Kannada Bigg Boss: ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿ ಇವರೇ ನೋಡಿ? ಅತಿಯಾದ ಆತ್ಮವಿಶ್ವಾಸವೇ ಇವರಿಗೆ ಮುಳ್ಳಾಯ್ತಾ?

Kannada Bigg Boss: ಬಿಗ್ ಬಾಸ್ ಆರಂಭವಾಗಿ ಆಗಲೇ 9 ವಾರಗಳು ಮುಗಿದು ಹೋಗಿದೆ. ಇನ್ನು 5-6 ವಾರಗಳಲ್ಲಿ ಬಿಗ್ ಬಾಸ್ ಸೀಸನ್-9ಕ್ಕೂ ತೆರೆ ಬೀಳಲಿದೆ. ಈ ಬಾರಿ ಯಾರು ಕಪ್ ಎತ್ತಿ ಹಿಡಿಯಲಿದ್ದಾರೆ ಎಂದು ತಿಳಿಯಲಿದೆ. ಆ ಕುತೂಹಲ ಬಿಗ್ ಬಾಸ್ ವೀಕ್ಷಕರಲ್ಲಿ ಮನೆ ಮಾಡಿದೆ. ಬಿಗ್ ಬಾಸ್ ವಾರದಿಂದ ವಾರಕ್ಕೆ ರಂಗೇರುತ್ತಿದೆ. ಸ್ಪರ್ಧಿಗಳು ಸಹ ಹೇಗಾದರೂ ಮಾಡಿ ತಾವು ಉಳಿದುಕೊಳ್ಳಲೇ ಬೇಕು ಎಂಬ ಹಠಕ್ಕೆ ಬಿದ್ದವರಂತೆ ಆಡುತ್ತಿದ್ದಾರೆ. ಆದರೂ ವಾರದಲ್ಲಿ ಒಬ್ಬರು ಎಲಿಮಿನೇಟ್ ಆಗಲೇಬೇಕು. ಈ ವಾರ ಬಿಗ್ ಬಾಸ್ ಆಟದಿಂದ ಹಾಸ್ಯ ಕಲಾವಿದ ವಿನೋದ್ ಗೊಬ್ಬರಗಾಲ ಅವರು ಔಟ್ ಆಗಿದ್ದಾರೆ.

JYO 1 | Live Kannada News
Kannada Bigg Boss: ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿ ಇವರೇ ನೋಡಿ? ಅತಿಯಾದ ಆತ್ಮವಿಶ್ವಾಸವೇ ಇವರಿಗೆ ಮುಳ್ಳಾಯ್ತಾ? https://sihikahinews.com/kannada-bigg-boss-season-9-vinod-gobbaragala-out/

ಈ ವಾರ ಬಿಗ್ ಬಾಸ್ ಕಾಡಿನ ಟಾಸ್ಕ್ (task) ನೀಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಕಾಡಿನ ಸೆಟ್ ಹಾಕಲಾಗಿತ್ತು. ಎಲ್ಲರಿಗೂ ಬೇರೆಯ ಉಡುಪುಗಳನ್ನು ನೀಡಿದ್ದರು. ಮೊದಲು ಯಾವುದೇ ಸೌಕರ್ಯ ನೀಡಿರಲಿಲ್ಲ. ಸೌಕರ್ಯ (Facility) ಪಡೆಯಲು ಸ್ಪರ್ಧಿಗಳು ಆಟ ಆಡಬೇಕಿತ್ತು. ಆದರೆ ಸ್ಪರ್ಧಿಗಳು ಮೊದಲನೇ ದಿನಕ್ಕೆ ಬಸವಳಿದಂತೆ ಕಂಡುಬಂದರು. ಇದನ್ನು ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲೂ ಪ್ರಸ್ತಾಪವಾಯಿತು. ಕಿಚ್ಚ ಸುದೀಪ್ ಅವರು ಪ್ರತಿಯೊಬ್ಬರು ಮೊದಲನೇ ದಿನವೇ ಬಸವಳಿದಂತೆ ಕಾಣುತ್ತೀದ್ದೀರಿ? ಯಾಕೆ ಎಂದು ಪ್ರಶ್ನೆ ಮಾಡಿದ ವೇಳೆ ಒಬ್ಬೊಬ್ಬ ಸ್ಪರ್ಧಿಗಳು ಒಂದೊಂದು ಉತ್ತರ ಕೊಟ್ಟರು. ಎಲ್ಲರ ಉತ್ತರದಲ್ಲೂ ಊಟ ಸರಿಯಾಗಿ ಸಿಕ್ಕಿಲ್ಲ ಎನ್ನುವುದು ಕಾಮನ್ ಆಗಿತ್ತು. ಈ ವಾರ ಕ್ಯಾಪ್ಟನ್ ಇರದ ಕಾರಣ ಬಿಗ್ ಬಾಸ್ ಎಲ್ಲರನ್ನು ನಾಮಿನೇಟ್ ಮಾಡಿದ್ದರು. ಹಾಗಾಗಿ ಪ್ರತಿಯೊಬ್ಬರೂ ಚಿಂತೆಯಲ್ಲಿ ಇದ್ದಿದ್ದು ಸುಳ್ಳಲ್ಲ. ಇದನ್ನೂ ಓದಿ: Rishi Sunak: ಇಂಗ್ಲೆಂಡ್ ಪ್ರಧಾನಿ ಮಗಳ ಕುಚಿಪುಡಿ ನೃತ್ಯಕ್ಕೆ ಬೆರಗಾದ ವಿಶ್ವ; ವಿದೇಶದಲ್ಲೂ ಭಾರತೀಯ ಸಂಸ್ಕೃತಿ ಎತ್ತಿಹಿಡಿದ ’ಮೂರ್ತಿ’ ಮೊಮ್ಮಗಳು!

