Kannada Serial: ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಒಳಗೊಳಗೇ ಸಂಚು ಮಾಡುವ ಸುಪ್ರಿತಾ, ನಿಜ ಜೀವನದಲ್ಲಿ ಟೀಚರ್ ಆಗಿ ವೃತ್ತಿ ನಿರ್ವಹಿಸಿದವರು ಎನ್ನುವುದು ನಿಮಗೆ ಗೊತ್ತೇ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಷಯ

Kannada Serial: ಧಾರಾವಾಹಿ ಅಂದ್ರೆ ಸಾಕಷ್ಟು ನಟ ನಟಿಯರು ಇರುತ್ತಾರೆ ಇತ್ತೀಚಿಗಂತೂ ಹೊಸಬರ ಪರಿಚಯ ಕೂಡ ಆಗುತ್ತಿದೆ. ತಾವು ಮೊದಲ ಬಾರಿಗೆ ನಟಿಸುತ್ತಿದ್ದೇವೆ ಎಂದು ಅನ್ನಿಸದ ರೀತಿಯಲ್ಲಿ ಪಕ್ಕ ನಟನೆಯನ್ನು ತೋರಿಸುತ್ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ಸುಪ್ರೀತ ಪಾತ್ರದಲ್ಲಿ ನೆಗೆಟಿವ್ ಕ್ಯಾರೆಕ್ಟರ್ ಒಂದನ್ನು ನಿಭಾಯಿಸಿದ್ದಾರೆ ರಜನಿ ಪ್ರವೀಣ.

ರಜನಿ ಪ್ರವೀಣ್ ಅಂದ್ರೆ ಎಲ್ರಿಗೂ ಗೊತ್ತಾಗೋದಿಲ್ಲ ಆದರೆ ಲಕ್ಷ್ಮೀ ಬಾರಮ್ಮ ನ್ಯೂ ಸೀಸನ್ ಅಂದ್ರೆ ಎಲ್ಲರಿಗೂ ಗೊತ್ತಾಗುತ್ತೆ. ಪಾತ್ರವನ್ನು ವಿಭಾಯಿಸುವ ಸುಪ್ರೀತ, ಅತ್ತಿಗೆ ಕಾವೇರಿಯನ್ನು ಕೆಣಕುವುದರಲ್ಲಿ ಬ್ಯುಸಿ ಆಗಿರುತ್ತಾರೆ. ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುವ ಸುಪ್ರಿತ ಅಲಿಯಾಸ್ ರಜನಿ ಪ್ರವೀಣ್ ಅವರ ಹಿನ್ನೆಲೆ ನಿಮಗೆ ಗೊತ್ತಾ.

ಉದ್ಯಮಿ ಆಗಿದ್ದವರು ಈ ಕೆಲಸ ಬೋರ್ ಬಂತು ಎನ್ನುವ ಕಾರಣಕ್ಕೆ ಸಾಫ್ಟ್ವೇರ್ ಬಿಟ್ಟು, ಯಾಕ್ ಬೋರ್ಡ್ ನಲ್ಲಿ ಚಾಕ್ ಪೀಸ್ ಹಿಡಿದು ಪಾಠ ಮಾಡುವ ಟೀಚರ್ ಆದ್ರು. ಇವರಿಗೆ ಯಾವುದೇ ನಟನೆಯ ಹಿನ್ನೆಲೆ ಇಲ್ಲ ಆದರೆ ಯಾರು ಸಜೆಸ್ಟ್ ಮಾಡಿದ್ರು ಎನ್ನುವ ಕಾರಣಕ್ಕೆ ಉಷಾ ಭಂಡಾರಿ ನಟನಾ ತರಬೇತಿ ಸೇರಿ, ಅಭಿನಯಿಸಿದ ಖ್ಯಾತಿ ಇವರದು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹರ ಹರ ಮಹಾದೇವ ಧಾರಾವಾಹಿಯ ಮೂಲಕ ನಟನಾ ಪ್ರಪಂಚಕ್ಕೆ ಕಾಲಿಟ್ಟರು. ಅಲ್ಲಿಂದ ಕನ್ನಡದಿಂದ ತಮಿಳಿನವರೆಗೂ ನಟಿ ರಜನಿ ಪ್ರವೀಣ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಪಡೆದರು.

ರಜನಿ ಪ್ರವೀಣ್ ಮೂಲತಃ ಬೆಂಗಳೂರಿನವರೇ! ಇವರಿಗೆ ಮದುವೆ ಆಗಿ 12 ವರ್ಷ ಕಳೆದಿದ್ದು ಹತ್ತು ವರ್ಷದ ಮಗ ಕೂಡ ಇದ್ದಾನೆ. ಬರೊಬ್ಬರಿ 120 ಕೆ.ಜಿ ತೂಕ ಇದ್ದ ರಜನಿ ಈಗ ತೂಕ ಇಳಿಸಿಕೊಂದು ಸಕ್ಕತ್ ಸ್ಲಿಮ್ ಆಗಿದ್ದಾರೆ. ಈಗಂತು ಇವರ ನೆಗೆಟಿವ್ ಪಾತ್ರವನ್ನು ಜನ ಹೆಚ್ಚಾಗಿ ಇಷ್ಟಪಡುತ್ತಾರೆ. ಇನ್ನು ಶೂಟಿಂಗ್ ಸೆಟ್ ನಲ್ಲಿ ರಜನಿ ಅಂದ್ರೆ ಎಲ್ಲರಿಗೂ ಇಷ್ಟವಂತೆ. ನಟನೆಯ ಸೊಗಡೂ ಗೊತ್ತಿಲ್ಲದ ರಜನಿ ನಟಾನೆಯನ್ನು ಕಲಿತು ಇಂದ್ ಕಿರುತೆರೆಯ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ

Comments are closed.