Shani Udaya Effect: ಕರ್ಮ ಫಲಗಳನ್ನು ಕೊಡುವ ಶನಿ ದೇವ ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದ್ದಾನೆ, ಇನ್ನೇನಿದ್ದರೂ ಝಣ ಝಣ ಕಾಂಚಾಣ!

Shani Udaya Effect: ಸ್ನೇಹಿತರೆ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಯಾವುದೇ ಗ್ರಹ ತನ್ನ ರಾಶಿಯನ್ನು ಪರಿವರ್ತನೆ ಮಾಡಿರುವ ಸಂದರ್ಭದಲ್ಲಿ ಪರಿಣಾಮವನ್ನು 12 ಗ್ರಹಗಳ ಮೇಲೆ ಕೂಡ ಬೀರುತ್ತದೆ. ಇನ್ನು ಫೆಬ್ರವರಿ 11ರಂದು ಕುಂಭ ರಾಶಿಯಲ್ಲಿ ಅಸ್ತಮಿಸಿರುವಂತಹ ಶನಿ ಮಾರ್ಚ್ 11 ರಂದು ಮತ್ತೆ ಉದಯಿಸಲಿದ್ದಾನೆ. ಈ ಸಂದರ್ಭದಲ್ಲಿ ಕೆಲವು ರಾಶಿಯವರಿಗೆ ಶುಭ ಫಲವನ್ನು ತಂದುಕೊಡಲಿದ್ದಾನೆ. ಶನಿ ಕೇವಲ ಕಷ್ಟಗಳನ್ನು ನೀಡುವಂತಹ ಗ್ರಹ ಅಥವಾ ದೇವತೆ ಎಂಬುದಾಗಿ ಸಾಕಷ್ಟು ಜನರು ಪರಿಗಣಿಸುತ್ತಾರೆ.

ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿರುವ ಒಂದು ವಿಚಾರ ಎಂದರೆ ಶನಿ ಕೇವಲ ಕರ್ಮದಾತ ಆಗಿದ್ದು ಕರ್ಮಗಳಿಗೆ ಅನುಸಾರವಾಗಿ ಶುಭ ಹಾಗೂ ಅಶುಭ ಫಲಗಳನ್ನು ಕರುಣಿಸುತ್ತಾನೆ. ಹಾಗಿದ್ರೆ ಬನ್ನಿ ಅದೃಷ್ಟದ ಲಾಭಗಳನ್ನು ಪಡೆದುಕೊಳ್ಳಲಿರುವಂತಹ ಆ ಅದೃಷ್ಟವಂತ ರಾಶಿಯವರು ಯಾರೆಂದು ತಿಳಿಯೋಣ.

 ಕುಂಭ ರಾಶಿ (Aquarius)

ಈ ವಿಶೇಷವಾದ ಯೋಗದ ಸಂದರ್ಭದಲ್ಲಿ ಕುಂಭ ರಾಶಿಯವರ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಶನಿ ದೇವರ ವಿಶೇಷ ಸಂಚಾರದಿಂದಾಗಿ ಕುಂಭ ರಾಶಿಯವರ ಜೀವನದಲ್ಲಿ ಸಾಕಷ್ಟು ಶುಭ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾದ ಶಶಪುರುಷ ಮಹಾ ಯೋಗ ಈ ಸಂದರ್ಭದಲ್ಲಿ ಕುಂಭ ರಾಶಿಯವರಿಗೆ ಪ್ರಾಪ್ತಿ ಆಗಲಿದ್ದು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಗೆಲುವನ್ನು ಕಾಣಲಿದ್ದಾರೆ. ವೃತ್ತಿ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಪ್ರಗತಿಯನ್ನು ಹೊಂದಲಿದ್ದಾರೆ.

