Money: ನೀವು ಮನೆಯಲ್ಲಿ ಇವುಗಳನ್ನು ಕಂಡ್ರೆ ನಿಮ್ಮ ಮನೆಗೆ ಹಣದ ಹೊಳೆಯೇ ಹರಿದು ಬರತ್ತೆ, ಭಗವಂತ ಹಣ ಕರುಣಿಸುತ್ತಿದ್ದಾನೆ ಅಂತ ಅರ್ಥ!

Money: ಈ ಜಗತ್ತಿನಲ್ಲಿ ಯಾರೇ ಇರಲಿ ಅವರು ಯಾವ ವಸ್ತುವನ್ನು ಅಥವಾ ಯಾವ ಮನುಷ್ಯರನ್ನ ಇಷ್ಟ ಪಡ್ತಾರೋ ಇಲ್ವೋ ಗೊತ್ತಿಲ್ಲ ಆದರೆ ಹಣವನ್ನು ಖಂಡಿತವಾಗಿ ಇಷ್ಟಪಟ್ಟೆ ಪಡುತ್ತಾರೆ. ಅದೇ ರೀತಿಯಲ್ಲಿ ಯಾರಿಗಾದರೂ ಭಗವಂತ ಧನವನ್ನು ಕರುಣಿಸುವಾಗ ಕೆಲವೊಂದು ಸೂಚನೆಗಳನ್ನು ನೀಡುತ್ತಾನೆ ಅನ್ನುವುದಾಗಿ ಶಾಸ್ತ್ರಗಳಲ್ಲಿ ತಿಳಿಸಲಾಗುತ್ತದೆ. ಹಾಗಿದ್ರೆ ಬನ್ನಿ ಹಣ ಬರೋದಕ್ಕಿಂತ ಮುಂಚೆ ಭಗವಂತ ನೀಡುವಂತಹ ಆ ಮುನ್ಸೂಚನೆಗಳು ಯಾವು ಅನ್ನೋದನ್ನ ತಿಳಿಯೋಣ.

ಹಣ ಬರುವುದಕ್ಕಿಂತ ಮುಂಚೆ ಭಗವಂತ ನೀಡುವ ಮುನ್ಸೂಚನೆಗಳು!

