Kannada Serial: ಲಕ್ಷ್ಮಿ ಬಾರಮ್ಮ ಸಿರಿಯಲ್ ವೀಕ್ಷಕರಿಗೆ ಟೆನ್ಶನ್; ಪ್ರೇಕ್ಷಕರ ಇಷ್ಟವಾದ ನಟಿ ಇನ್ನು ಈ ಧಾರಾವಾಹಿಯಲ್ಲಿ ನಟಿಸಲ್ಲ, ಯಾರು ಗೊತ್ತಾ?

Kannada Serial: ಕಲರ್ಸ್ ಕನ್ನಡ(Colours kannada) ದಲ್ಲಿ ಎಲ್ಲರೂ ಮೆಚ್ಚುವಂತಹ ಧಾರವಾಹಿಗಳಲ್ಲಿ ಭಾಗ್ಯಲಕ್ಷ್ಮಿ ಕೂಡ ಒಂದು. ಭಾಗ್ಯಲಕ್ಷ್ಮಿ (Bhagya Lakshmi) ಯ ಇನ್ನೊಂದು ಪಾರ್ಟ್ ಲಕ್ಷ್ಮಿ ಬಾರಮ್ಮ ಎನ್ನುವ ಧಾರವಾಹಿಯಾಗಿ ಪ್ರಸಾರವಾಗುತ್ತಿದೆ ಲಕ್ಷ್ಮಿ ಬಾರಮ್ಮ (Lakshmi bharamma) ಧಾರವಾಹಿಯಲ್ಲಿ ಪ್ರತಿಯೊಂದು ಪಾತ್ರವನ್ನು ಕೂಡ ಜನ ಬಹುವಾಗಿ ಇಷ್ಟಪಟ್ಟಿದ್ದಾರೆ. ಅದರಲ್ಲೂ ಲಕ್ಷ್ಮಿ ಹಾಗೂ ವೈಷ್ಣವ ಜೋಡಿ ಜನರಿಗೆ ಹೆಚ್ಚು ಇಷ್ಟವಾಗುತ್ತಿದೆ. ಇವರಿಬ್ಬರ ನಡುವೆ ಈಗ ತಾನೆ ಪ್ರೀತಿ ಚಿಗುರೊಡೆಯುತ್ತಿದ್ದು ಅದನ್ನು ಹಾಳು ಮಾಡಲು ಕೀರ್ತಿ ಶತಾಯುಗದಾಯ ಪ್ರಯತ್ನಿಸುತ್ತಿದ್ದಾಳೆ.

ಕೀರ್ತಿ ಏನೆಲ್ಲಾ ಟ್ರೈ ಮಾಡಿದರೂ ವೈಷ್ಣವ್ ಹಾಗೂ ಲಕ್ಷ್ಮಿ ಹತ್ತಿರವಾಗುತ್ತಲೇ ಇದ್ದಾರೆ ಈ ನಡುವೆ ಕೀರ್ತಿ ಕಾವೇರಿ ಆಂಟಿ ತನಗೆ ಮೋಸ ಮಾಡಿದ್ದಾರೆ ಎಂದು ಕೂಗಾಡುತ್ತಿದ್ದಾಳೆ. ಸಂದರ್ಭ ಸಿಕ್ಕಾಗಲಿಲ್ಲ ಕಾವೇರಿ ಮೇಲೆ ಕೂಗಾಡುತ್ತಾಳೆ. ಈ ನಡುವೆ ಕಾವೇರಿ ಟೆನ್ಶನ್ ನೋಡಿ ಸುಪ್ರೀತಾ ಸಕ್ಕತ್ ಎಂಜಾಯ್ ಮಾಡುತ್ತಿದ್ದಾಳೆ. ಜೊತೆಗೆ ಕೀರ್ತಿಯನ್ನು ರೊಚ್ಚಿಗೆಬ್ಬಿಸಲು ಎನೆಲ್ಲಾ ಕೆಲಸವನ್ನು ಮಾಡಬೇಕು ಎಲ್ಲವನ್ನು ಮಾಡುತ್ತಿದ್ದಾಳೆ.

