Kannada Astrology: ಅಕ್ಟೋಬರ್ 22 ರಂದು ಬದಲಾಗದಲಿದೆ ಈ ರಾಶಿಯವರ ಅದೃಷ್ಟ; ಇನ್ನು ಮುಂದೆ ಈ 4 ರಾಶಿಯವರು ಮುಟ್ಟಿದ್ದೇಲ್ಲಾ ಚಿನ್ನ!

Kannada Astrology: ನಮ್ಮ ರಾಷ್ಟ್ರದಲ್ಲಿ ಸಾವಿರಾರು ವರ್ಷಗಳಿಂದ ಜ್ಯೋತಿಷ್ಯವನ್ನು ಆಚರಿಸುತ್ತ ಬರುತ್ತಿದ್ದೇವೆ. ಗ್ರಹಣಗಳಾಗಲಿ, ಹಬ್ಬಗಳಾಗಲಿ ಎಲ್ಲವನ್ನು ಜ್ಯೋತಿಷ್ಯದ ಆಧಾರದ ಮೇಲೆ ಲೆಕ್ಕ ಹಾಕಿ ನಿಗದಿ ಮಾಡಲಾಗುತ್ತದೆ. ಅಲ್ಲದೆ ಜ್ಯೋತಿಷ್ಯವನ್ನು ಇಂದಿಗೂ ಆಸ್ತಿಕ ಜನರು ಬಹುವಾಗಿ ನಂಬುತ್ತಾರೆ. ಯಾವುದೇ ಒಂದು ಕೆಲಸ ಆಗಬೇಕಾದರೂ ಅದಕ್ಕೆ ನಮ್ಮ ಗ್ರಹಗತಿಗಳು, ಪೂರ್ವ ಜನ್ಮದ ಸುಕೃತಗಳು ಕಾರಣವಾಗುತ್ತದೆ ಎಂದು ನಂಬಲಾಗುತ್ತದೆ. ಈ ಅಕ್ಟೋಬರ್ 22 ರಿಂದ ಮಂಗಳವು ತುಲಾ ರಾಶಿ ಪ್ರವೇಶಿಸಲಿದೆ. ಗ್ರಹಗಳ ಈ ರೀತಿ ಸ್ಥಾನ ಬದಲಾವಣೆಯಿಂದ ಈ ನಾಲ್ಕು ರಾಶಿಯವರಿಗೆ ಯೋಗ ಕೂಡಿ ಬರಲಿದೆ. ಮುಟ್ಟಿದ್ದೆಲ್ಲವು ಚಿನ್ನ ಆಗುತ್ತದೆ ಎನ್ನುವ ಮಾತಿನಂತೆ ಇವರು ಕೈಗೊಳ್ಳುವ ಎಲ್ಲ ಕೆಲಸಗಳಲ್ಲಿ ಯಶಸ್ಸು ಕಾಣುತ್ತಾರೆ.

ನಮ್ಮ ಜೀವನದಲ್ಲಿ ನಡೆಯುವ ಎಲ್ಲ ಒಳ್ಳೆಯ ಹಾಗೂ ಕೆಟ್ಟ ಘಟನೆಗಳಿಗೆ ನಮ್ಮ ಗ್ರಹಗಳೇ ಕಾರಣವಾಗಿವೆ. ಗ್ರಹಗಳ ಸ್ಥಾನ ಪಲ್ಲಟದಿಂದ ನಮ್ಮ ಜೀವನದಲ್ಲಿ ಬದಲಾವಣೆ ಆಗುತ್ತದೆ. ಅಲ್ಲದೆ ಗ್ರಹಗಳ ಚಲನೆಯಿಂದ ನಮ್ಮ ವ್ಯಕ್ತಿತ್ವವನ್ನು ಹೇಗಿದೆ ಎಂದು ನಿರ್ಧರಿಸಬಹುದು. ಆ ಮಟ್ಟಿಗೆ ನಮ್ಮ ಹಿರಿಯರು, ಜ್ಞಾನಿಗಳು ಜ್ಯೋತಿಷ್ಯ ಶಾಸ್ತ್ರವನ್ನು ಆ ಮಟ್ಟಿಗೆ ಅಧ್ಯಯನ ಮಾಡಿ ಅದನ್ನು ದಾಖಲಿಸಿಟ್ಟಿದ್ದಾರೆ. ಅದೇ ನಮಗೆ ಈಗ ಸಹಾಯಕ್ಕೆ ಬರುತ್ತಿದೆ. ಇದು ವೈಜ್ಞಾನಿಕವಾಗಿಯೂ ಸಾಭೀತಾಗಿದೆ. ಹಾಗಾಗಿಯೇ ವಿಜ್ಞಾನಿಗಳೂ ಕೂಡ ಜ್ಯೋತಿಷ್ಯವನ್ನು ನಂಬುತ್ತಾರೆ. ಮಂಗಳ ಗ್ರಹದ ಸ್ಥಾನ ಬದಲಾವಣೆಯಿಂದ ನಾಲ್ಕು ರಾಶಿಯವರಿಗೆ ಅದೃಷ್ಟ ಒಲಿಯಲಿದೆ. ಆ ನಾಲ್ಕು ರಾಶಿಗಳು ಯಾವುದೆಂದು ಈಗ ತಿಳಿದುಕೊಳ್ಳೋಣ.