 ಮಕರ ರಾಶಿ (Capricorn )

ಮಕರ ರಾಶಿಯವರ ಹಣದ ಮನೆಯಲ್ಲಿ ಶನಿದೇವನ ಉದಯ ಆಗಿರುವ ಕಾರಣದಿಂದಾಗಿ ಆರ್ಥಿಕ ಸಮಸ್ಯೆ ಖಂಡಿತವಾಗಿ ಯಾವುದೇ ಕಾರಣಕ್ಕೂ ಬರುವುದಿಲ್ಲ. ಸಾಕಷ್ಟು ಆರ್ಥಿಕ ಮೂಲಗಳು ಹಾಗೂ ಅವಕಾಶಗಳ ಬಾಗಿಲುಗಳು ತೆರೆದುಕೊಳ್ಳಲಿದ್ದು, ಯಾವುದೇ ಕಾರಣಕ್ಕೂ ನೀವು ಹಣ ಕಡಿಮೆ ಆಗ್ತಿದೆ ಅಥವಾ ಹಣಕ್ಕೆ ಯಾವುದೇ ದಾರಿ ಇಲ್ಲ ಅಂತ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಈಗಾಗಲೇ ಕೆಲಸ ಮಾಡುತ್ತಿರುವಂತಹ ಉದ್ಯೋಗಿಗಳಿಗೆ ಪ್ರಮೋಷನ್ ಸಿಗುತ್ತೆ ಹಾಗೂ ವ್ಯಾಪಾರ ಮಾಡುತ್ತಿರುವಂತಹ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭ ಸಿಗಲಿದೆ.

 ವೃಷಭ ರಾಶಿ (Taurus)

ತಾವು ಮಾಡುವಂತಹ ಕೆಲಸ ಹಾಗೂ ಉದ್ಯಮಗಳಲ್ಲಿ ವೃಷಭ ರಾಶಿಯವರ ಶುಭ ಸುದ್ದಿಯನ್ನು ಪಡೆದುಕೊಳ್ಳಲಿದ್ದಾರೆ. ವ್ಯಾಪಾರ ಕ್ಷೇತ್ರದಲ್ಲಿ ಹಿಂದೆಂದೂ ಮಾಡಿದಂತಹ ಸಾಧನೆಯನ್ನು ನೀವು ಮಾಡಲಿದ್ದೀರಿ. ಯಾವುದೇ ಕ್ಷೇತ್ರದಲ್ಲಿ ಹಣದ ಹೂಡಿಕೆಯನ್ನು ಮಾಡಿ ನಿಮಗೆ ಲಾಭ ಕಟ್ಟಿಟ್ಟಬುತ್ತಿಯಾಗಿದೆ. ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರ ಮೂಲಕ ಕೂಡ ದೊಡ್ಡ ಮಟ್ಟದಲ್ಲಿ ಆರ್ಥಿಕ ಲಾಭವನ್ನು ಸಂಪಾದನೆ ಮಾಡಬಹುದು. ಕೆಲಸ ಇಲ್ಲದೆ ಹೊಸ ಕೆಲಸಕ್ಕಾಗಿ ಕಾಯುತ್ತಿರುವಂತಹ ನಿರುದ್ಯೋಗಿಗಳಿಗೆ ಅವರು ಇಷ್ಟಪಡುವಂತಹ ಕೆಲಸಗಳು ಅವರದ್ದಾಗಲಿವೆ. ಸಾಕಷ್ಟು ವರ್ಷಗಳಿಂದ ಕಷ್ಟಪಡುತ್ತಿರುವ ನೀವು ಈ ಸಂದರ್ಭದಲ್ಲಿ ಯಶಸ್ಸನ್ನು ಪಡೆದುಕೊಳ್ಳಲಿದ್ದೀರಿ.

ಮುಂದಿಟ್ಟ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದೆ ಇಡೋದಕ್ಕೆ ಹೋಗ್ಬೇಡಿ ದೇವರ ಕೃಪೆಯಿಂದಾಗಿ ಶನಿಯ ಆಶೀರ್ವಾದದಿಂದಾಗಿ ನೀವು ಪ್ರಾರಂಭಿಸಿರುವಂತಹ ಹೊಸ ಕೆಲಸ ನಿಮಗೆ ಯಶಸ್ಸನ್ನು ನೀಡಲಿದೆ. ಹೊಸ ಆಸ್ತಿ ಹಾಗೂ ವಾಹನಗಳನ್ನು ಖರೀದಿ ಮಾಡುವಂತಹ ಅವಕಾಶ ಕೂಡ ನಿಮಗೆ ಸಿಗಲಿದೆ.

Comments are closed.