Kannada Film: ಶೂಟಿಂಗ್ ಕರೆದು ನನ್ನನ್ನು ರೇಡ್ ಆಗಿರುವ ಹೋಟೆಲ್ ನಲ್ಲಿ ಇರಿಸಿದ್ರು.. ಅವತ್ತು ವಿಷ್ಣು ಸರ್ ನನ್ನನ್ನ ಎಚ್ಚರಿಸದೆ ಇದ್ರೆ ನನ್ನ ಗತಿ ಏನಾಗುತ್ತಿತ್ತೋ ಏನೋ? ನಟಿ ಭಾವನ ಹೀಗೆ ಹೇಳಿದ್ಯಾಕೆ?

Kannada Film: ನಟಿ ಭಾವನ (Bhavana) ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಒಬ್ಬ ಅತ್ಯದ್ಭುತವಾದ ಅಭಿನೇತ್ರಿ ಅವರು. ಕನ್ನಡದಲಿ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಶ್ರೀನಗರ ಕಿಟ್ಟಿ (Shrinagara Kitti) ಜೊತೆಗೆ ಇಂತಿ ನಿನ್ನ ಪ್ರೀತಿಯ ಎನ್ನುವ ಸಿನಿಮಾದಲ್ಲಿ ವಿಭಿನ್ನ ಪಾತ್ರವನ್ನು ನಿಭಾಯಿಸಿ ಅತ್ಯುತ್ತಮ ನಟಿ ಎನಿಸಿಕೊಳ್ಳುತ್ತಾರೆ. ಅಲ್ಲಿಂದ ಮುಂದೆ ಅವರಿಗೆ ಹಲವು ಅವಹಾಶಗಳು ಹುಡುಕಿಕೊಂಡು ಬರುತ್ತವೆ. ನಟಿ ಭಾವನಾ ಸಿನಿಮಾ ಅಷ್ಟೇ ಅಲ್ಲದೇ ಇತ್ತೀಚಿಗೆ ಸಿನಿಮಾದ ಜೊತೆಗೆ ಧಾರವಾಹಿಗಳಲ್ಲಿಯೂ ಕೂಡ ಇವರು ಕಾಣಿಸಿಕೊಳ್ಳುತ್ತಿದ್ದಾರೆ.

JYO 1 | Live Kannada News
Kannada Film: ಶೂಟಿಂಗ್ ಕರೆದು ನನ್ನನ್ನು ರೇಡ್ ಆಗಿರುವ ಹೋಟೆಲ್ ನಲ್ಲಿ ಇರಿಸಿದ್ರು.. ಅವತ್ತು ವಿಷ್ಣು ಸರ್ ನನ್ನನ್ನ ಎಚ್ಚರಿಸದೆ ಇದ್ರೆ ನನ್ನ ಗತಿ ಏನಾಗುತ್ತಿತ್ತೋ ಏನೋ? ನಟಿ ಭಾವನ ಹೀಗೆ ಹೇಳಿದ್ಯಾಕೆ? https://sihikahinews.com/kannada-actress-bhavana-talk-about-vishnuvardhan/

ನಟಿ ಭಾವನಾ ಭರತನಾಟ್ಯ (Bharatanatyam) ಕಲಾವಿದೆ. ಸಾಕಷ್ಟು ಶೋಗಳನ್ನೂ ಕೂಡ ನೀಡಿದ್ದಾರೆ. ಸಂಪ್ರದಾಯಸ್ಥ (Traditional)  ಕುಟುಂಬದಿಂದ ಬಂದವರು ಭಾವನಾ. ಆದರೂ ಸಿನಿಮಾಗಳಲ್ಲಿ ವಿಭಿನ್ನ ಶೇಡ್ಸ್ ಇರುವ ಪಾತ್ರಗಳನ್ನು ನಿಭಾಯಿಸಿದ್ದಾರೆ. ಹೌದು, ಸಾಮಾನ್ಯ ಗೃಹಿಣಿಯಾಗಿ ಮಾತ್ರವಲ್ಲದೇ ಸಕ್ಕತ್ ಬೋಲ್ಡ್ (Bold) ಪಾತ್ರಗಳಲ್ಲಿಯೂ ಕೂಡ ಭಾವನಾ ಅವರ ಮನೋಜ್ಞ ಅಭಿನಯವನ್ನು ಮೆಚ್ಚಲೇಬೇಕು. ಇದನ್ನೂ ಓದಿ: Kannada Film: ನಿರ್ಮಾಪಕ ಉಮಾಪತಿ ಇನ್ನು ಹಳೆಯದನ್ನು ಮರೆತಿಲ್ಲವೇ? ದರ್ಶನ್ ಗೆ ಉಮಾಪತಿಯಿಂದ ಮತ್ತೊಂದು ಶಾಕ್, ಹೀಗೆ ಮಾಡಬಾರದಿತ್ತು ಎನ್ನುತ್ತಿದೆ ಗಾಂಧಿನಗರ!