ಮೇಷ ರಾಶಿ:

ಮೇಷ ರಾಶಿ ಮೇಷ ಲಗ್ನದಲ್ಲಿ ಜನಿಸಿದವರು ಈ ಸಮಯದಲ್ಲಿ ಬಹಳ ಅದೃಷ್ಟವನ್ನು ಹೊಂದಲಿದ್ದಾರೆ. ಬಹಳ ವರ್ಷದಿಂದ ಮನೆಯನ್ನು ನಿರ್ಮಾಣ ಮಾಡಬೇಕು ಎಂದುಕೊಂಡಿದ್ದರೆ ಅದು ಈ ಸಮಯದಲ್ಲಿ ಈಡೇರಲಿದೆ. ಅಲ್ಲದೆ ಕೆಲವೊಂದು ಅಡೆತಡೆಗಳಿಂದ ನಿಂತು ಹೋಗಿದ್ದ ಅನೇಕ ಕೆಲಸಗಳು ಈ ಸಮಯದಲ್ಲಿ ಹೂವು ಎತ್ತಿದಂತೆ ಸುಲಭವಾಗಿ ನಡೆಯಲಿದೆ. ಅಲ್ಲದೆ ಮೇಷ ರಾಶಿಯವರು ಈ ಸಮಯದಲ್ಲಿ ದೇಗುಲಗಳ ದರ್ಶನ ಮಾಡಲು ಬಯಸುತ್ತಾರೆ. ಕುಟುಂಬ ಸಮೇತರಾಗಿ ಹಲವು ದೇವಾಲಯಗಳಿಗೆ ಭೇಟಿ ನೀಡಿ ನೆಮ್ಮದಿ ಕಂಡುಕೊಳ್ಳಲಿದ್ದಾರೆ.

ವೃಷಭ ರಾಶಿ:

