Sandalwood: ತೆರೆಯ ಮೇಲೆ ಮಿಂಚುವ ಈ ಖ್ಯಾತ ನಟರು ಸಾಲದ ಹೊರೆ ಹೆಚ್ಚಾಗಿ ಕೊನೆಗೆ ಮಾಡಿದ್ದೇನು ಗೊತ್ತೇ? ಕಣ್ಣೀರಿಟ್ಟ ಅಭಿಮಾನಿಗಳು!

Sandalwood: ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ದಶಕಗಳ ಇತಿಹಾಸವಿದೆ. ಭಾರತೀಯ ಚಿತ್ರರಂಗಕ್ಕೆ ಕನ್ನಡ ಚಿತ್ರರಂಗ ತನ್ನದೇ ಆದಂತಹ ಮಹತ್ತರವಾದ ಕೊಡುಗೆಗಳನ್ನು ನೀಡಿದೆ. ಚಿತ್ರರಂಗದ ನಟರು ಎಂದಾಕ್ಷಣ ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳುವುದು ಅವರ ಕೈತುಂಬ ಹಣ ಸಂಪಾದನೆ ಆಗುತ್ತದೆ. ಅವರ ಜೀವನ ಲಕ್ಜುರಿಯಸ್ ಆಗಿರುತ್ತದೆ ಅನ್ನೋದಾಗಿ. ತೆರೆಯ ಮೇಲಿನ ಅವರ ಜೀವನ ನೋಡಿ ನಾವು ಅವರ ತೆರೆಯ ಹಿಂದಿನ ಜೀವನವನ್ನು ಅಳೆಯೋದಕ್ಕೆ ಸಾಧ್ಯ ಇಲ್ಲ. ಇನ್ನು ಇವತ್ತಿನ ಈ ಲೇಖನದ ಮೂಲಕ ಕೂಡ ನಾವು ಸಾಲವನ್ನು ಮಾಡಿಕೊಂಡು ಮನೆ ಆಸ್ತಿಯನ್ನು ಮಾಡಿಕೊಂಡಂತಹ ಕನ್ನಡದ ಕಲಾವಿದರ ಬಗ್ಗೆ ಹೇಳೋದಕ್ಕೆ ಹೊರಟಿದ್ದೇವೆ.

ಸಾಲ ಮಾಡಿಕೊಂಡು ಮನೆ ಆಸ್ತಿ ಮಾಡಿಕೊಂಡ ಕಲಾವಿದರು

ಶ್ರೀನಿವಾಸ್ ಮೂರ್ತಿ: ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾಗಿರುವಂತಹ ಶ್ರೀನಿವಾಸ್ ಮೂರ್ತಿ ರವರು ಚಿಕ್ಕಬಳ್ಳಾಪುರದಿಂದ ಯಾವುದೇ ರೀತಿಯ ಹಣವಿಲ್ಲದೆ ಬೆಂಗಳೂರಿನಲ್ಲಿ ಕಲಾವಿದ ಆಗುವ ಆಸೆಯಿಂದ ಬಂದವರು. ಕಡಿಮೆ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಸಂಪಾದಿಸಿದ ಇವರು ಮನೆ ಸಹಿತ 7 ಸೈಟ್ಗಳನ್ನು ಕೂಡ ಖರೀದಿ ಮಾಡಿದ್ರು. ಸಾದ ನಂತರ ಸಾಕಷ್ಟು ಸಿನಿಮಾಗಳನ್ನ ನಿರ್ಮಾಣ ಮಾಡುವುದಕ್ಕೆ ಹೋದಾಗ ಅವರು ತಮ್ಮ ಆಸ್ತಿಗಳನ್ನು ಕಳೆದುಕೊಳ್ಳಬೇಕಾಗಿ ಬಂತು. ಈಗ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವಂತಹ ಇವರು ಧಾರವಾಹಿಯಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ದ್ವಾರಕೀಶ್

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿರುವಂತಹ ದ್ವಾರಕೀಶ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗೆ ನಮ್ಮನ್ನೆಲ್ಲ ಅಗಲಿದ್ದಾರೆ. ಆದರೆ ಇವರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ಮಾಪಕರಾಗಿದ್ದರು. 6 7 ದೊಡ್ಡ ಬಂಗಾಳಿಗಳು ಸೇರಿದಂತೆ ದುಬಾರಿ ಬೆಳೆಯ ಕಾರುಗಳು ಕೂಡ ದ್ವಾರಕೀಶ್ ರವರ ಬಳಿ ಇದ್ದವು. ನಂತರದಲ್ಲಿ ಅವರು ಯಾವ ರೀತಿಯಲ್ಲಿ ಸಾಲ ಮಾಡಿಕೊಂಡು ತಮ್ಮ ಬಂಗಲೆಯನ್ನು ಮಾರಾಟ ಮಾಡಿದ್ದಾರೆ ಅನ್ನೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಚಿದಾನಂದ

ಪಾಪ ಪಾಂಡು ಧಾರವಾಹಿ ಮೂಲಕ ಖ್ಯಾತಿಯನ್ನು ಪಡೆದುಕೊಂಡಿದ್ದ ಚಿದಾನಂದ ರವರು ಕೂಡ ಅವಕಾಶಗಳು ಸಿಗದೇ ಹಾಗೂ ಸಾಕಷ್ಟು ನಷ್ಟವಾಗಿ ಈಗ ಸದ್ಯಕ್ಕೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಈಗಲೂ ಕೂಡ ಅವರಿಗೆ ನಟಿಸುವುದಕ್ಕೆ ಅವಕಾಶ ಸಿಗುತ್ತಿಲ್ಲ.

ರವಿಚಂದ್ರನ್

ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಾಗಿರುವ ವೀರ ಸ್ವಾಮಿ ಅವರ ಪುತ್ರ. ಸಾಕಷ್ಟು ಸಿನಿಮಾಗಳನ್ನ ನಿರ್ಮಾಣ ಮಾಡಿ ಬ್ಯಾಕ್ ಟು ಬ್ಯಾಕ್ ಸೋಲನ್ನು ಕಂಡ ನಂತರ ರಾಜಾಜಿನಗರದಲ್ಲಿ ಇರುವಂತಹ ತಮ್ಮ ಮನೆಯನ್ನು ಕೂಡ ಮಾರಾಟ ಮಾಡಿರುವುದನ್ನು ಅವರು ಓಪನ್ ಆಗಿ ಹೇಳಿಕೊಂಡಿದ್ದಾರೆ. ಆದರೆ ಅದೇ ವೇದಿಕೆ ಮೇಲೆ ಮತ್ತೆ ಜನರ ಪ್ರೀತಿಯಿಂದ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಕೂಡ ಹೇಳಿಕೊಂಡಿದ್ದಾರೆ.

Comments are closed.