Tulasi Benefits: ನಾರಾಯಣ ಪ್ರಿಯ ತುಳಸಿಯಿಂದ ಈ ಕೆಲಸ ಮಾಡಿದ್ರೆ ಲಕ್ಷ್ಮೀದೇವಿ ದುಡ್ಡಿನ ಮಳೆಯಲ್ಲಿ ಸುರಿಸುತ್ತಾಳೆ, ಏನು ಮಾಡಬೇಕು ಗೊತ್ತೇ?

Tulasi Benefits: ತುಳಸಿಯನ್ನು ಪೂಜೆ ಮಾಡಿದರೆ ಲಕ್ಷ್ಮಿ ದೇವಿಗೆ ಬಹಳ ತೃಪ್ತಿಯಾಗುತ್ತದೆ ಎನ್ನುವ ಮಾತು ಜ್ಯೋತಿಷ್ಯಾಸ್ತ್ರದಲ್ಲಿ ಇದೆ. ಯಾಕೆಂದರೆ ತುಳಸಿ ವಿಷ್ಣುಗೆ ಪ್ರಿಯವಾಗಿರುವಂತದ್ದು ಅಂದಮೇಲೆ ವಿಷ್ಣು ಮಹಾಲಕ್ಷ್ಮಿಗೆ ಪ್ರಿಯ. ಆದ್ದರಿಂದ ಯಾರು ತುಳಸಿ ಗಿಡವನ್ನು ಪೂಜಿಸುತ್ತಾರೋ ಅವರಿಗೆ ಮಹಾ ವಿಷ್ಣು ಕೃಪೆ ಮಾತ್ರವಲ್ಲದೆ ಲಕ್ಷ್ಮಿ ದೇವಿಯು ಕೂಡ ಒಲಿಯುತ್ತಾಳೆ ಎನ್ನುವ ನಂಬಿಕೆ ಇದೆ. ಹಿಂದೂ ಸುಪ್ರದಾಯದಲ್ಲಿ ತುಳಸಿ ಗಿಡಕ್ಕೆ ದಿನವೂ ಪೂಜೆ ಮಾಡುವುದನ್ನು ಸಂಪ್ರದಾಯವಾಗಿ ರೂಡಿಸಿಕೊಂಡು ಬರಲಾಗಿದೆ. ಮನೆಯಲ್ಲಿ ತುಳಸಿ ಇದ್ದರೆ ಸಂತೋಷ ಸಮೃದ್ಧಿ ತುಂಬಿ ತುಳುಕುತ್ತದೆ ಎನ್ನುವ ನಂಬಿಕೆ ಇದೆ. ನೀವು ಈ ರೀತಿ ತುಳಸಿಯನ್ನು ಬಳಸಿದರೆ ನಿಮಗೆ ಜೀವನದಲ್ಲಿ ಬೇಕಿರುವ ಎಲ್ಲಾ ಸುಖ, ಸಂತೋಷ, ನೆಮ್ಮದಿ ಎಲ್ಲವೂ ಸಿಗುತ್ತದೆ.

ನಕಾರಾತ್ಮಕ ಶಕ್ತಿ ಓಡಿಸಲು: ನಾಲ್ಕೈದು ತುಳಸಿ ಎಲೆಗಳನ್ನು ತೆಗೆದುಕೊಂಡು ಅದನ್ನು ತೊಳೆದು ಒಂದು ನೀರು ತುಂಬಿದ ಇದ್ದಾಳೆ ಪಾತ್ರೆಯಲ್ಲಿ ಹಾಕಿ. ದಿನದ ಸ್ನಾನಾದಿ ಶುದ್ದಿಗಳು ಮುಗಿದ ನಂತರ ಈ ನೀಡಲು ಮನೆಯ ಪ್ರಧಾನ ಬಾಗಿಲಿಗೆ ಸಿಂಪಡಿಸಿ. ಇದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.

