Navaratri 2023: ಮಂಗಳವಾರದ ದಿನ ಇದೊಂದು ಪುಟ್ಟ ಕೆಲಸ ಮಾಡ್ ಸಾಕು; ಬೇಡ ಬೇಡ ಅಂದ್ರೂ ಆ ಜಗನ್ಮಾತೆ ನಿಮ್ಮನ್ನೇ  ಅನುಗೃಹಿಸುತ್ತಾಳೆ, ಅಷ್ಟೈಶ್ವರ್ಯ ನೀಡುತ್ತಾಳೆ!

Navaratri 2023: ವಾರದಲ್ಲಿ ಇರುವ ಏಳು ದಿನಗಳಿಗೆ ತನ್ನದೇ ಆದ ಮಹತ್ವವಿದೆ. ಅದರಲ್ಲಿಯೂ ಮಂಗಳವಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮಂಗಳವಾರ ಬಜರಂಗಬಲಿ ಪೂಜೆ ಮಾಡುವುದರಿಂದ ನೀವು ಸಂಕಷ್ಟಗಳಿಂದ ಪಾರಾಗಬಹುದು. ಈ ದಿನ ಕೆಲವೊಂದು ವಿಶೇಷ ಪೂಜೆ ಮಾಡುವುದರಿಂದ ನೀವು ನಿಮ್ಮ ಜೀವನದಲ್ಲಿ ಎದುರಾಗಬಹುದಾದ ಸಂಕಷ್ಟಗಳಿಂದ ಪಾರಾಗಬಹುದು. ಮಂಗಳವಾರವನ್ನು ದೇವಿ ದುರ್ಗಾದೇವಿಯ ಆರಾಧನೆಯು ವಿಶೇಷವಾಗಿದೆ. ಹಾಗಾಗಿ ಆ ಜಗನ್ಮಾತೆಯ ಆರಾಧನೆಯಿಂದಲೂ ನೀವು ವಿಶೇಷ ಫಲಗಳನ್ನು ಪಡೆಯುತ್ತೀರಿ. ಮಂಗಳವಾರ ಯಾವ ಯಾವ ಪೂಜೆಗಳನ್ನು ಮಾಡುವುದರಿಂದ ಸಂಕಷ್ಟದಿಂದ ಪಾರಾಗಬಹುದು ಎಂದು ತಿಳಿದುಕೊಳ್ಳೊಣ

ವ್ಯಾಪಾರದಲ್ಲಿ ಹೆಚ್ಚಿನ ಲಾಭ ಗಳಿಸಿ:

ವ್ಯಾಪಾರ ಅಥವಾ ಉದ್ಯಮದಲ್ಲಿ ಯಶಸ್ಸು ಗಳಿಸಲು ಮಂಗಳವಾರ ಒಂದು ಕಪ್ಪು ಮಡಿಕೆಯನ್ನು ತರಬೇಕು. ಅದಕ್ಕೆ ಕಾಡಿಗೆಯನ್ನು ಹಚ್ಚಿ ಅದಕ್ಕೆ ಹರಿಯಬಹುದಾದ ಬಟ್ಟೆಯನ್ನು ಕಟ್ಟಬೇಕು. ನಂತರ ಹರಿಯುತ್ತಿರುವ ಹೊಳೆ ಅಥವಾ ಹಳ್ಳದಲ್ಲಿ ಬಿಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣಬಹುದು.

ಉತ್ತಮ ವೈವಾಹಿಕ ಜೀವನ ನಡೆಸಿ:

ನೀವು ವಿವಾಹಿತರಾಗಿದ್ದಲ್ಲಿ ನಿಮ್ಮ ಮತ್ತು ನಿಮ್ಮ ಪತ್ನಿ ನಡುವೆ ಹೊಂದಾಣಿಕೆ ಸರಿ ಇಲ್ಲದಿದ್ದರೆ ಅಥವಾ ಸಂಸಾರದಲ್ಲಿ ಏನಾದರೂ ಸಮಸ್ಯೆ ಎದುರಾದಾಗ ಒಂದು ನಾಗಕೇಸರಿ ಹೂವನ್ನು ತರಬೇಕು. ಅದಕ್ಕೆ ಒಂದು ಸ್ವಲ್ಪ ಜೇನುತುಪ್ಪವನ್ನು ಹಚ್ಚಬೇಕು. ನಂತರ ಅದನ್ನು ತಾಯಿ ದುರ್ಗಾದೇವಿಗೆ ಅರ್ಪಿಸಿ ಪೂಜೆ ಮಾಡಿ ನಮ್ಮ ಸಾಂಸಾರಿಕ ಜೀವನದಲ್ಲಿ ಯಾವುದೇ ತೊಂದರೆ, ತಾಪತ್ರಯಗಳು ಬಾರದಿರಲಿ ಎಂದು ಪ್ರಾರ್ಥಿಸಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಸಂಸಾರದ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತದೆ.

