆಂದರೆ ದುಷ್ಟ ಕಾವೇರಿಯ ಮೋಸಕ್ಕೆ ಕೀರ್ತಿ ಬಲಿಯಾಗಿದ್ದಾಳೆ ಅನ್ನಬಹುದು. ತನ್ನ ಮೋಸ ಯಾರಿಗೂ ಕೂಡ ತಿಳಿಯಬಾರದು ಎನ್ನುವುದಾಗಿ ಬೆಟ್ಟದಿಂದ ಕೀರ್ತಿಯನ್ನು ಕಾವೇರಿ ತಳ್ಳಿದ್ದಾಳೆ. ಇನ್ನು ಕೀರ್ತಿಯನ್ನು ಹುಡುಕೋದಕ್ಕೆ ಲಕ್ಷ್ಮಿಗೆ ಬೆಂಬಲವಾಗಿ ಕಶ್ಯಪ್ ಕುಟುಂಬ ಕೂಡ ನಿಂತಿತ್ತು. ಆದರೆ ಈಗ ಯಾವುದು ಕೂಡ ಪ್ರಯೋಜನಕ್ಕೆ ಬಂದಿಲ್ಲ ಅನ್ನೋದು ತಿಳಿದುಬಂದಿದೆ.

ಕೀರ್ತಿಯ ರೂಮಿನಲ್ಲಿದ್ದ ಅವಳ ಮೊಬೈಲ್ ಮೂಲಕ ಲಕ್ಷ್ಮಿ ಕಾವೇರಿಯ ಬಗ್ಗೆ ಪ್ರತಿಯೊಂದು ಮಾಹಿತಿಗಳನ್ನು ಕೂಡ ತಿಳಿದುಕೊಳ್ಳುತ್ತಾಳೆ ಎಂಬುದಾಗಿ ಕಾವೇರಿ ಭಾವಿಸಿದ್ದರು ಇದೇ ಕಾರಣಕ್ಕಾಗಿ ಆ ಮೊಬೈಲ್ ಅನ್ನು ತಂದು ಒಡೆದು ಹಾಕಿದ್ದಳು. ಈ ಸಂದರ್ಭದಲ್ಲಿ ಲಕ್ಷ್ಮಿ ಕೂಡ ಕಾವೇರಿ ಮೊಬೈಲ್ ತಗೊಂಡಿರೋದು ಅಂತ ಗೊತ್ತಿದ್ರೂ ಕೂಡ ಮೊಬೈಲ್ ತಗೊಂಡಿಲ್ಲ ಎನ್ನುವುದಾಗಿ ನಾಟಕ ಆಡ್ತಾಳೆ ಹಾಗೂ ಈ ಸಂದರ್ಭದಲ್ಲಿ ತನ್ನ ಅತ್ತೆ ಕಾವೇರಿ ಒಳ್ಳೆವಳಲ್ಲ ಎನ್ನುವಂತಹ ಸತ್ಯ ಕೂಡ ಲಕ್ಷ್ಮಿಗೆ ತಿಳಿಯುತ್ತದೆ. ಸಮಯ ಬಂದ್ರೆ ಯಾರಿಗೆ ಏನು ಬೇಕಾದರೂ ಕೂಡ ಕಾವೇರಿ ಮಾಡ್ತಾಳೆ ಅನ್ನೋ ಸತ್ಯ ಲಕ್ಷ್ಮಿಗೆ ಈ ಸಂದರ್ಭದಲ್ಲಿ ತಿಳಿಯುತ್ತದೆ. ಈಗಾಗಲೇ ಕೀರ್ತಿಯ ಪಾರ್ಟಿಯ ಶರೀರ ಕೂಡ ಸಿಕ್ಕಿದ್ದು ವೈಷ್ಣವ್ ಮುಂದೆ ನಿಂತು ಅಂತಿಮ ಸಂಸ್ಕಾರವನ್ನು ಮಾಡಿ ಮುಗಿಸಿದ್ದಾನೆ. ತನ್ನ ಗಂಡ ನನಗೆ ಸಿಕ್ಕಿದ್ದಾನೆ ಎನ್ನುವುದಾಗಿ ಲಕ್ಷ್ಮಿ ಭಾವಿಸಿದ್ದು ಖಂಡಿತವಾಗಿ ಕೀರ್ತಿಗೆ ನಾನು ನ್ಯಾಯವನ್ನು ಒದಗಿಸಿಯೇ ಒದಗಿಸುತ್ತೇನೆ ಎಂಬುದಾಗಿ ಶಪಥ ಮಾಡಿದ್ದಾಳೆ.

ಹೀಗಿದ್ರು ಕೂಡ ಪ್ರೇಕ್ಷಕರು ಕೀರ್ತಿ ಮತ್ತೆ ಬದುಕಿ ಬರುತ್ತಾಳೆ ಎನ್ನುವಂತಹ ಎಪಿಸೋಡ್ ಅನ್ನು ಮುಂದಿನ ದಿನಗಳಲ್ಲಿ ನಾವು ನೋಡಬಹುದು ಎನ್ನುವಂತಹ ಆಸೆಯನ್ನು ಹೊಂದಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ. ಕೆಲವು ದಿನಗಳಲ್ಲಿ ಕಾವೇರಿಯ ಮೋಸವನ್ನು ಎಲ್ಲರಿಗೆ ಲಕ್ಷ್ಮಿ ತಿಳಿಸಿದ ನಂತರ ಕೀರ್ತಿ ಮತ್ತೆ ಬದುಕಿ ಬರುತ್ತಾಳೆ ಎನ್ನುವಂತಹ ನಿರೀಕ್ಷೆ ಪ್ರೇಕ್ಷಕರಲ್ಲಿದೆ. ಮುಂದಿನ ದಿನಗಳಲ್ಲಿ ಈ ಧಾರವಾಹಿಯ ಟ್ವಿಸ್ಟ್ ಹಾಗೂ ಟರ್ನ್ ಗಳು ಯಾವ ರೀತಿಯಲ್ಲಿ ಬದಲಾವಣೆಯಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Comments are closed.