ಈ ವಾರದ ಎಲಿಮಿನೇಶನ್ (Elimination) ಪ್ರಕ್ರಿಯೆ ಮುಗಿದಿದ್ದು, ಹಾಸ್ಯ ನಟ ವಿನೋದ್ ಗೊಬ್ಬರಗಾಲ (Vinod gobbaragala) ಹೊರಬಿದ್ದಿದ್ದಾರೆ. ವಿನೋದ್ ಅವರು ಮಜಾಭಾರತ ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದರು. ಕಳೆದ ಬಾರಿ ಮಂಜು ಪಾವಗಡ ಅವರು ಈ ಕಾರ್ಯಕ್ರಮದ ಮೂಲಕವೇ ಬಿಗ್ ಬಾಸ್ ಮನೆ ಪ್ರವೇಶ ಮಾಡಿ ಗೆಲುವು ಕಂಡಿದ್ದರು. ಅದೇ ರೀತಿ ವಿನೋದ್ ಗೊಬ್ಬರಗಾಲ ಅವರು ಫೈನಲ್ ತಲುಪಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ವಿನೋದ್ ಅವರು ಮನೆಯಲ್ಲೂ ಯಾರ ವಿರೋಧವನ್ನು ಕಟ್ಟಿಕೊಂಡಿರಲಿಲ್ಲ. ಎಲ್ಲರ ಜೊತೆ ಹೊಂದಿಕೊಂಡು ಹೋಗಿದ್ದರು.

‘ನಾನು ತುಂಬಾ ಎಕ್ಟಿವ್ ಆಗಿದ್ದೇನೆ. ಎಲ್ಲರ ಜೊತೆ ಲವಲವಿಕೆಯಿಂದ ಇರುತ್ತೇನೆ. ಹಾಗಾಗಿ ನಾನು ಎಲಿಮಿನೇಟ್ ಆಗಲು ಸಾಧ್ಯವಿಲ್ಲ’ ಎನ್ನುವ ಅವರ ಅತಿಯಾದ ಆತ್ಮವಿಶ್ವಾಸವೇ ಅವರು ಮನೆಯಿಂದ ಹೊರಬೀಳಲು ಕಾರಣವಾಯಿತೇ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಈ ವಾರದ ಟಾಸ್ಕ ನಲ್ಲಿ ವಿನೋದ್ ಗೊಬ್ಬರಗಾಲ ಬಿಗ್ ಬಾಸ್ ನೀಡಿದ ನಿಯಮಗಳನ್ನು ಮೀರಿ ಆಟ ಆಡಿದ್ದರು. ಆದರೂ ತಪ್ಪನ್ನು ಬೇರೆಯವರ ಮೇಲೆ ಹಾಕಿದ್ದರು. ತಾವು ತಪ್ಪು ಮಾಡೇ ಇಲ್ಲ ಎಂದು ವಾದಿಸಿದ್ದರು. ಈ ಕುರಿತಾಗಿ ಕಿಚ್ಚ ಸುದೀಪ್ ಅವರು ಕೂಡ ವಿನೋದ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದನ್ನು ಇಲ್ಲಿ ನಾವು ಸ್ಮರಿಸಿಕೊಳ್ಳಬಹುದು. ಇದನ್ನೂ ಓದಿ: Tollywood News: ಹ್ಯಾಂಡ್ ಸಮ್ ಹಂಕ್ ಮಹೇಶ್ ಬಾಬು ಅವರ ಸುಂದರವಾದ ಕೂದಲು ರಿಯಲ್ ಅಲ್ವಂತೆ; ಹಾಗಂತ ರಹಸ್ಯ ಬಯಲು ಮಾಡಿದ್ದು ಯಾರು ಗೊತ್ತಾ?  

Comments are closed.