Sandalwood: ಮದುವೆ ಆಗ್ದೆನೇ ಬಹಳ ಸಂತೋಷವಾಗಿದಿನಿ; ಮತ್ತೆ ಮದ್ವೆ ಮಾಡ್ಕೊಳ್ಳೊದು ಯಾಕೆ; ಮೋಹಕ ತಾರೆ ಸ್ಟಾಂಗ್ ಡಿಸಿಶನ್?!

Sandalwood: ಸ್ಯಾಂಡಲ್ ವುಡ್ ನಲ್ಲಿ ಹಲವು ನಾಯಕ ನಟಿಯರು ಆಳಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಲಿಲಾವತಿ, ಭಾರತಿ, ಆರತಿ, ಜಯಂತಿ, ಸುಧಾರಾಣಿ, ಮಾಲಾಶ್ರೀ, ಪ್ರೇಮ ರಾಧಿಕಾ, ರಕ್ಷಿತಾ, ರಾಧಿಕಾ ಪಂಡಿತ್, ರಚಿತಾರಾಮ್ ಹೀಗೆ ಹಲವು ನಟಿಯರು ದಶಕಗಳ ಕಾಲ ಕನ್ನಡ ಸಿನೆಮಾ ರಂಗದಲ್ಲಿ ಕೆಲಸ ಮಾಡಿ ಜನರಿಗೆ ಮನರಂಜನೆ ನೀಡಿದ್ದಾರೆ. ಜನರ ಪ್ರೀತಿ ಗಳಿಸಿದ್ದಾರೆ. ಹೀಗೆ ಜನಪ್ರೀತಿ ಗಳಿಸಿದ ನಟಿಯರಲ್ಲಿ ಮೋಹಕತಾರೆ ರಮ್ಯ ಕೂಡ ಒಬ್ಬರು. ಇವರು ಸಿನೆಮಾ ರಂಗದಿಂದ ದೂರವಾಗಿ 10 ವರ್ಷ ಕಳೆದರೂ ಅವರ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ.

JYO 1 | Live Kannada News
Sandalwood: ಮದುವೆ ಆಗ್ದೆನೇ ಬಹಳ ಸಂತೋಷವಾಗಿದಿನಿ; ಮತ್ತೆ ಮದ್ವೆ ಮಾಡ್ಕೊಳ್ಳೊದು ಯಾಕೆ; ಮೋಹಕ ತಾರೆ ಸ್ಟಾಂಗ್ ಡಿಸಿಶನ್?! https://sihikahinews.com/kannada-actress-ramya-talk-about-her-marriage/

ಮೋಹಕ ತಾರೆ ರಮ್ಯ (Ramya) ಎಂದರೆ ಅಭಿಮಾನಿಗಳಿಗೆ ಒಂದು ರೀತಿಯ ಹುಚ್ಚು ಪ್ರೀತಿ. ಅವರು ಚಿತ್ರರಂಗದಲ್ಲಿದ್ದರೂ, ದೂರ ಇದ್ದರೂ ಅವರನ್ನು ಫಾಲೋ ಮಾಡುತ್ತಲೇ ಇರುತ್ತಾರೆ. ಈಗ ರಮ್ಯ ಅವರಿಗೆ ಎದುರಾಗಿರುವ ಸವಾಲು ಎಂದರೆ ಅದು ಮದುವೆ ವಿಚಾರ. ಹೌದು, ರಮ್ಯ ಅವರಿಗೆ ವಯಸ್ಸು ೩೫ ದಾಟಿದೆ. ಆದರೂ ಇದುವರೆಗೂ ವಿವಾಹವಾಗಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಮದುವೆಗೆ ತುಂಬಾನೇ ಆದ್ಯತೆ ನೀಡಲಾಗುತ್ತದೆ. ಜೀವನ (Life)ದ ಪ್ರಮುಖ ಘಟ್ಟ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಅಭಿಮಾನಿಗಳು ಸಹ ರಮ್ಯ ಅವರು ವಿವಾಹ ಆಗುತ್ತಾರಾ? ಆದರೆ ಯಾರನ್ನು ಆಗಬಹುದು ಎಂದು ಊಹಿಸುತ್ತಲೇ ಇರುತ್ತಾರೆ. ಆದರೆ ಅದು ಬರಿ ಕಲ್ಪನೆ ಆಗಿ ಉಳಿದಿದೆ. ಇದನ್ನೂ ಓದಿ: Bollywood Actresses: ಈ  ಜನಪ್ರಿಯ ನಟ ನಟಿಯರು ತಮ್ಮ ಮಕ್ಕಳಿಗೆ ದೇವರ ಹೆಸರನ್ನೇ ಇಟ್ಟಿದ್ದಾರೆ;  ಯಾರ್ಯಾರು ಗೊತ್ತಾ?