ಸಿನಿಮಾ ಅಂದಮೇಲೆ ಅಲ್ಲಿ ಏಳುಬೀಳುಗಳು ಸಾಮಾನ್ಯ. ಈ ಎಲ್ಲವನ್ನೂ ಭಾವನಾ ಕೂಡ ಫೇಸ್ ಮಾಡಿದ್ದಾರೆ. ಸಿನಿಮಾದಲ್ಲಿ ವರ್ಕ್ ಮಾಡುವಾಗ ತನ್ನ ಅಭಿನಯದ ಪಾರ್ಟ್ ಆದ ಮೇಲೆ ಮತ್ತೆ ಎಲ್ಲರ ಜೊತೆ ಸಾಮಾನ್ಯರಂತೆ ಇರುತ್ತಿದ್ದರು ಭಾವನಾ. ಇವರ ಈ ಸರಳತೆಯನ್ನು ದುರುಪಯೋಗಪಡಿಸಿಕೊಂಡವರೂ ಇದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸಂದರ್ಶನವೊಂದರಲ್ಲಿ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:Kannada Bigg Boss: ಬಿಗ್ ಬಾಸ್ ಈ ಸ್ಪರ್ಧಿಯ ಪರ ನಿಂತ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್; ಯಾವ ಸ್ಪರ್ಧಿಗೆ ಸಿಕ್ಕಿದೆ ಗೊತ್ತಾ ದಿವ್ಯಾ ಅವರ ಸಪೋರ್ಟ್?

’ನಾನು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದೇನೆ. ಒಮ್ಮೆ ಜಾಹೀರಾತುವಿನಲ್ಲಿ ನಟಿಸಲು ಕರೆದು ರೇಡ್ ಆಗಿರುವ ಹೋಟೆಲ್ ನಲ್ಲಿ ನನ್ನನ್ನ ಉಳಿಸಿಕೊಂಡಿದ್ದರು. ಇದು ನಿಜಕ್ಕೂ ಕಷ್ಟವಾಗುತ್ತಿತ್ತು. ಆದರೆ ಈ ಸಮಯದಲ್ಲಿ ನನಗೆ ಸಹಾಯಕ್ಕೆ ಬಂದಿದ್ದು ವಿಷ್ಣು (Vishnuvardhan) ಸರ್ ಅವರ ಮಾತು. ’ನೀನು ಒಬ್ಬಳು ಹುಡುಗಿ. ಹಾಗಾಗಿ ಕೆಲವು ವಿಚಾರಗಳಲ್ಲಿ ಹುಷಾರಾಗಿ ಇರಬೇಕು. ನನಗೆ ಹೀಗೆ ಆಗಬೇಕು ಎಂದು ಹೇಳಬೇಕು. ಇಲ್ಲವಾದರೆ ಸಮಸ್ಯೆ ಆಗುತ್ತದೆ. ಒಂದು ಹೆಣ್ಣು ಎಂತವಳು ಎನ್ನುವುದನ್ನು ಯಾರೂ ನೋಡುವುದಿಲ್ಲ. ಅವಳು ಆಚೆ ಬರುವಾಗ ಎಲ್ಲಿಂದ ಬರುತ್ತಾಳೆ ಎನ್ನುವುದನ್ನು ನೋಡುತ್ತಾರೆ’. ಈ ಮಾತು ನನಗೆ ಈಗಲೂ ನೆನಪಿದೆ. ನಾನು ಯಾವತ್ತೂ ಆ ಸಾಲುಗಳನ್ನು ಮರೆಯಲು ಸಾಧ್ಯವೇ ಇಲ್ಲ. ನನಗೆ ಬಹಳ ಹೆಲ್ಪ್ (Help) ಆಗಿದೆ ವಿಷ್ಣು ಸರ್ ನೀಡಿದ ಮಾರ್ಗದರ್ಶನದಿಂದ ಎಂದು ನಟಿ ಭಾವನಾ ಮನಬಿಚ್ಚಿ ಮಾತನಾಡಿದ್ಡಾರೆ.

Comments are closed.