Film News: ತೆಲುಗಿನಲ್ಲಿ 7 ವರ್ಷದಿಂದ ಪ್ರೀತಿ ಮಾಡಿ ಎಂಗೇಜ್ಮೆಂಟ್ ಮಾಡಿಕೊಂಡಿರುವ ವರುಣ್, ಲಾವಣ್ಯ ವಯಸ್ಸಿನ ಅಂತರ ಎಷ್ಟು ಗೊತ್ತೇ? ಇವೆಲ್ಲ ಬೇಕಿತ್ತಾ??
Film News: ಟಾಲಿವುಡ್ (Tallywood) ನ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ತಮ್ಮ ನಾಗಬಾಬು ಅವರ ಮಗ, ಯಂಗ್ ಹೀರೋ ವರುಣ್ ತೇಜ್ (varun tej) ಅವರ ನಿಶ್ಚಿತಾರ್ಥ (Engagment) ನಿನ್ನೆ ನಡೆದಿದೆ. ನಟ ವರುಣ್ ತೇಜ್ ಅವರು ನಟಿ ಲಾವಣ್ಯ ತ್ರಿಪಾಠಿ ಅವರನ್ನು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರಿಬ್ಬರ ಲವ್ ಮತ್ತು ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಕೇಳಿಬಂದಿತ್ತು. ಈಗ ಕೊನೆಗೂ ಇಬ್ಬರ ನಿಶ್ಚಿತಾರ್ಥದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: Sakshi agarwal: ಒಳಉಡುಪಿನಲ್ಲಿ ಫೋಟೋಶೂಟ್ ಮಾಡಿಸುವ ಧೈರ್ಯ ಸೌತ್ ನಟಿಯರಿಗೆ ಇಲ್ಲ ಎಂಬ ಮಾತಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ ‘ಸಾಫ್ಟ್ವೇರ್ ಗಂಡ’ ಸಿನಿಮಾದ ನಾಯಕಿ!! ಹೇಳಿದ್ದೇನು ಗೊತ್ತೇ?
![Film News: ತೆಲುಗಿನಲ್ಲಿ 7 ವರ್ಷದಿಂದ ಪ್ರೀತಿ ಮಾಡಿ ಎಂಗೇಜ್ಮೆಂಟ್ ಮಾಡಿಕೊಂಡಿರುವ ವರುಣ್, ಲಾವಣ್ಯ ವಯಸ್ಸಿನ ಅಂತರ ಎಷ್ಟು ಗೊತ್ತೇ? ಇವೆಲ್ಲ ಬೇಕಿತ್ತಾ?? https://sihikahinews.com/2023/06/10/varun-lavanya-engagement/ JOSH 2 | Live Kannada News](https://sihikahinews.com/wp-content/uploads/2023/05/JOSH-2-1006x1024.jpg)
ನಟ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ (Lavanya Tripati) ಇಬ್ಬರು ಸಿನಿಮಾ ಒಂದರಲ್ಲಿ ಜೊತೆಯಾಗಿ ನಟಿಸಿದ್ದರು, ಆಗಿನಿಂದ ಇಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆದಿತ್ತು. ನಂತರ ಪ್ರೀತಿ ಶುರುವಾಗಿ, ನಿನ್ನೆ ಈ ಜೋಡಿಯ ಎಂಗೇಜ್ಮೆಂಟ್ ಅದ್ಧೂರಿಯಾಗಿ ಕುಟುಂಬದವರ ಸಮ್ಮುಖದಲ್ಲಿ ನಡೆದಿದೆ. ನವಜೋಡಿಗೆ ವಿಶ್ ಮಾಡಲು, ಮೆಗಾಸ್ಟಾರ್ ಚಿರಂಜೀವಿ ಅವರ ಇಡೀ ಕುಟುಂಬ ಬಂದಿತ್ತು. ರಾಮ್ ಚರಣ್ ಹಾಗೂ ಉಪಾಸನಾ ದಂಪತಿ, ಹಾಗೂ ನಟ ಅಲ್ಲು ಅರ್ಜುನ್ ಕೂಡ ಬಂದಿದ್ದರು..
ನಿನ್ನೆಯಿಂದ ಈ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗುತ್ತಿದ್ದು, ಈ ಜೋಡಿಯ ಮದುವೆ ಈ ವರ್ಷಾಂತ್ಯದಲ್ಲಿ ನಡೆಯುತ್ತದೆ ಎನ್ನಲಾಗುತ್ತಿದ್ದು, ಇಬ್ಬರು ರಾಜಸ್ಥಾನದಲ್ಲಿ ಮದುವೆಯಾಗಲು ನಿರ್ಧಾರ ಮಾಡಿದ್ದಾರಂತೆ. ನಿಶ್ಚಿತಾರ್ಥಕ್ಕೆ ಲಾವಣ್ಯ ತ್ರಿಪಾಠಿ ಅವರು ಪಿಸ್ತಾ ಗ್ರೀನ್ ಬಣ್ಣದ ದುಬಾರಿ ಸೀರೆ ಧರಿಸಿದ್ದರು, ಈ ಸೀರೆಯ ಬೆಲೆ ಸುಮಾರು ₹75,000 ರೂಪಾಯಿ ಎನ್ನಲಾಗುತ್ತಿದೆ..
ನಿಶ್ಚಿತಾರ್ಥ ಮಾಡಿಕೊಂಡು ಸಂತೋಷವಾಗಿರುವ ಈ ಜೋಡಿಯ ವಯಸ್ಸಿನ ಬಗ್ಗೆ ಈಗ ಚರ್ಚೆ ಶುರುವಾಗಿದ್ದು, ಇವರಿಬ್ಬರ ವಯಸ್ಸಿನ ಬಗ್ಗೆ ಹೇಳುವುದಾದರೆ.. ವರುಣ್ ತೇಜ್ ಅವರಿಗೆ ಈಗ 33 ವರ್ಷ ವಯಸ್ಸಾಗಿದ್ದು, ಲಾವಣ್ಯ ತ್ರಿಪಾಠಿ ಅವರಿಗೆ 32 ವರ್ಷ, ಇವರಿಬ್ಬರ ನಡುವೆ 1 ವರ್ಷದ ವಯಸ್ಸಿನ ವ್ಯತ್ಯಾಸವಿದೆ. ಇದೀಗ ಇವರಿಬ್ಬರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಇದನ್ನೂ ಓದಿ: Gruhalakshmi Yojana: ಗೃಹ ಲಕ್ಷ್ಮಿ ಯೋಜನೆಗೆ ಬತ್ತಿ ಇಟ್ಟ ಸರ್ಕಾರ; ಮತ್ತಷ್ಟು ಜನರಿಗೆ ನಿರಾಸೆ, ಯಾರಿಗೆಲ್ಲಾ 2000ರೂ. ಸಿಗಲ್ಲಾ ಗೊತ್ತಾ?
Comments are closed.