Stalin: ಮೇಕೆ ದಾಟು ಮೇಕೆ ದಾಟು ಎನ್ನುತ್ತಿರುವ ಕರ್ನಾಟಕಕ್ಕೆ – ತಮಿಳುನಾಡು ಮುಖ್ಯ ಮಂತ್ರಿ ಹೇಳಿದ್ದೇನು ಗೊತ್ತೇ? ಪಾತ್ರಯಾತ್ರೆ ಮಾಡಿದ ಪ್ರಚಾರ ಪಡೆದಿದ್ದವರಿಗೆ ಇದು ಕಾಣುತ್ತಿಲ್ಲವೇ?
Stalin: ಮೇಕೆದಾಟು ಪ್ರದೇಶದಲ್ಲಿ ಜಲಾಶಯ ಕಟ್ಟಬೇಕು ಎಂದು ಅದರಿಂದ ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಕರ್ನಾಟಕ ಸರ್ಕಾರ ಹೇಳುತ್ತಲೇ ಬಂದಿದೆ. ಇದನ್ನು ತಮಿಳುನಾಡಿನ ಸರ್ಕಾರ ವಿರೋಧಿಸುತ್ತಲೇ ಬಂದಿದೆ. ಈ ಹಿಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ಪ್ರಾಜೆಕ್ಟ್ ಬಗ್ಗೆ ಆಸಕ್ತಿ ತೋರಿಸಿದ್ದರು. ತಮಿಳುನಾಡಿಗೆ ತೊಂದರೆ ಆಗುವುದಿಲ್ಲ ಎಂದಿದ್ದರು.
![Stalin: ಮೇಕೆ ದಾಟು ಮೇಕೆ ದಾಟು ಎನ್ನುತ್ತಿರುವ ಕರ್ನಾಟಕಕ್ಕೆ - ತಮಿಳುನಾಡು ಮುಖ್ಯ ಮಂತ್ರಿ ಹೇಳಿದ್ದೇನು ಗೊತ್ತೇ? ಪಾತ್ರಯಾತ್ರೆ ಮಾಡಿದ ಪ್ರಚಾರ ಪಡೆದಿದ್ದವರಿಗೆ ಇದು ಕಾಣುತ್ತಿಲ್ಲವೇ? https://sihikahinews.com/2023/06/11/stalin-dmk-said-he-wont-allow-mekedaatu/ stalin dmk said he wont allow mekedaatu 1 | Live Kannada News](https://sihikahinews.com/wp-content/uploads/2023/06/stalin-dmk-said-he-wont-allow-mekedaatu-1-1024x536.jpg)
ಬೊಮ್ಮಾಯಿ ಅವರು 1000 ಕೋಟಿ ವೆಚ್ಚದಲ್ಲಿ ಮೇಕೆದಾಟು ಡ್ಯಾಮ್ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಈಗ ಸರ್ಕಾರ ಬದಲಾದಮೇಲೆ ಕೂಡ ಈ ವಿಚಾರ ಚರ್ಚೆಗೆ ಬಂದಿದೆ. ಪ್ರಸ್ತುತ ರಾಜ್ಯದ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಅವರು ಮೇಕೆದಾಟು ಡ್ಯಾಮ್ ವಿಚಾರವನ್ನು ಮತ್ತೊಂದು ಸಾರಿ ಮುನ್ನಲೆಗೆ ತಂದಿದ್ದಾರೆ. ಡಿಕೆ ಶಿವಕುಮಾರ್ ಅವರು ತಮಿಳು ರಾಜ್ಯಕ್ಕೆ ಮನವಿ ಮಾಡಿಕೊಂಡಿದ್ದರು. ಇದನ್ನು ಓದಿ..Political News: ರಾಜ್ಯವೇ ಶೇಕ್ ಆಗುವ ಸುದ್ದಿ- ದಿಡೀರ್ ಎಂದು ಅಶ್ವಿನಿ ಮೇಡಂ ಡಿಕೆಶಿ ರವರನ್ನು ಭೇಟಿಯಾಗಿದ್ದು ಯಾಕೆ ಗೊತ್ತೇ??
ಮೇಕೆದಾಟು ಅಣೆಕಟ್ಟು ಕಟ್ಟುವುದರಿಂದ ಕಾವೇರಿ ನೀರನ್ನು ಬಳಸಿ ಬಳಸಿ ವ್ಯವಸಾಯ ಮಾಡುವ ಎಲ್ಲರಿಗೂ ಸಹಾಯ ಆಗುತ್ತದೆ, ತಮಿಳುನಾಡು ಸರ್ಕಾರ ಉದಾರ ಮನಸ್ಸು ತೋರಿಸಬೇಕು, ನಾವು ಹಾಗೆಯೇ ಇರುತ್ತೇವೆ, ಇರರಿಂದ ಅವರಿಗೆ ತೊಂದರೆ ಆಗುವುದಿಲ್ಲ. ಬೆಂಗಳೂರಿನ ಕೃಷಿಕರಿಗೆ ನೀರುತ್ತದೆ. ಈ ಪ್ರಾಜೆಕ್ಟ್ ಮುಂದುವರಿಸಲು ತಮಗೆ ಆಸಕ್ತಿ ಇದೆ ಎನ್ನುವ ಮಾತನ್ನು ಹೇಳಿದ್ದರು..
ಆ ಮಾತಿಗೆ ಈಗ ತಮಿಳುನಾಡಿನ ಡಿಎಂ ಎಂಕೆ ಸ್ಟಾಲಿನ್ ಅವರು ಪ್ರತ್ಯುತ್ತರ ನೀಡಿದ್ದಾರೆ.. “ಈಗ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಮಾತ್ರವಲ್ಲ, ಈ ಹಿಂದಿನ ಬಿಜೆಪಿ ಸರ್ಕಾರ ಕೂಡ ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಈ ವಿಷಯದ ಬಗ್ಗೆ ನಮ್ಮ ನಿರ್ಧಾರ ಬದಲಾಗೋದಿಲ್ಲ. ಮೇಕೆದಾಟು ಪ್ರಾಜೆಕ್ಟ್ ನಡೆಯಲು ನಾವು ಬಿಡುವುದಿಲ್ಲ. ನಮ್ಮ ನಿರ್ಧಾರ ಸ್ಥಿರವಾಗಿದೆ..” ಎಂದಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಈ ಮಾತಿಗೆ ಯಾವುದೇ ಪ್ರತಿಕ್ರಿಯೆ ಕೊಡದೆ ಇರುವುದು ಆಶ್ಚರ್ಯ ತಂದಿದೆ. ಇದನ್ನು ಓದಿ..Sabarimala: ಅಯ್ಯಪ್ಪ ದೇವಸ್ಥಾನದ ಭಕ್ತರಿಗೆ ಮತ್ತೊಂದು ಸಿಹಿ ಸುದ್ದಿ- ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ ಮಂಡಳಿ. ಏನು ಗೊತ್ತೇ?
Comments are closed.