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಪಾತ್ರವನ್ನು ಬದಲಾಗಲಿದೆ ಬಹುಶಃ ಇದು ಜನರಲ್ಲಿ ಬೇಸರ ಮೂಡಿಸಬಹುದು. ಯಾಕೆಂದ್ರೆ ಬದಲಾಗುತ್ತಿರುವ ಪಾತ್ರ ಬೇರೆ ಯಾವುದು ಅಲ್ಲ ಕೀರ್ತಿ ಆಗಿ ಅಭಿನಯಿಸುತ್ತಿದ್ದ ತನ್ವೀ ರಾವ್ ಧಾರಾವಾಹಿಯಿಂದ ಹೊರ ನಡೆಯುತ್ತಿದ್ದಾರೆ. ಕೀರ್ತಿ ಅವರ ಮುದ್ದಾದ ಮುಖ ಅವರ ಸ್ಮೈಲ್ (smile)  ಜನರಿಗೆ ಬಹಳ ಇಷ್ಟವಾಗಿತ್ತು ಅವರ ಕೋಪ ಬೇಸರ ಎಲ್ಲವನ್ನು ತೋರಿಸುವ ಅವರ ಅಭಿನಯದ ಪರಿ ಜನರು ಹೆಚ್ಚು ಇಷ್ಟಪಟ್ಟಿದ್ದರು. ಕೀರ್ತಿ ಅವರ ಪಾತ್ರಕ್ಕೆ ತನ್ವೀರಾವ್ ಅವರನ್ನು ಹೊರತುಪಡಿಸಿ ಬೇರೆ ಯಾರು ಸೂಟ್ ಆಗುವುದಿಲ್ಲ ಎನ್ನುವಷ್ಟರ ಮಟ್ಟಕ್ಕೆ ಅವರು ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ.

ಬಾಲಿವುಡ್ ನಲ್ಲಿ ಮಿಂಚಿದ ನಟಿ ತನ್ವಿ ರಾವ್ (Tanvi Rao)

ತನ್ಮೀರಾವ್ ಅತ್ಯುತ್ತಮ ನೃತ್ಯಗಾರ್ತಿ ಇವರು ಕ್ಲಾಸಿಕಲ್ ನೃತ್ಯವನ್ನು ಕಲಿತಿದ್ದಾರೆ. ಕೂಚಿ ಪುಡಿಯಲ್ಲಿ ಪರಿಣಿತಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬಾಲಿವುಡ್ ನಲ್ಲಿಯೂ ಈ ನಟಿ ಮಿಂಚಿದ್ದಾರೆ. ಬಾಲಿವುಡ್ ಸಿನಿಮಾದಲ್ಲಿಯೂ ಅಭಿನಯಿಸಿರುವ ತನ್ವಿರಾವ್ ಆಕೃತಿ ಎನ್ನುವ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು ಅದೇ ರೀತಿ ರಾಧೆ ಶಾಮ ಎನ್ನುವ ಧಾರವಾಹಿ ಹಾಗೂ ತಮಿಳುನಾಡು ಜಮೀಲ ಎನ್ನುವ ಧಾರಾವಾಹಿಯಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಮಾಧುರಿ ದೀಕ್ಷಿತ್ ಅವರ ‘ಗುಲಾಬ್ ಗ್ಯಾಂಗ್’ ನಲ್ಲಿ ತನ್ವಿರಾವ್ ಕೂಡ ಒಬ್ಬರಾಗಿದ್ದರು. ತನ್ವಿ ರಾವ್ ಗುಲ್ಮೊಹರ್ ಎನ್ನುವ ಸಿನಿಮಾದಲ್ಲಿ ದೀಪಿಕಾ ಎನ್ನುವ ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ.

ತನ್ವೀರ್ ಅವರ ಧಾರಾವಾಹಿ ಬಿಟ್ಟಿದ್ದು ಯಾಕೆ

ಕಥಕ್ ಹಾಗು ಸೆಮಿ ಕ್ಲಾಸಿಕಲ್ ನೃತ್ಯವನ್ನು ಅಭ್ಯಾಸ ಮಾಡುತ್ತಿರುವ ತನ್ವೀರ್ ರಾವ್ ಕಲರ್ಸ್ ಕನ್ನಡದ ಮನೆ ಮಗಳೇ ಆಗಿ ಹೋಗಿದ್ದರು. ವೈಷ್ಣವ್ ಅವರನ್ನು ಮುದ್ದಾಗಿ ವೈಸ್ ಎಂದು ಕರೆಯುತ್ತಾ ಅತಿಯಾಗಿ ಪ್ರೀತಿ ಮಾಡುತ್ತಿದ್ದ ಕೀರ್ತಿ ಪಾತ್ರದಲ್ಲಿ ತನ್ವೀರ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಈಗ ಅವರಿಗೆ ಇನ್ನೊಂದು ಉತ್ತಮ ಅವಕಾಶ ಸಿಕ್ಕಿದ್ದು ಆ ಕಾರಣಕ್ಕಾಗಿ ಧಾರಾವಾಹಿಯಿಂದ ಹೊರ ನಡೆಯುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಯು ಕೀರ್ತಿ ಪಾತ್ರಧಾರಿಯಾಗಿ ಈಗ ತನ್ವೀರಾವ್ ಅವರ ಬದಲಿಗೆ ಬೇರೆ ಯಾವ ನಟಿ ಬರುತ್ತಾರೆ ಎನ್ನುವ ಕುತೂಹಲ ಭಾಗ್ಯಲಕ್ಷ್ಮಿ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

Comments are closed.