Kannada astrology: ಮುಂದಿನ ಒಂದುವರೆ ವರ್ಷ ಯಾವುದಕ್ಕೂ ಹಿಂಜರಿಯಲೇಬೇಡಿ, ಮುನ್ನುಗ್ಗಿ ಮುಟ್ಟಿದ್ದೆಲ್ಲಾ ಚಿನ್ನ ಆಗುವ ಸಮಯ ಇದು!

Kannada astrology: ಇದೇ ಬರುವ ಅಕ್ಟೋಬರ್ 30ರಂದು ರಾಹು ಮಂಗಳನ ಸ್ವಂತ ರಾಶಿ ಆಗಿರುವ ಮೇಷ ರಾಶಿಯಿಂದ ಆಚೆ ಬರುತ್ತಾನೆ ಹಾಗೂ ಮೀನ ರಾಶಿಯನ್ನು ಸೇರುತ್ತಾನೆ. ರಾಹುವಿನ ರಾಶಿ ಬದಲಾವಣೆ ಹಲವರ ಜೀವನದಲ್ಲಿ ಹಲವು ಬದಲಾವಣೆಗಳನ್ನು ತರಲಿದೆ. ಅದರಲ್ಲೂ ಈ ಮೂರು ರಾಶಿಯವರಿಗೆ ಮುಂದಿನ ಒಂದುವರೆ ವರ್ಷಗಳ ಕಾಲ ಆಯಸ್ಸು, ಆರೋಗ್ಯ ಸಂಪತ್ತು ಎಲ್ಲವೂ ಸಿಗಲಿದೆ. ಜೀವನದಲ್ಲಿ ಯಾವುದೇ ಕಷ್ಟವೂ ಇಲ್ಲದೆ ಯಶಸ್ಸನ್ನು ಸಾಧಿಸಬಹುದಾಗಿದೆ. ಅದೃಷ್ಟವಂತ ರಾಶಿಗಳು ಯಾವವು ನೋಡೋಣ.

ವೃಷಭ ರಾಶಿ: ಇಷ್ಟು ದಿನ ಮಾಡಬೇಕು ಅಂದುಕೊಂಡಿದ್ದ ಕೆಲಸಗಳೆಲ್ಲವೂ ಈಡೇರುತ್ತವೆ. ವಿದೇಶಿ ಪ್ರಯಾಣ ಮಾಡುವ ಸಾಧ್ಯತೆ ಇದೆ. ರಾಜಕೀಯದಲ್ಲಿ ತೊಡಗಿಕೊಳ್ಳುವವರಿಗೆ ಇದು ಸಕಾಲ ಗೌರವ ಹಾಗೂ ಮರ್ಯಾದೆ ಪ್ರಾಪ್ತವಾಗುತ್ತದೆ ಹಾಗಾಗಿ ಜೀವನದಲ್ಲಿ ಇನ್ನಷ್ಟು ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ.

ಕನ್ಯಾ ರಾಶಿ: ರಾಹುವಿನ ಪಥ ಬದಲಾವಣೆಯಿಂದ ಕನ್ಯಾ ರಾಶಿಯವರಿಗೆ ಆರ್ಥಿಕವಾಗಿ ಸುಯೋಗ ಆರಂಭವಾಗಲಿದೆ ಎನ್ನಬಹುದು. ನವ ವೈವಾಹಿಕ ಜೀವನ ಆರಂಭಿಸುವವರಿಗೆ ಸಕಾಲ. ಇಲ್ಲಿಯವರಿಗೆ ಎದುರಾಗಿದ್ದ ಎಲ್ಲಾ ಕಷ್ಟಗಳು ಕೂಡ ನಿವಾರಣೆ ಆಗುತ್ತದೆ.

ವೃಶ್ಚಿಕ ರಾಶಿ: ಸಾಲದಿಂದ ಬೇಸೆತ್ತು ಹೋಗಿದ್ದರೆ ಈಗ ಮುಕ್ತಿ ಪಡೆದುಕೊಳ್ಳುವ ಕಾಲ. ಉದ್ಯೋಗದಲ್ಲಿ ಸ್ಥಾನ ಬಲಗೊಳ್ಳುತ್ತದೆ. ಮಕ್ಕಳ ಅಧ್ಯಯನದ ಯಶಸ್ಸು ನಿಮ್ಮ ಮುಖದಲ್ಲಿ ಮಂದಹಾಸ ಮೂಡಿಸುತ್ತದೆ ವಿದೇಶಕ್ಕೆ ಪ್ರಯಾಣ ಹೋಗುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ರಾಹುವಿನ ಪಥ ಬದಲಾವಣೆ ಕೆಲವು ರಾಶಿಯವರಿಗೆ ವಿಶೇಷ ಪ್ರಯೋಜನ ನೀಡಲಿದೆ.

Comments are closed.