ಉದ್ಯೋಗದಲ್ಲಿ ಯಶಸ್ಸು ಗಳಿಸಲು ಹೀಗೆ ಮಾಡಿ;

ಯಾರೇ ಆದರೂ ಉದ್ಯೋಗದಲ್ಲಿ ಭಡ್ತಿ ಸಿಗಬೇಕು, ತಮ್ಮನ್ನು ಎಲ್ಲರೂ ಗೌರವಿಸಬೇಕು ಎನ್ನುವ ಭಾವನೆ ಹೊಂದಿರುತ್ತಾರೆ. ಆದರೆ ಅವರಿಗೆ ಉದ್ಯೋಗದಲ್ಲಿ ಯಶಸ್ಸು ಸಿಗುವುದಿಲ್ಲ. ಅಂತವರು ೨೫೦ ಗ್ರಾಂ ಹೆಸರು ಕಾಳನ್ನು ತಂದು ಅದನ್ನು ದುರ್ಗಾ ದೇವಿಯ ದೇವಸ್ಥಾನಕ್ಕೆ ಮಂಗಳವಾರದಂದು ನೀಡಬೇಕು. ಅಲ್ಲದೆ ಮಂಗಳವಾರ ಬೆಳಗ್ಗಿನ ದಿನಚರಿಗಳನ್ನು ಪೂರೈಸಿ ಶುಚಿರ್ಭುತರಾಗಿ ದುರ್ಗಾ ಸಪ್ತಶತಿ ಪಾರಾಯಣ ಮಾಡಬೇಕು. ಪಾರಾಯಣ ಮಾಡಲು ಸಾಧ್ಯವಾಗದೆ ಇದ್ದವರು ಒಂದೆರಡು ಪುಟದಷ್ಟಾದರೂ ಪಾರಾಯಣ ಮಾಡಬೇಕು. ಮುಂದಿನ ದಿನಗಳಲ್ಲಿ ಅದನ್ನು ಪೂರ್ಣಗೊಳಿಸಬೇಕು.

ಜೀವನದಲ್ಲಿ ಸಂತೋಷ-ನೆಮ್ಮದಿ:

ಪ್ರತಿಯೊಬ್ಬರು ಜೀವನದಲ್ಲಿ ನೆಮ್ಮದಿಯಾಗಿ ಇರಬೇಕು ಎಂದು ಬಯಸುವುದು ಸಹಜ. ಆದರೆ ಸಮಸ್ಯೆಗಳಿಂದಾಗಿ ಅದು ಸಾಧ್ಯವಾಗುವುದಿಲ್ಲ. ನೆಮ್ಮದಿ ಪ್ರಾಪ್ತಿಯಾಗಬೇಕು ಎಂದರೆ ಮಂಗಳವಾರ ನಾಗಕೇಸರಿ ಮರಕ್ಕೆ ವಿಧಿವತ್ತಾಗಿ ಪೂಜೆ ಸಲ್ಲಿಸಬೇಕು. ನಾಗಕೇಸರಿ ಮರ ಇಲ್ಲದ ಪಕ್ಷದಲ್ಲಿ ನಾಗಕೇಸರಿ ಹೂವನ್ನು ತಂದು ಮಂಗಳವಾರ ಪೂಜೆ ಮಾಡಬೇಕು. ಆ ಒಂದು ದಿನ ಆ ಹೂವು ಮನೆಯಲ್ಲಿಯೇ ಇರಬೇಕು. ಬುಧವಾರ ದಿನ ಬೆಳಗ್ಗೆ ಸ್ನಾನ, ಪೂಜೆ ಮುಗಿಸಿ ಆ ಹೂವನ್ನು ಹೊಳೆಯಲ್ಲಿ ಬಿಡಬೇಕು.

ಮನೆಯಿಂದ ಹೊರಡುವ ಮುನ್ನ ರೀತಿ ಮಾಡಿದಲ್ಲಿ ಯಶಸ್ಸು ಖಚಿತ:

ನೀವು ಯಾವುದಾದರೂ ಮುಖ್ಯ ಕೆಲಸಕ್ಕೆ ಹೊರಗಡೆ ಹೋಗುವ ಮುನ್ನ ಹಣೆಗೆ ಕುಂಕುಮ ಇಟ್ಟುಕೊಂಡು ದುರ್ಗಾದೇವಿಯನ್ನು ಮನಸ್ಸಿನಲ್ಲಿಯೇ ಪ್ರಾರ್ಥಿಸಿ ತೆರಳಿರಿ. ಈ ರೀತಿ ಮಾಡುವುದರಿಂದ ನೀವು ತೆರಳಿದ ಕೆಲಸ ಸುಲಭವಾಗಿ ಆಗಲಿದೆ.

Comments are closed.