Political News: ಶಾಸಕನಾದ ಕೂಡಲೇ ಕೆಲಸ ಆರಂಭಿಸಿದ ವಿಜಯೇಂದ್ರ- ಗೆದ್ದ ಮೇಲೆ ಕೂಡ ಎರಡು ದಿನ ಕೂಡ ವಿಶ್ರಾಂತಿ ಪಡೆಯದೇ ಮಾಡಿದ್ದೇನು ಗೊತ್ತೇ??

Political News: ರಾಜ್ಯದಲ್ಲಿ ಇಷ್ಟು ದಿವಸಗಳ ಕಾಲ ಚುನಾವಣೆಯ ಬಿಸಿ ಜೋರಾಗಿಯೇ ಇತ್ತು. ಮೇ 10ರಂದು ಎಲೆಕ್ಷನ್ ನಡೆದು, ಮೇ 13ರಂದು ಫಲಿತಾಂಶ ಕೂಡ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಬಹುಮತ ಪಡೆದು, ದೊಡ್ಡ ಸಂಖ್ಯೆಯಲ್ಲಿ ಗೆದ್ದಿದ್ದು, ಅಧಿಕಾರಕ್ಕೆ ಬರಲಿದೆ. ಎಲ್ಲೆಡೆ ಈಗ ರಾಜ್ಯದ ಮುಂದಿನ ಸಿಎಂ ಯಾರು ಎನ್ನುವ ಚರ್ಚೆಯೇ ನಡೆಯುತ್ತಿದೆ. ಇದರ ನಡುವೆ ಬಿಜೆಪಿ (BJP) ಅಭ್ಯರ್ಥಿಯಾಗಿ ಗೆದ್ದಿರುವ ವಿಜಯೇಂದ್ರ ಅವರು ಏನು ಮಾಡಿದ್ದಾರೆ ಗೊತ್ತಾ? ಇದನ್ನೂ ಓದಿ: Kannada News: ದಿಡೀರ್ ಎಂದು ಡ್ರೈವರ್ ಗೆ ಆಯ್ತು ಹೃದಯಾಘಾತ- ಆದರೂ ಬಸ್ ನಲ್ಲಿ ಇದ್ದವರು ಸೇಫ್. ಹೇಗೆ ಗೊತ್ತೇ? ಎದ್ದು ನಿಂತು ಸಲ್ಯೂಟ್ ಮಾಡಿದ್ದು ಯಾರಿಗೆ ಗೊತ್ತೇ?

ಎಲೆಕ್ಷನ್ ಮುಗಿದು ಫಲಿತಾಂಶ ಬಂದ ನಂತರ ಒಬ್ಬೊಬ್ಬರು ಒಂದೊಂದು ಕೆಲಸಗಳನ್ನು ಮಾಡುತ್ತಿದ್ದಾರೆ. ಹೀಗಿರುವಾಗ, ಶಿಕಾರಿಪುರ ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ವಿಜಯೇಂದ್ರ ಅವರು ಅಲ್ಲಿ ಗೆದ್ದಿದ್ದಾರೆ. ಫಲಿತಾಂಶ ಬಂದು, ಗೆದ್ದು ಎರಡು ದಿನ ಆಗುವುದಕ್ಕಿಂತ ಮೊದಲೇ ವಿಜಯೇಂದ್ರ ಅವರು ಎರಡು ದಿನ ಕೂಡ ರೆಸ್ಟ್ ಪಡೆಯದೆ, ರಸ್ತೆ ಅಪಘಾತದಲ್ಲಿ ಮೃತರಾದ ಕುಟುಂಬದವರ ಮನೆಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: Business Ideas: 40 ದಿನಗಳಲ್ಲಿ ಬೆಳೆ ಬರುವ, ಕೆಜಿಗೆ ಕನಿಷ್ಠ 500 ರೂಪಾಯಿಸಿಗುವ ಕೆಂಪು ಬೆಂಡೆಕಾಯಿ ಬೆಳೆಯಿರಿ. ಕೈತುಂಬಾ ಆದಾಯ ಗಳಿಸಿ. ಏನು ಮಾಡಬೇಕು ಗೊತ್ತೇ?

ಕಳೆದ ಗುರುವಾದ ನಡೆದ ಘಟನೆ ಇದು, ಶಿವಮೊಗ್ಗ ಜಿಲ್ಲೆಯ ಕಂಸಿ ಹತ್ತಿರ ಭೀಕರವಾದ ರಸ್ತೆ ಅಪಘಾತ ನಡೆಯಿತು. ಇಲ್ಲಿ ಎರಡು ಬಸ್ ಗಳು ಮುಖಾಮುಖಿ ಆಯಿತು. ನಡೆದ ಈ ಘಟನೆಯಲ್ಲಿ ಮೂವರು ವಿಧಿವಶರಾದರು. ಇಲ್ಲಿ ಮೃತರಾದ ಮೂವರ ಮನೆಗೂ ವಿಜಯೇಂದ್ರ ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈಸೂರು ಗ್ರಾಮದವರಾದ ಅರುಣ, ಚಿಕ್ಕಜೋಗಿಹಳ್ಳಿಯ ಮಹೇಶ್ವರಪ್ಪ ಅವರ ಮನೆಗೆ ವಿಜಯೇಂದ್ರ ಅವರು ಹೋಗಿ ಮಾತನಾಡಿದ್ದಾರೆ.

ಚುನಾವಣಾ ಫಲಿತಾಂಶ ಬಂದು ಎರಡು ದಿನಗಳು ಕೂಡ ಕಳೆಯುವುದಕ್ಕಿಂತ ಮೊದಲೇ ವಿಜಯೇಂದ್ರ ಅವರು ಹೀಗೆ ಜನರಿಗಾಗಿ ಕೆಲಸ ಮಾಡುವುದಕ್ಕೆ ಶುರು ಮಾಡಿರುವುದು ಜನರಲ್ಲಿ ಭರವಸೆ ಮೂಡಿಸಿದೆ. ಇವರ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಸಹ ಎಲ್ಲವೂ ಹೀಗೆ ನಡೆಯಲಿ ಎನ್ನುತ್ತಿದ್ದಾರೆ ಕ್ಷೇತ್ರದ ಜನರು.ಇದನ್ನೂ ಓದಿ: Business Ideas: ಹೆಚ್ಚಿನ ಬಂಡವಾಳವಿಲ್ಲದೆ ಕೂಡ, ಬಿಸಿನೆಸ್ ಆರಂಭ ಮಾಡಿ ಲಕ್ಷ ಲಕ್ಷ ಲಾಭ ಗಳಿಸುವ ಬಿಸಿನೆಸ್ ಯಾವುದು ಗೊತ್ತೇ?? ನೋಡಿ ಟ್ರೈ ಮಾಡಿ.

Comments are closed.