Kannada News: ಬೆಣ್ಣೆಯಂತಹ ಹೆಂಡತಿ ಸಿಕ್ಕಿದ್ಲು ಎಲ್ಲವೂ ಚೆನ್ನಾಗಿತ್ತು: ಆಕೆಯನ್ನು ಬಾರಿ ಪ್ರೀತಿ ಮಾಡುತ್ತಿದ್ದ. ಆದರೆ ಹೆಂಡತಿ ಸತ್ತಾಗ ಏನು ಮಾಡಿದ್ದಾನೆ ಗೊತ್ತೇ??

Kannada News: ಕೆಲವೊಮ್ಮೆ ದೇವರ ಆಟ ಏನಿದೆ ಎನ್ನುವುದು ಯಾರಿಗೂ ಕೂಡ ಅರ್ಥವಾಗುವುದಿಲ್ಲ. ಚೆನ್ನಾಗಿರುವವ ಮನಸ್ಸಿಗೆ ಒಂದಲ್ಲ ಒಂದು ನೋವುಗಳನ್ನು ಕೊಡುತ್ತಾ ಹೋಗುತ್ತಾನೆ. ಈ ಗಂಡ ಹೆಂಡತಿ ವಿಷಯದಲ್ಲೂ ಹಾಗೆ ಆಗಿದೆ. ಇವರಿಬ್ಬರು ಬಹಳ ಅನ್ಯೋನ್ಯವಾಗಿ ಸಂತೋಷವಾಗಿ ಇದ್ದ ಜೋಡಿ, ಇಂಥ ಜೋಡಿಯ ನಡುವೆ ಒಂದು ದಿನ ಕೂಡ ಜಗಳ ಆಗಿರಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಹೆಂಡತಿ ಅನಾರೋಗ್ಯದಿಂದ ವಿಧಿವಶರಾದರು. ಅದಾದ ಮೂರನೇ ದಿನಕ್ಕೆ ಗಂಡ ಏನು ಮಾಡಿದ್ದಾರೆ ಗೊತ್ತಾ?

ಈ ಘಟನೆ ನಡೆದಿರುವುದು, ಶ್ರೀಕಾಕುಳಂ ಜಿಲ್ಲೆಯ ಅಮುದಲವಲಸ್ ಮಂಡಲದ ಇಸರ್ಲಪೇಟ ಗ್ರಾಮದಲ್ಲಿ. ಈ ಜೋಡಿಯ ಹೆಸರು ಮಂಗರಾಜು ಹಾಗೂ ಮೋನಿಕಾ. ಇವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸಿ, 2022ರಲ್ಲಿ ಮದುವೆಯಾದರು. ಲವ್ ಮ್ಯಾರೇಜ್ ಆದರೂ ಮನೆಯವರನ್ನೆಲ್ಲಾ ಒಪ್ಪಿಸಿ ಮದುವೆಯಾದದು. ಮಂಗರಾಜು ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ಹಾಗಿದ್ದರೂ ಕೂಡ ಈ ಜೋಡಿ ತುಂಬಾ ಸಂತೋಷವಾಗಿದ್ದರು..

ಇದನ್ನು ಓದಿ: ಚಿರಂಜೀವಿ ಸಿನಿಮಾದಲ್ಲಿ ನಟನೆ ಮಾಡಿ ಎಂದಿದ್ದಕ್ಕೆ, ಶ್ರೇಯ ಶರಣ್ ಅದೆಂತ ಮಾತು ಅಂದಿದ್ದಾರೆ ಗೊತ್ತೇ?? ತಲ್ಲಣಗೊಂಡ ಚಿತ್ರರಂಗ.

ಒಂದು ದಿನವೂ ಜಗಳ ಆಡದೆ ಬಹಳ ಸಂತೋಷವಾಗಿ ಜೀವನ ನಡೆಸುತ್ತಿದ್ದರು. ಇವರಿಬ್ಬರನ್ನು ನೋಡಿ ಇವರ ತಂದೆ ತಾಯಿ ಕೂಡ ಬಹಳ ಸಂತೋಷಪಡುತ್ತಿದ್ದರು. ಇಷ್ಟು ಸುಂದರವಾದ ಜೋಡಿಯ ಮೇಲೆ ಯಾರ ಕಣ್ಣು ಬಿತ್ತೋ, ಇದ್ದಕ್ಕಿದ್ದ ಹಾಗೆ ಅನಾರೋಗ್ಯಕ್ಕೆ ಒಳಗಾದರು. ಅವರಿಗೆ ಚಿಕಿತ್ಸೆ ಕೊಡಿಸಲು ಮಂಗರಾಜು ಅವರು ಆಸ್ಪತ್ರೆಗೆ ಲಕ್ಷ ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಿದರು. ಆದರೆ ಮೌನಿಕ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ಏಪ್ರಿಲ್ 16ರಂದು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು.

ಇದನ್ನು ಓದಿ: ಸಾಲದ ಸುಳಿಯಲ್ಲಿ ಸಿಲುಕಿಕೊಂಡು ತೆಗೆದುಕೊಂಡ ಹಣ ಹಿಂತಿರುಗಿ ಕೊಡಲು ಸಾಧ್ಯವಾಗದೆ ಕಷ್ಟ ಪಡುತ್ತಿದ್ದರೆ ಈ ಒಂದು ಪ್ರಯೋಗ ಮಾಡಿ ಸಾಕು ಸಾಲದಿಂದ ಶಾಶ್ವತ ಮುಕ್ತಿ ಸಿಗುತ್ತದೆ!

ಇದರಿಂದ ಮಂಗರಾಜು ಅವರಿಗೆ ಬಹಳ ನೋವಾಗಿತ್ತು, ಹೆಂಡತಿಯ ನೆನಪಲ್ಲಿ ಊಟ ತಿಂಡಿ ಮಾಡುವುದನ್ನು ಕೂಡ ನಿಲ್ಲಿಸಿ ನೋವಿನಲ್ಲಿದ್ದರು. ಮಂಗರಾಜು ಅವರಿಗೆ ಹೆಂಡತಿ ಇಲ್ಲದೆ ಇರುವುದು ಕಷ್ಟ ಎಂದು ಅನ್ನಿಸಿ, ಏಪ್ರಿಲ್ 19ರಂದು ಮನೆಯಿಂದ ಆಸ್ಪತ್ರೆಗೆ ಹೊಗುತ್ತೇನೆ ಎಂದು ಗುಂಟೂರಿಗೆ ಹೊರಟಿದ್ದಾರೆ. ಅಲ್ಲಿಗೆ ಹೋದ ಬಳಿಕ, ತಾವು ಉಸಿರು ನಿಲ್ಲಸಿಕೊಳ್ಳುತ್ತಿರುವುದಾಗಿ ಫ್ರೆಂಡ್ ಗೆ ಮೆಸೇಜ್ ಮಾಡಿ ತಾವು ತೋಟದಲ್ಲಿ ಉಸಿರನ್ನು ನಿಲ್ಲಿಸಿಬಿಟ್ಟಿದ್ದಾರೆ. ಈ ವಿಚಾರ ಈಗ ಪೊಲೀಸರನ್ನು ತಲುಪಿದ್ದು, ತನಿಖೆ ನಡೆಯುತ್ತಿದೆ. ಹೆಂಡತಿಯನ್ನು ಕಳೆದುಕೊಂಡು ಈ ರೀತಿ ಮಾಡಿಕೊಂಡಿದ್ದಾರೆ.

Comments are closed.