ಎಲ್ಲಾ ಸಮಸ್ಯೆಗೂ ಇದೆ ಪರಿಹಾರ:

ತುಳಸಿ ಗಿಡಕ್ಕೆ ಮಧ್ಯಭಾಗದಲ್ಲಿ ಮಂಜರಿ ಬೆಳೆಯುವುದನ್ನು ನೀವು ಕಾಣಬಹುದು. ಮಂಜರಿ ಬೆಳೆದರೆ (ತುಳಸಿ ಬೀಜ -ತೊಟ್ಟು) ಮಂಗಳಕರಯೆಂದು ಹೇಳಲಾಗುತ್ತದೆ ಹಾಗಾಗಿ ಮಹಾವಿಷ್ಣುಗೆ ತುಳಸಿ ಎಲೆಗಳ ಜೊತೆಗೆ ತುಳಸಿ ಮಂಜರಿಯನ್ನು ಕೂಡ ಅರ್ಪಿಸಿದರೆ ಮನೆಯಲ್ಲಿ ಧನ ಕನಕಗಳು ತುಂಬಿ ತುಳುಕಾಡುತ್ತವೆ. ಗಂಗಾಜಲದಲ್ಲಿ ತುಳಸಿಯನ್ನು ಹಾಕಿ ಉತ್ತರ ದಿಕ್ಕಿನಲ್ಲಿ ಇಡಬೇಕು ನಂತರ ಇಡೀ ಮನೆಗೆ ಈ ನೀರನ್ನು ಸಿಂಪಡಿಸಬೇಕು ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.

ತುರ್ತು ಲಾಭ: ನನಗೆ ಕೂಡಲೇ ಯಾವುದಾದರೂ ಕೆಲಸ ಆಗಬೇಕು ಎಂದಿದ್ದರೆ ತುಳಸಿ ಕೊಂಬೆಗಳನ್ನು ಸ್ನಾನ ಮಾಡುವ ನೀರಿಗೆ ಹಾಕಿ ಅದನ್ನು ಸ್ನಾನ ಮಾಡಿದರೆ ಮಾನಸಿಕವಾಗಿ ನೆಮ್ಮದಿ ದೊರೆಯುತ್ತದೆ. ಅದರಲ್ಲೂ ಅಮಾವಾಸ್ಯೆಯ ದಿನ ಸ್ನಾನ ಮಾಡುವ ನೀರಿಗೆ ತುಳಸಿ ದಳಗಳನ್ನು ಹಾಕಿ ಸ್ನಾನ ಮಾಡುವುದು ಬಹಳ ಒಳ್ಳೆಯದು ಇದರಿಂದ ಸಾಕಷ್ಟು ನೆಮ್ಮದಿ ಕೂಡ ದೊರೆಯುತ್ತದೆ ಹಿಡಿದ ಕೆಲಸವು ಸಕ್ಸಸ್ ಆಗುತ್ತದೆ.

ಆರ್ಥಿಕ ಲಾಭಕ್ಕಾಗಿ: ತುಳಸಿಯ ಒಣಗಿದ ಎಲೆಗಳನ್ನು ಒಂದು ಶುದ್ಧವಾದ ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಬೇಕು ನಂತರ ಅದನ್ನು ಹಣ ಇಡುವ ಸ್ಥಳದಲ್ಲಿ ಅಥವಾ ನಿಮ್ಮ ವಾರ್ಡ್ರೋಬ್ ನಲ್ಲಿ ಇಡಬೇಕು. ಈ ರೀತಿ ಮಾಡಿದರೆ ಲಕ್ಷ್ಮಿ ದೇವಿಯ ಆಶೀರ್ವಾದ ನಿರಂತರವಾಗಿ ನಿಮ್ಮ ಮೇಲೆ ಇರುತ್ತದೆ.

ಜಾತಕ ದೋಷ ಪರಿಹಾರ: ವ್ಯಕ್ತಿಯ ಜಾತಕದಲ್ಲಿ ಗ್ರಹ ದೋಷವಿದ್ದರೆ. ತುಳಸಿಯನ್ನು ಪೂಜಿಸಿದ ನಂತರ ಅದರ ಸಣ್ಣ ಬೇರನ್ನು ತೆಗೆದುಕೊಂಡು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಅದನ್ನು ತೋಳಿಗೆ ಕಟ್ಟಿಕೊಳ್ಳಬೇಕು. ಇದನ್ನು ಮಾಡುವುದರಿಂದ ಗ್ರಹ ದೋಷ ಇದ್ದರು ನಿವಾರಣೆಯಾಗಿ ಮಹಾವಿಷ್ಣು ಲಕ್ಷ್ಮಿಯರ ಅನುಗ್ರಹ ನಿಮಗೆ ಸಿಗುತ್ತದೆ.

Comments are closed.