ವೃಷಭ ರಾಶಿಯಲ್ಲಿ ಜನಿಸಿದವರಿಗೆ ಮಂಗಳ ಗ್ರಹದ ಚಲನೆಯಿಂದ ಬಹಳ ಶುಭವಾಗಲಿದೆ. ಮಂಗಳ ಗ್ರಹದ ಚಲನೆಯಿಂದ ಇವರು ಅಂದುಕೊಂಡ ಕೆಲಸಗಳು ನೆರವೇರಲಿದೆ. ಈ ರಾಶಿಯವರು ಕೈಗೊಳ್ಳುವ ಎಲ್ಲ ಕೆಲಸಗಳಿಗೆ ಕುಟುಂಬದ ಬೆಂಬಲ ಸಿಗಲಿದೆ. ಯಾವುದಾದರೂ ಹೊಸ ಉದ್ಯಮ ಅಥವಾ ವ್ಯಾಪಾರ ಪ್ರಾರಂಭಿಸಲು ಇದು ಸೂಕ್ತ ಸಮಯವಾಗಿರುತ್ತದೆ. ಇವರು ಕೈಗೊಳ್ಳುವ ಎಲ್ಲ ಕೆಲಸಗಳಲ್ಲಿ ಜಯವು ನಿಶ್ಚಿತವಾಗಿರತ್ತದೆ. ಹೂಡಿಕೆಗಳನ್ನು ಆರಂಭಿಸಲು ಇದು ಬಹಳ ಪ್ರಶಸ್ತ ಸಮಯವಾಗಿದೆ. ಹೂಡಿಕೆ ಆರಂಭಿಸಿದರೆ ನೀವು ದೊಡ್ಡ ಮಟ್ಟದಲ್ಲಿ ಲಾಭ ಗಳಿಸಲಿದ್ದೀರಿ. ವೃಷಭ ರಾಶಿಯವರಿಗೆ ಮಂಗಳ ಗ್ರಹದ ಸ್ಥಾನ ಪಲ್ಲಟದಿಂದ ಆರ್ಥಿಕ ಸ್ಥಿತಿ ಸುಧಾರಲಿದೆ. ಇನ್ನು ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ನೀವು ಬಯಸಿದಂತಹ ಹುಡುಗಿಯೇ ನಿಮ್ಮ ಕೈ ಹಿಡಿಯಲಿದ್ದಾಳೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಮಂಗಳ ಗ್ರಹದ ಸ್ಥಾನ ಪಲ್ಲಟದಿಂದ ಬಹಳ ಒಳ್ಳೆಯ ಯೋಗವನ್ನು ಪಡೆಯಲಿದ್ದಾರೆ. ಕಚೇರಿಯಲ್ಲಿ ನಿಮ್ಮ ಸ್ಥಾನ ಮಾನ ಗೌರವ ಹೆಚ್ಚಾಗಲಿದೆ. ಹಲವು ವರ್ಷಗಳಿಂದ ಭಡ್ತಿಗಾಗಿ ಪ್ರಯತ್ನಿಸುತ್ತಿದ್ದರೆ ಅದು ಈಗ ಈಡೇರಲಿದೆ. ವೃಶ್ಚಿಕ ರಾಶಿಯವರಿಗೂ ಹಣದ ಹರಿವು ಉತ್ತಮವಾಗಿರಲಿದೆ. ಬಹಳ ದಿನಗಳಿಂದ ನೀವು ವಾಹನ ಖರೀದಿಸಬೇಕು ಅಂದುಕೊಂಡಿದ್ದರೆ ಅದಕ್ಕೆ ಇದು ಒಳ್ಳೆಯ ಸಮಯವಾಗಿದೆ. ನಿಮಗೆ ಉತ್ತಮ ಸಮಯವಾಗಿದ್ದು, ಹೂಡಿಕೆ, ವ್ಯಾಪಾರ ಮಾಡಲು ಇದು ಸೂಕ್ತ ಸಮಯವಾಗಿದೆ.

ಕನ್ಯಾ ರಾಶಿ:

ಕನ್ಯಾ ರಾಶಿಯಲ್ಲಿ ಜನಿಸಿದವರು ಜನ್ಮತಃ ಬುದ್ದಿವಂತರು. ಆದರೆ ಇವರಿಗೆ ಅದೃಷ್ಟ ಆಗಾಗ ಕೈ ಕೊಡುತ್ತ ಇರಲಿದೆ. ಹಾಗಾಗಿ ಜೀವನದಲ್ಲಿ ನೆಮ್ಮದಿ ಕಳೆದುಕೊಂಡಿರುತ್ತಾರೆ. ಆದರೆ ಈಗ ಮಂಗಳ ಗ್ರಹದ ಸ್ಥಾನ ಪಲ್ಲಟದಿಂದ ಕನ್ಯಾ ರಾಶಿಯವರಿಗೆ ರಾಜ ಯೋಗ ತರಲಿದೆ. ಕನ್ಯಾ ರಾಶಿಯವರ ಜೀವನದಲ್ಲಿ ನೆಮ್ಮದಿ ನೆಲೆಸಲಿದೆ. ಕೆಲಸವನ್ನು ಹುಡುಕುತ್ತಿರುವವರಿಗೆ ಒಳ್ಳೆಯ ಸಂಬಳ ಸಿಗುವ ಕೆಲಸವೇ ನಿಮಗೆ ಸಿಗಲಿದೆ. ಅಲ್ಲದೆ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲಿದ್ದೀರಿ. ಹಣದ ಹರಿವು ಉತ್ತಮವಾಗಿ ಇಷ್ಟು ದಿನ ಇದ್ದ ಹಣದ ಮುಗ್ಗಟ್ಟು ಮಾಯವಾಗಲಿದೆ. ಜೀವನದಲ್ಲಿ ನೆಮ್ಮದಿ ಕಾಣಲಿದ್ದಾರೆ.

Comments are closed.