ಮೊನ್ನೆ ನಡೆದ ಕಾರ್ಯಕ್ರಮ (Programme) ವೊಂದರಲ್ಲಿ ರಮ್ಯ ಅವರು ಮದುವೆ ವಿಚಾರ ಪ್ರಸ್ತಾಪವಾದಾಗ ನಾನು ಮದುವೆ ಆಗಬೇಕಾ? ಎಂದು ಕೇಳಿದ್ದಾರೆ. ಆಗ ಅಭಿಮಾನಿಯೊಬ್ಬ ಆಗುವುದು ಬೇಡ ಎಂದು ಹೇಳಿದ್ದಾನೆ. ಈ ವೇಳೆ ಮಾತು ಮುಂದುವರಿಸಿದ ರಮ್ಯ ಅವರು ಮದುವೆ ಏಕೆ ಆಗಬೇಕು? ಸಂತೋಷವಾಗಿರಲು ತಾನೆ? ನಾನು ಹೀಗೆಯೇ ಸಂತೋಷವಾಗಿದ್ದೇನೆ. ನನಗೆ ಸಂತೋಷವಾಗಿರುವುದು ಮುಖ್ಯ. ನಾನು ಮದುವೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ಇಂದಿನ ದಿನದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗುವುದು ಬಹಳ ಮುಖ್ಯ. ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ತಮ್ಮ ಕಾಲಮೇಲೆ ತಾವು ನಿಂತುಕೊಳ್ಳಬೇಕು. ಮದುವೆ ಅವರವರ ವೈಯಕ್ತಿಕ ಆಯ್ಕೆ. ಯಾರೋ ಒಬ್ಬರ ಬಲವಂತಕ್ಕೆ ಮದುವೆ ಆಗುವುದು ಸರಿಯಲ್ಲ ಎಂದು ಹೇಳಿದ್ದಾರೆ.

ನನಗೆ ನನ್ನ ಸೋಲ್ ಮೇಟ್ ಎನ್ನುವ ತರಹದ ಹುಡುಗ ಸಿಕ್ಕಿಲ್ಲ. ಹಾಗಾಗಿ ಇನ್ನೂ ಮದುವೆ ಆಗಿಲ್ಲ. ಅಂತಹ ಹುಡುಗ ಸಿಕ್ಕರೆ ಖಂಡಿತಾ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ. ಚಿತ್ರವೊಂದರ ಚಿತ್ರೀಕರಣಕ್ಕಾಗಿ ಈ ಕಾಲೇಜಿಗೆ ಬಂದಿದ್ದೆ. ಆ ವೇಳೆ ಇಲ್ಲಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಇರಲಿಲ್ಲ. ಇಂದು ಬಹಳ ಅಭಿವೃದ್ಧಿಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Kannada Film: ಡಿಸೆಂಬರ್ 11ಕ್ಕೆ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ!? ನೀವೇ ಮದುವೆ ಮಾಡಿಸಿಬಿಡಿ ಎಂದು ಸುಮಲತಾ ಹೇಳಿದ್ಯಾಕೆ? ಯಾರಿಗೆ?

Comments are closed.