  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಲಭಾಗದ ಕಣ್ಣು ಹೊಡ್ಕೊಳೋದಿಕ್ಕೆ ಪ್ರಾರಂಭ ಮಾಡಿತು ಅಂದ್ರೆ ನಿಮ್ಮ ಜೀವನದಲ್ಲಿ ಧನಾಗಮನವಾಗಲಿದೆ ಎನ್ನುವಂತಹ ದೇವರ ಮುನ್ಸೂಚನೆಯೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ಖುದ್ದಾಗಿ ನಿಮ್ಮ ಜೀವನದಲ್ಲಿ ಆಗಮಿಸುತ್ತಿದ್ದಾಳೆ ಎಂಬುದರ ಅರ್ಥ ಇದಾಗಿದೆ.
  • ಒಂದು ವೇಳೆ ನಿಮ್ಮ ಮನೆಯ ಮುಂದೆ ತನ್ನಂತಾನಾಗಿ ಆಕ್ ಸಸ್ಯ ಬೆಳೆಯುತ್ತಿದೆ ಅಂದ್ರೆ ಅದರ ಅರ್ಥ ನಿಮ್ಮ ಮನೆಗೆ ಹಣದ ಆಗಮನವಾಗುತ್ತಿದೆ ಎಂಬುದಾಗಿ. ಇದರಿಂದ ಆದಾಯದ ಮೂಲಗಳು ಹೆಚ್ಚಾಗಬಹುದು ಅಥವಾ ಯಾವುದೋ ಕಡೆಯಿಂದ ಅನಿರೀಕ್ಷಿತವಾಗಿ ದೊಡ್ಡಮಟ್ಟದ ಹಣ ನಿಮ್ಮ ಕೈ ಸೇರಬಹುದು ಎನ್ನುವಂತಹ ಸೂಚನೆ ಕೂಡ ಆಗಿದೆ.
  • ಒಂದು ವೇಳೆ ನಿಮ್ಮ ಮನೆಯಲ್ಲಿ ಇದ್ದಕ್ಕಿದ್ದಂತೆ ಕಪ್ಪು ಇರುವೆಗಳು ಹೆಚ್ಚಾಗಿ ಕಾಣಿಸಿಕೊಂಡರೆ ಆ ಸಂದರ್ಭದಲ್ಲಿ ಕೂಡ ನಿಮ್ಮ ಮನೆಗೆ ಲಕ್ಷ್ಮಿ ಕಾಲಿಟ್ಟಿದ್ದಾಳೆ ಎಂಬುದಾಗಿ ಅರ್ಥ ಆಗಿರುತ್ತದೆ. ಅರ್ಧಕ್ಕೆ ಸಿಕ್ಕಿ ಹಾಕಿಕೊಂಡಿರುವ ಹಣ ಕೂಡ ನಿಮ್ಮ ಕೈ ಸೇರುವಂತಹ ಸಾಧ್ಯತೆ ಈ ಸಂದರ್ಭದಲ್ಲಿ ಹೆಚ್ಚಾಗಿದೆ.
  • ಸಾಮಾನ್ಯವಾಗಿ ಮನೆಯಲ್ಲಿ ಬೆಕ್ಕು ಮರಿ ಹಾಕಿದಾಗ ಅವುಗಳನ್ನು ಓಡಿಸುವುದನ್ನು ಮಾಡುತ್ತಾರೆ ಯಾವತ್ತೂ ಕೂಡ ಈ ರೀತಿ ಮಾಡೋದಕ್ಕೆ ಹೋಗಬೇಡಿ. ಇದು ಕೂಡ ಧನಲಕ್ಷ್ಮಿ ಆಗಮನದ ಮುನ್ಸೂಚನೆ ಆಗಿರುವ ಕಾರಣದಿಂದಾಗಿ ಇದನ್ನು ನೀವು ಸ್ವಾಗತಿಸಬೇಕು. ಇದರಿಂದಾಗಿ ಮನೆಯಲ್ಲಿ ಕೇವಲ ಹಣದ ಆಗಮನ ಮಾತ್ರವಲ್ಲದೆ ಶಾಂತಿ ಸಮೃದ್ಧಿ ಕೂಡ ಉಂಟುಮಾಡುತ್ತದೆ. ಒಂದು ವೇಳೆ ನಿಮ್ಮ ಮನೆಯ ಮಹಡಿಯ ಮೇಲೆ ಯಾವುದಾದರೂ ಪಕ್ಷಿ ಬೆಳೆ ಬಾಳುವಂತಹ ವಸ್ತುವನ್ನು ಬೆಳೆಸಿ ಹೋದರೆ ಖಂಡಿತವಾಗಿ ನಿಮ್ಮ ಮನೆಯಲ್ಲಿ ಏನೋ ಒಳ್ಳೆಯದಾಗಿರುತ್ತೆ ಅನ್ನೋದು ಖಾತ್ರಿ ಆಗಿರುತ್ತದೆ.
  • ಒಂದು ವೇಳೆ ಬಲಕೈಯ ಅಂಗೈಯಲ್ಲಿ ತುರಿಕೆ ಬರೋದಕ್ಕೆ ಪ್ರಾರಂಭವಾಯಿತು ಅಂದ್ರೆ ಅದು ಕೂಡ ಹಣ ಬರುತ್ತೆ ಅನ್ನೋದನ್ನ ಮುನ್ಸೂಚನೆಯ ರೂಪಕವಾಗಿ ದೇವರು ತೋರಿಸುವುದು ಅಂತ ಹೇಳ್ತಾರೆ. ಈ ಸಂದರ್ಭದಲ್ಲಿ ಕೆಲಸ ಇಲ್ಲದವರಿಗೆ ಕೆಲಸ ಸಿಗುವ ಮುನ್ಸೂಚನೆ ಅಥವಾ ವ್ಯಾಪಾರದಲ್ಲಿ ದೊಡ್ಡ ಮಟ್ಟದಲ್ಲಿ ಲಾಭ ಬರುವ ಮುನ್ಸೂಚನೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಈ ಮೇಲೆ ಹೇಳಿರುವಂತಹ ಮುನ್ಸೂಚನೆಗಳನ್ನು ಶಾಸ್ತ್ರಗಳ ಪ್ರಕಾರ ಹಣ ಬರೋದಕ್ಕಿಂತ ಮುಂಚೆ ದೇವರು ತೋರಿಸುತ್ತಾರೆ ಎಂದು ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತುಶಾಸ್ತ್ರವನ್ನು ನಂಬುವವರು ಖಂಡಿತವಾಗಿ ಈ ರೀತಿಯಾಗಿ ಹಣ ಬರುವುದನ್ನು ನಂಬಬಹುದಾಗಿದೆ ಯಾಕೆಂದರೆ ಶಾಸ್ತ್ರಗಳೇ ಈ ವಿಚಾರವನ್ನು ಖಾತ್ರಿಪಡಿಸುತ್ತವೆ.

Comments are closed.