Deepavali 2023: ದೀಪಾವಳಿ ಆರಂಭವಾಗುತ್ತಲೇ ಈ ಐದು ರಾಶಿಯವರಿಗೆ ಹಣದ ಮಳೆಯನ್ನೇ ಸುರಿಸಲಿದ್ದಾಳೆ ಲಕ್ಷ್ಮಿ ದೇವಿ! ನೀವೇ ಅದೃಷ್ಟವಂತರು

Deepavali 2023: ಭಾರತವು ಹಿಂದೂ ರಾಷ್ಟ್ರ. ಹಿಂದೂಗಳಲ್ಲಿ ಬಹುತೇಕರು ಆಸ್ತಿಕರಾಗಿದ್ದಾರೆ. ದೇವರನ್ನು ನಂಬುತ್ತಾರೆ. ಯಾವುದೇ ಒಂದು ಒಳ್ಳೆಯ ಕೆಲಸ ಪ್ರಾರಂಭಿಸಬೇಕಿದ್ದರೆ ಮುಹೂರ್ತವನ್ನು ನೋಡುತ್ತಾರೆ. ಹಾಗಾಗಿ ನಮ್ಮ ದೇಶದಲ್ಲಿ ಹೆಚ್ಚಿನ ಜನರು ಜ್ಯೋತಿಷ್ಯವನ್ನು ನಂಬುತ್ತಾರೆ ಎಂದು ಹೇಳಬಹುದು. ಈ ಜ್ಯೋತಿಷ್ಯ ವೈಜ್ಞಾನಿಕವಾಗಿದೆ. ಗ್ರಹಗಳ ಚಲನೆಯನ್ನು ಆಧರಿಸಿ ಹೇಳಲಾಗುತ್ತದೆ. ಕೆಲವೊಂದು ರಾಶಿಯವರಿಗೆ ಈಗ ಒಳ್ಳೆಯ ಕಾಲ ಬಂದಿದ್ದು, ಅವರು ಮಾಡುವ ಕೆಲಸದಲ್ಲಿ ಯಶಸ್ಸು, ಧನ ಸಂಪತ್ತನ್ನು ವೃದ್ಧಿಸಿಕೊಳ್ಳಲಿದ್ದಾರೆ. ಆ ರಾಶಿಗಳು ಯಾವುದೆಂದು ಈಗ ತಿಳಿಯೋಣ.

ತುಲಾ ರಾಶಿಯಲ್ಲಿ ಮಂಗಳ ಮತ್ತು ಕೇತುಗಳ ಅಶುಭ ಸಂಯೋಗವು ಅಕ್ಟೋಬರ್ ೩೦ರಂದು ಕೊನೆಗೊಳ್ಳಲಿದೆ. ಕೇತುವು ಕನ್ಯಾ ರಾಶಿ ಪ್ರವೇಶಿಸಲಿದ್ದು, ಇದರಿಂದ ತುಲಾ ರಾಶಿಯ ಮೇಲೆ ಸಂಯೋಗ ಗೊಂಡಿದ್ದ ಕೇತುವಿನ ಅಶುಭ ಸಂಯೋಗ ಕೊನೆಗೊಳ್ಳಲಿದೆ. ಇದರಿಂದಾಗಿ ಈ ಐದು ರಾಶಿಯವರಿಗೆ ಉತ್ತಮ ಸಮಯ ಆಗಮನವಾಗಿದೆ ಎಂದು ಹೇಳಬಹುದು.

ಮೇಷ ರಾಶಿ:

ಮೇಷ ರಾಶಿಯಲ್ಲಿ ಜನಿಸಿದವರು ಮಂಗಳ ಹಾಗೂ ಕೇತುವಿನ ಸಂಯೋಗದಿಂದ ಬಹಳ ಉತ್ತಮ ಫಲಗಳನ್ನು ಪಡೆಯಲಿದ್ದಾರೆ. ಕೆಲಸ ಸಿಕ್ಕಿಲ್ಲ ಎನ್ನುವವರಿಗೆ ಅವರು ಬಯಸಿದ ಕೆಲಸ ಸಿಗುವ ಸಾಧ್ಯತೆಗಳಿವೆ. ಕಚೇರಿಯಲ್ಲಿ ಭಡ್ತಿ ಸಿಗಲಿಲ್ಲ ಎಂದು ಕೊರಗುತ್ತಿದ್ದವರಿಗೆ ಈ ಸಮಯದಲ್ಲಿ ಭಡ್ತಿ ಸಿಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.  ಹಣಕಾಸಿನ ಹರಿವು ಬಹಳ ಉತ್ತಮವಾಗಿರುತ್ತದೆ. ಅದರಲ್ಲಿಯೂ ಹೂಡಿಕೆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇದು ಬಹಳ ಪ್ರಶಸ್ತ ಸಮಯವಾಗಿದೆ. ಜನರು ನಿಮ್ಮ ಮಾತನ್ನು ಆಸಕ್ತಿಕರವಾಗಿ ಕೇಳಿಸಿಕೊಳ್ಳುತ್ತಾರೆ. ಮಾರ್ಕೆಟಿಂಗ್, ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಯಶಸ್ಸು ಗಳಿಸುವ ಸಾಧ್ಯತೆಗಳಿವೆ. ಇದರ ಜೊತೆ ಕುಟುಂಬ ಸದಸ್ಯರ ಜೊತೆ ಪ್ರವಾಸ ಮಾಡುವ ಮೂಲಕ ಸಮಯವನ್ನು ಉತ್ತಮವಾಗಿ ಉಪಯೋಗಿಸುವ ಯೋಗವಿದೆ.

