Kannada Astrology: ಸಂಪತ್ತಿನ ಅಧಿಪತಿ ಶುಕ್ರ, ಹಣದ ಅಧಿಪತಿ ಬುಧ ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದ್ದಾರೆ; ಈ ಮೂರು ರಾಶಿಯವರು ಮುಟ್ಟಿದ್ದೇಲ್ಲಾ ಚಿನ್ನ!

Kannada Astrology: ಜ್ಯೋತಿಷ್ಯ ಶಾಸ್ತ್ರ ಅಥವಾ ವೈದಿಕ ಶಾಸ್ತ್ರ ಹೇಳುವ ಪ್ರಕಾರ ಪ್ರತಿಯೊಂದು ಗ್ರಹವು ತನ್ನದೇ ಆದ ಸಮಯದಲ್ಲಿ ತನ್ನದೇ ಆದ ರಾಶಿ ಚಕ್ರವನ್ನು ಬದಲಾಯಿಸುತ್ತದೆ. ಕೆಲವೊಮ್ಮೆ ಗ್ರಹಗಳು ಮೈತ್ರಿ ಕೂಡ ಸಂಭವಿಸುತ್ತದೆ. ಗ್ರಹಗಳ ಸಂಯೋಗ ಉಂಟಾದಾಗ ಕೆಲವು ರಾಶಿಗಳ ಮೇಲೆ ಶುಭ ಹಾಗೂ ಆಶುಭ ಪರಿಣಾಮ ಉಂಟಾಗುತ್ತದೆ. ಶುಕ್ರ ಗ್ರಹದ ಸಂಯೋಗ ನಡೆಯಲಿದೆ. ಈ ಸಂಯೋಗ ಕರ್ಕ ರಾಶಿಯಲ್ಲಿ ನಡೆಯುತ್ತದೆ. ಬುಧ ಗ್ರಹವನ್ನು ವ್ಯವಹಾರ, ಹಣ, ಬುದ್ಧಿವಂತಿಕೆಗೆ ಸಂಬಂಧಿಸಿದ ಗ್ರಹ ಎಂದು ಹೇಳಲಾಗುತ್ತದೆ. ಅದೇ ರೀತಿ ಶುಕ್ರ ಗ್ರಹವನ್ನು ಐಶಾರಾಮಿ, ಸಂತೋಷ ಸಂಪತ್ತಿನ ಗ್ರಹ ಎಂದು ಹೇಳಲಾಗುತ್ತದೆ. ಬುಧ ಹಾಗೂ ಶುಕ್ರನ ಸಂಯೋಗದಿಂದ ಲಕ್ಷ್ಮಿ ನಾರಾಯಣ ಯೋಗ ರೂಪುಗೊಳ್ಳುತ್ತದೆ. ಈ ಸಂದರ್ಭದಲ್ಲಿ ಈ ಮೂರು ರಾಶಿಯವರು ಮಾತ್ರ ಅದ್ಭುತ ಪ್ರಯೋಜನ ಪಡೆದುಕೊಳ್ಳುತ್ತಾರೆ.

JOSH 2 | Live Kannada News
Kannada Astrology: ಸಂಪತ್ತಿನ ಅಧಿಪತಿ ಶುಕ್ರ, ಹಣದ ಅಧಿಪತಿ ಬುಧ ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದ್ದಾರೆ; ಈ ಮೂರು ರಾಶಿಯವರು ಮುಟ್ಟಿದ್ದೇಲ್ಲಾ ಚಿನ್ನ! https://sihikahinews.com/2023/06/19/kannada-astrology-lakshminarayana-yoga/

ಮೇಷ ರಾಶಿ: ಬುಧ ಹಾಗೂ ಶುಕ್ರನ ಸಂಯೋಗದಿಂದ ರೂಪಗೊಳ್ಳುವ ಲಕ್ಷ್ಮೀನಾರಾಯಣ ಯೋಗ ಮೇಷ ರಾಶಿಯವರಿಗೆ ಬಹಳ ಒಳ್ಳೆಯದನ್ನೇ ಮಾಡುತ್ತದೆ ಹೊಸ ಮನೆ ವಾಹನ ಅಥವಾ ಇತರ ಆಸ್ತಿ ಖರೀದಿ ಮಾಡುವ ಸಾಧ್ಯತೆ ಇದೆ. ಜೀವನದಲ್ಲಿ ಸುಖ ನೆಮ್ಮದಿ ಇರುತ್ತದೆ. ಐಷಾರಾಮಿ ವಸ್ತುಗಳನ್ನು ಕೂಡ ಖರೀದಿ ಮಾಡುವ ಸೌಭಾಗ್ಯ ನಿಮ್ಮದಾಗಬಹುದು.

ತುಲಾ ರಾಶಿ: ತುಲಾ ರಾಶಿ ಲಕ್ಷ್ಮೀನಾರಾಯಣ ರಾಜಯೋಗದಿಂದ ಅದ್ಭುತ ಯಶಸ್ಸನ್ನು ಗಳಿಸುತ್ತಾರೆ. ವ್ಯಾಪಾರದಲ್ಲಿ ಉದ್ಯೋಗದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ ಹೊಸ ಉದ್ಯೋಗಾವಕಾಶ ಸಿಗುವ ಸಾಧ್ಯತೆ ಇದೆ. ನೀವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು ಅದರಲ್ಲಿ ಆದಾಯ ಹೆಚ್ಚಾಗುತ್ತದೆ.

ಮಕರ ರಾಶಿ: ಬುಧ ಹಾಗೂ ಶುಕ್ರ ಸಂಯೋಗದಿಂದ ರೂಪಗೊಳ್ಳುವ ಲಕ್ಷ್ಮಿ ನಾರಾಯಣ ಯೋಗ ಮಕರ ರಾಶಿಯವರ ಮೇಲೆಯೂ ಅದೃಷ್ಟವನ್ನು ತರಲಿದೆ. ಉದ್ಯೋಗದಲ್ಲಿ ಲಾಭವಾಗುತ್ತದೆ ಉದ್ಯಮಿಗಳಿಗೆ ಹೆಚ್ಚು ಆದಾಯ ಸಿಗುತ್ತದೆ ನಿಮ್ಮ ಆತ್ಮವಿಶ್ವಾಸವು ಹೆಚ್ಚುತ್ತದೆ ಕುಟುಂಬದಲ್ಲಿಯೂ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ.

Comments are closed.