ವೃಷಭ ರಾಶಿ:

ವೃಷಭ ರಾಶಿ ವೃಷಭ ಲಗ್ನದಲ್ಲಿ ಜನಿಸಿದವರಿಗೆ ಧನಾತ್ಮಕ ಶಕ್ತಿ ಹೆಚ್ಚಾಗಲಿದೆ. ವೃಷಭ ರಾಶಿಯಲ್ಲಿ ಜನಿಸಿದವರು ಈ ಸಂದರ್ಭದಲ್ಲಿ ಬಹಳ ಅದೃಷ್ಟವನ್ನು ಪಡೆಯಲಿದ್ದಾರೆ. ಅರ್ಧಕ್ಕೆ ನಿಂತಿದ್ದ ಮನೆ ಕಾಮಗಾರಿ, ಅಥವಾ ಕಟ್ಟಡ ಕಾಮಗಾರಿ ಕೆಲಸಗಳು ಈಗ ಪೂರ್ಣಗೊಳ್ಳಲಿದೆ. ಯಾವ ರೀತಿ ಖರ್ಚು ಇರುತ್ತದೆಯೋ ಅದೇ ರೀತಿ ನಿಮ್ಮ ಆದಾಯವೂ ಇರಲಿದೆ. ವಿದ್ಯಾರ್ಥಿಗಳಿಗೂ ಇದು ಬಹಳ ಒಳ್ಳೆಯ ಸಮಯವಾಗಿದೆ. ವಿದ್ಯಾರ್ಥಿಗಳು ತಮ್ಮ ಕಠಿಣ ಶ್ರಮದ ಪ್ರತಿಫಲ ಪಡೆಯಲಿದ್ದಾರೆ.

ಮಿಥುನ ರಾಶಿ:

ಮಿಥುನ ರಾಶಿಯವರಿಗೂ ಮಂಗಳ ಕೇತುವಿನ ಸಂಯೋಗದಿಂದ ಬಹಳ ಉತ್ತಮ ಫಲಗಳನ್ನು ಪಡೆಯಲಿದ್ದಾರೆ. ಇಲ್ಲಿಯವರೆಗೆ ಆರ್ಥಿಕವಾಗಿ ಬಹಳ ಸಮಸ್ಯೆ ಎದುರಿಸಿದ್ದೀರಿ. ಈಗ ಈ ಕಷ್ಟಗಳೆಲ್ಲ ಕಳೆಯುವ ಸಮಯವಾಗಿದೆ. ಹಣದ ಹರಿವು ಉತ್ತಮವಾಗಲಿದೆ. ನೀವು ಹೂಡಿಕೆ ವ್ಯವಹಾರ ಆರಂಭಿಸಬೇಕು ಎಂದಿದ್ದರೆ ಇದು ಒಳ್ಳೆಯ ಸಮಯವಾಗಿದೆ. ಈಗ ಆರಂಭಿಸಿದ್ದಲ್ಲಿ ಒಳ್ಳೆಯ ಲಾಭ ಗಳಿಸುತ್ತೀರಿ. ಪೂರ್ವಿಕರ ಆಸ್ತಿಯಿಂದಲೂ ನಿಮಗೆ ಲಾಭವಾಗುವ ಸಾಧ್ಯತೆಗಳಿವೆ.

ತುಲಾ ರಾಶಿ:

ತುಲಾ ರಾಶಿಯವರು ಸಹ ಇಲ್ಲಿಯ ವರೆಗೆ ಬಹಳ ಕಷ್ಟಪಟ್ಟಿದ್ದು, ಇದೀಗ ಸುಖ ಅನುಭವಿಸುವ ಸಮಯ ಬಂದಿದೆ. ಬಹಳ ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಆದರೆ ಸಂಬಳ ಹೆಚ್ಚು ಮಾಡಿಲ್ಲ ಅಥವಾ ಇತರೆ ಕಾರಣಕ್ಕಾಗಿ ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಇದು ಒಳ್ಳೆಯ ಸಂದರ್ಭವಾಗಿದೆ. ನೀವು ಈ ಸಮಯದಲ್ಲಿ ಪ್ರಯತ್ನ ಪಟ್ಟರೆ ನೀವು ಉದ್ಯೋಗದಲ್ಲಿ ಬದಲಾವಣೆ ನಿಶ್ಚಿತ. ನಿಮ್ಮದೆ ಆದ ಸ್ವಂತ ಉದ್ಯಮ ಆರಂಭಿಸಲು ಸುಸಂದರ್ಭವಾಗಿದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯ ಜನರು ಉದ್ಯೋಗದ ವಿಚಾರದಲ್ಲಿ ಒಳ್ಳೆಯ ಸುದ್ದಿ ಪಡೆಯಲಿದ್ದಾರೆ. ಆದರೆ ಅನಿರೀಕ್ಷಿತವಾಗಿ ಬಹಳ ದೊಡ್ಡ ವೆಚ್ಚ ಮಾಡುವ ಸಾಧ್ಯತೆಗಳಿವೆ. ಕ್ರಮೇಣ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ನಿಮಗೆ ಹಣದ ಹರಿವು ಉತ್ತಮವಾಗಿರಲಿದೆ. ಕುಟುಂಬ ಸದಸ್ಯರು, ಹಾಗೂ ಬಂಧು ಬಾಂಧವರ ಜೊತೆ ನಿಮ್ಮ ಸಂಬಂಧವೂ ವೃದ್ಧಿಸಲಿದೆ.

Comments are closed.